ಮಾಯೆ : ಪ್ರೀತಿಗೊಂದು ವ್ಯಾಖ್ಯಾನ
- ರಘುನಾಥ್.ಪಿ.ಜಿ, ಬೆಂಗಳೂರು
[email protected]
ಮಾಯೆಯೇ ಪ್ರೀತಿಯಾ
ಪ್ರೀತೀ ನೀ ಮಾಯೆಯೇ ಆದರೂ
ಮಾಯೆಯೇ ಪ್ರೀತಿಯಾದರೂ
ಬದುಕಿಗೆ ಈ ಪ್ರೀತಿಯ
ಮಾಯೆಯೇ ಚಿದಂಬರ ರಹಸ್ಯ !
ಪ್ರೀತೀ ನಿನಗಿಲ್ಲ ಯಾವುದೂ
ಅಡೆತಡೆಗಳ ಅಸಾಧ್ಯ
ಪ್ರೀತೀ ನೀನೊಲಿದರೆ ಜೀವನದ
ಒಂದೊಂದು ಕ್ಷಣವೂ ಅಮೃತಘಳಿಗೆ,
ನೀ ಮುನಿದರೆ ಆಗದಿರದೇ ಬದುಕಿನ
ಒಂದೊಂದು ಕ್ಷಣವೂ ವಿಷಘಳಿಗೆ !
ಪ್ರೀತೀ ನೀ ಬದಲಿಸಬಲ್ಲೆ
ಕ್ಷಣದಲ್ಲಿ ಎಲ್ಲರ ಹಣೆಬರಹ,
ಮಾಡಬಲ್ಲೆ ಬದುಕ ಬಲು ಮಧುರ,
ಪ್ರೀತೀ ನೀ ಹೋಗಬಲ್ಲೆ
ಕ್ಷಣದಲ್ಲಿ ದೂರ ದೂರ ದೂರ
ಮಾಡಬಲ್ಲೆ ಬದುಕ ಬಲು ಘೋರ !
ಪ್ರೀತೀ ನೀ ಸ್ವಾರ್ಥಿಯಲ್ಲ,
ಅದಕ್ಕೆ ನೀನಿರೋ ಒಂದೊಂದು
ಹೃದಯಾನೂ ಚುಕ್ಕಿಯಂತೆ ಬೆಳಗಬಲ್ಲದು
ನಿನ್ನಲಿಹುದು ಎಲ್ಲರ ಎಲ್ಲ ಪ್ರಶ್ನೆಗಳಿಗೂ
ಉತ್ತರ, ನಿನ್ನ ಭಾಷೆಯಾಂದೇ ಈ
ಜಗದ ಪ್ರತೀ ಹೃದಯಾನ ಅರಿಯಬಲ್ಲದು !
ಪ್ರೀತೀ ನಿನ್ನ ಬೆಲೆಕಟ್ಟಿ ಕೊಳ್ಳಲಾದೀತೇ
ಹಣಕೊಟ್ಟು ಉಳಿಸಿ, ಬಳಸಲಾದೀತೇ,
ಕೊಟ್ಟರೂ ನಿನಗೆ ಮುತ್ತು ರತ್ನ
ನೀಬರಲಾರೆ, ನಿನಗೇ ನೀನೇ ಬೆಲೆ,
ನೀನೆ ನೆಲೆ, ನೀನೇ ಸೆಲೆ, ಅದಕೆ
ನಾ ಹೊರಟಿರುವೇ ನಿನ್ನಯ ಜೊತೆ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications