ತಿಳಿದಿಲ್ಲ ನಮಗ ಪೂರಾ
- ಹೂಲಿ ಶೇಖರ್
ಕುಂತ ಮಂದಿ ಸಭಾದಾಗ ಎದ್ದ ನಿಂತ ಹೇಳತೀವಿ
ಝಲ್ಲಬಿಟ್ಟ ಕೇಳರಿ ನೀವು ಹಕೀಕತ್ತಾ //ಗೀಗೀ...//
ಭಾರತಾಂಬಿ ಮಕ್ಕಳು ನಾವು ಎಬಡರಂಗ ಇರತೀವಿ
ತಿಳಿದಿಲ್ಲ ಸಾರ ನಮಗ ಪುಟ್ಟ ಪೂರಾ //ಪಲ್ಲ//
ವರುಸ ತುಂಬದರೊಳಗ ಹೊರಸಬದಲಿ ಮಾಡತೀರಿ
ಮನೀ ತುಂಬ ಮಕ್ಕಳಾ ನೋಡರಿ ತಗಣೀ ಹಂಗಾ/
ಒಳ್ಳೇದಲ್ಲ ತಗೀರಿ ಹೆಚ್ಚೇತಿ ಜೀವ ಸಂಖ್ಯೆ ಭೂಮಿ ಮ್ಯಾಗಾ...//ಗೀಗೀ...//
ಭಾರತಾಂಬಿ ಮಕ್ಕಳು ನಾವು ಅವಸರ ಮಾಡಿ ಹಡೀತೀವಿ
ವರುಸಕ್ಕ ಜೋಡಿ ಜೀವ ಠರರರಾ //
ವಿಜ್ಞಾನದ ಕಾಲದಾಗ ಅಜ್ಞಾನದ ಮಾತ್ಯಾಕ
ವಿದ್ಯೆಯಿಂದ ದೂರಬ್ಯಾಡ ಅಲ್ಲೆ ಕುಂತೀರಿಯಾಕ /
ಮುಗಲಾನ ಹನಿ ನೀರು ಮುತ್ತು ಆಗಿ ಬುಡುಕ
ಹುಟ್ಟಿದ್ದು ತಿಳೀಲಿಲ್ಲ ಕೋಡಂಗಿ ಆಗೇವಿ ಕಡೀತನಕ //
ಭಾರತಾಂಬಿ ಮಕ್ಕಳು ನಾವು ಬ್ಯಾಡ ಸಾಲಿ ಅಂತೇವಿ
ಮನಿ ಹುಡುಗರ ಕಳಸೇವಿ ಹೊಲಮನಿ ಕೆಲಸಕ್ಕಾರಾ//
ಆಡು ಮಕ್ಕಳ ಮ್ಯಾಲ ಹಾಕಬ್ಯಾಡ್ರಿ ಮನೀಭಾರ
ಹೊಸಾ ಗಾಳಿ ಹಬ್ಬಿ ಬಂದು ಕತ್ತಲ ಓಡಿಸೇತಿ
ಈ ಸ್ಯಾಡಿ ಪಾರಾಗತಾರು ಲೋಕದ ವ್ಯವರದಾಗ//
ಭಾರತಾಂಬಿ ಮಕ್ಕಳು ನಾವು ಎಬಡರಂಗ ಇರತೀವಿ
ತಿಳಿದಿಲ್ಲ ಸಾರ ನಮಗ ಪುಟ್ಟ ಪೂರಾ//
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications