ಮೂರು ಲವಲವಿಕೆ ಪದ್ಯಗಳು
- ಬೇಳೂರು ಸುದರ್ಶನ
ದಿನಚರಿ
ಸೂಳೆಗೊಂದು ಚಪ್ಪಲಿ
ಅವಳ ಕಾಟ ತಪ್ಪಲಿ
ಮಗನಿಗೊಂದು ಮಾರುತಿ
ಮಾರಲಿ ಅವ ಕೀರುತಿ
ಮಗಳು ಡಾಕ್ಟರಾದಳು
ನನ್ನ ಹೊಟ್ಟೆ ಕೊಯ್ದಳು
ಹೆಂಡತಿಗೋ ಬರೆದಿದೇನೆ
ತೋಟ-ಗದ್ದೆ-ಮನೆಗಳು
ತಮ್ಮ ದಂಧೆ ಮಾಡಿದ
ಹಿಸೆಯ ಕೊಡಲು ಕೇಳಿದ
ಅತ್ತೆಗೊಂದು ರವಿಕೆ ಹೊಲಿಸಿ
ಪುಟಪರ್ತಿಗೆ ಕಳಿಸಿದೆ
ಮೊಮ್ಮಗನಿಗೆ ಮುತ್ತುಕೊಟ್ಟು
ಚೆಕ್ಕೂ ಕೊಟ್ಟು ಹರಸಿದೆ
ಗೆಳೆಯರೆಲ್ಲ ಕೂಡಿ ಬಂದು
ಕುಡಿದು-ಕೊಂಡು ಹೋದರು
ಗೆಳತಿಯರೋ ಪತ್ರದಲ್ಲೆ
ಬಿಚ್ಚಿ ಬೆಚ್ಚಗಾದರು
ವ್ಯವಹಾರದ ಪಾಲುದಾರ
ಸಾಲಮಾಡಿ ಓಡಿಹೋದ
...........................
...........................
ಎಷ್ಟು ಹೀಗೆ ಹೇಳಲಿ ?
ಯಾವ ರೀತಿ ಬದುಕಲಿ ?
...........................
ಮತ್ತೆ ಸೂರ್ಯ ಹುಟ್ಟಿದ
ಹಲ್ಲುಜ್ಜಲು ಹೇಳಿದ
*
ಪದ್ಯ-2
ವೀ WITHERAWAY
ಚಾ ಪ್ರಿಯಾ
ಅಶಾಂತ ಹೃದಯಾ
ಬಾಳಿಗೊದಗಿದೆಯಾ?
ಬಾ ಮನಸಿಗೆ
ಎದೆಯ ಕನಸಿಗೆ
ಮಮತೆ ತೋರುವೆಯಾ?
ಓ ದಯಾ
ಮಯಾ ದೇವಾ
ಪ್ರೀತಿ ಕೊಡಿಸುವೆಯಾ?
ಹಾ! ಗಯಾ
ಅರೆ ಆಯಾ ಮಾತು
ಭಯವಿನ್ನೂ ಇದೆಯಾ ?
ಛೇ ಜಯಾ
ಮನ್ನಿಸುವೆಯಾ
ಕಣ್ಣು ತೆರೆಯುವೆಯಾ ?
ಹೇ ಮಾಯಾ
ಜಿಂಕೆಯ ಬಿಟ್ಟು
ರಾಮಾಯಣವಿದೆಯಾ?
ನೀ ನಯಾ
ಗರಾ ನಾನಿಲ್ಲಿ
ನಿನ್ನ ಜತೆಗಾರ
ಈ ಕ್ಷಯಾ
ಸಂವತ್ಸರದಲ್ಲಿ
ಹೊಸ ಹಾಡುಗಾರ
ಧೋ ಸುರಿವೆಯಾ
ಹಾ ಹರಿವೆಯಾ
ಹೋ ಹೊರಟೆಯಾ ಯಾ
ವಾಗ ಬರುವಿಯಾ
ಆಗ ತರುವೆಯಾ
ನೆನಪಿಗೊಂದು ಹನಿಯ ?
ವೀ WITHERAWAY
ಅಧರವೇ
ಅದರದೊಂದು ಗುರುತೆ ;
so ಸೋದರಿ
ನಮ್ಮ ಮಾದರಿ
ಒಂದು ಪುಟ್ಟ ಹಣತೆ
ಚಾ ಪ್ರಿಯಾ
ವಿಮುಕ್ತ ಹೃದಯಾ
ಬಾನಿನೊಳಗಿದೆಯಾ?
ಬರಿಯ ಮನಸಿಗೆ
ಹದಿಗನಸಿಗೆ
ಸುರಿಸಬೇಡ ಮಳೆಯ
*
ಪದ್ಯ-3
ಅವಳ ನೆನಪು
ನಾನು ದಿನಾ
ಅವಳ ನೆನಪಿನಿಂದಲೇ ಕೈತೊಳೆದುಕೊಳ್ತಿದೇನೆ
ಸದಾ ಅವಳು ಹೇಳ್ತಾಳೆ :
‘ನೆನಪಿನಿಂದ ಮೈತೊಳೆದ ನನ್ನ ಪ್ರಕೃತಿಯಲ್ಲಿ
ಸ್ವಚ್ಛ ಆಹ್ಲಾದತೆ.’
ಅವಳ ನೆನಪು
ತೊಟ್ಟು
ತೊಟ್ಟು
ತೊಟ್ಟಿಕ್ಕುತ್ತದೆ.
ಈಗವಳ ನೆನಪೇ
ನನ್ನ ಮೆಚ್ಚುಗೆಯ ಗಡಿಯಾರ. ನಾನೀಗ
ಏಕಾಂಗಿ ಸಮಯ ಸವೆಸುವ
ಹೊಸ ಸರದಾರ.
ಅವಳ ನೆನಪನ್ನು ಬೋರ್ನ್ವಿಟಾದಂತೆ
ದಿನಾ ಕುಡಿಯುತ್ತೇನೆ.
ನಾನು ಶಕ್ತಿಶಾಲಿ.
ಕೆಲವು ಸಲ
ಅವಳ ನೆನಪಿನ ಭಯಂಕರವಾದ ಶೀತದಿಂದ
ನರಳುವೆ. ಆ ರಾತ್ರಿ
ದೀಪಗಳನ್ನು ಆರಿಸದೆ ಒಬ್ಬಂಟಿ
ಹೊರಳುವೆ.
ಮರುದಿನ
ಅವಳ ನೆನಪಿನಿಂದ ಹಲ್ಲುಜ್ಜುವೆ
ಅವೀಗ ಹೆಚ್ಚು ಸುರಕ್ಷಿತವಾಗಿವೆ.
ಅವಳ ನೆನಪು
ಆರಂಭಕ್ಕೆ ಅತ್ಯುತ್ತಮ
ಬೆಳವಣಿಗೆಗೆ ಅನುಪಮ..
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications