‘ನನ್ನ ಕನಸಿನ ಊರು’
- ವೀ. ಪ. ಬಳಿಗಾರ್ (ಐ ಎ ಎಸ್ ಅಧಿಕಾರಿ , ಬೆಂಗಳೂರು)
ನೋಟಿಗೆ ಓಟುಗಳ ಮಾರಾಟವಿಲ್ಲ
ಹೆಂಡ ಸರಾಯಿ ಹೊಳೆ ಹರಿಯುವುದಿಲ್ಲ.
ಓಣಿ-ಓಣಿಗಳ ಮಧ್ಯ ಕಂದಕಗಳಿಲ್ಲ
ಮಂದಿರದ ಪ್ರಾರ್ಥನೆ- ಜಾಗಟೆಗಳು
ಮಸೀದಿಯ ನಮಾಜು- ಮೈಕುಗಳು
ದ್ವೇಷ ಬಿತ್ತುವುದಿಲ್ಲ-ಶಾಂತಿ ಕದಡುವುದಿಲ್ಲ.
ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳ ಬಲಿಯಿಲ್ಲ
ಮಾಟ-ಮಂತ್ರಗಳಿಗೆ ಎಳ್ಳಷ್ಟು ಒಲವಿಲ್ಲ.
ನನ್ನೂರಿನ
ಬಾಲ-ಬಾಲೆಯರು
ಶಾಲೆ ಬಿಟ್ಟು ಕೂಲಿ ಮಾಡುವುದಿಲ್ಲ
ಆಟ-ಪಾಠ ಓಟಗಳಲಿ ಹಿಂದೆ ನೋಡಿಲ್ಲ
ಶಿಕ್ಷಕ- ಶಿಕ್ಷಕಿಯರು
ಕಲಿಸುವುದನು ಬಿಟ್ಟು ಕಾದಾಡುವುದ ಮಾಡುವುದಿಲ್ಲ
ಶಾಲೆಗಳ ಹಂಚುಗಳು ಹಾರಿ ಹೋಗಿಲ್ಲ.
ಗೋಡೆಗಳು ಬಿರುಕು ಬಿಟ್ಟಿಲ್ಲ.
ವೈದ್ಯ-ದಾದಿಯರು
ರೋಗಿಗಳು ರಕ್ತ ಹೀರುವುದಿಲ್ಲ
ಹೆಣದ ಕಿಸೆಗೆ ಕೈ ಹಾಕುವುದಿಲ್ಲ
ಮಾತ್ರೆಗಳ ಮಾರಾಟ ಮಾಡುವುದಿಲ್ಲ.
ವ್ಯಾಪಾರಿಗಳು
ಅನ್ಯಾಯದ ತಕ್ಕಡಿ ತೂಗುವುದಿಲ್ಲ
ಗ್ರಾಮ ಲೆಕ್ಕಿಗ
ರೈತ-ರೈತರ ನಡುವೆ ಜಗಳ ಹಚ್ಚುವುದಿಲ್ಲ.
ಊರ ಪಂಚಾಯತಿಯಲಿ
ಗ್ರಾಮ ಸಭೆಗಳಿಲ್ಲದೆ ಯೋಜನೆಗಳ ರಚನೆಯಿಲ್ಲ
ನನ್ನೂರಿನಲ್ಲಿ
ಬಡವರಿಗೆ ಕೊಟ್ಟ ಮನೆಗಳು ವರುಷಗಳಾದರಿನ್ನೂ ಮುರಿದು ಬಿದ್ದಿಲ್ಲ
ಎಮ್ಮೆ-ಹಸುಗಳು ಬರಡಾಗಿ ನಿಂತಿಲ್ಲ.
ಬೀದಿ ದೀಪಗಳು ಹಗಲಿನಲಿ ಉರಿಯುವುದಿಲ್ಲ
ನಲ್ಲಿ ನೀರು ಪೋಲಾಗಿ ಹರಿಯುವುದಿಲ್ಲ
ಕೂಲಿಗಾಗಿ ಬಂದ ಕಾಳು
ಕಾಳಸಂತೆ ಸೇರುವುದಿಲ್ಲ
ಬರಪರಿಹಾರದ ಕೆರೆ-ಕಟ್ಟೆ , ಒಡ್ಡುಗಳು
ಭಾರೀ ಮಳೆಗೂ ಒಡೆದು ಹೋಗುವುದಿಲ್ಲ
ನನ್ನೂರಿನ
ಮಕ್ಕಳು
ಬೀದಿ ಬದಿಯೇ ಹೊಲಸು ಮಾಡುವುದಿಲ್ಲ
ಮಹಿಳೆಯರು
ಕತ್ತಲಾಗುವವರೆಗೆ ಕಾಯಬೇಕಿಲ್ಲ
ರಾತ್ರಿ ಬಸ್ಸು ಬಂದರೆ ಎದ್ದು ನಿಲ್ಲಬೇಕಿಲ್ಲ.
ಯುವತಿಯರು
ಸೈಕಲ್ ಏರಿ
ಕಾಲೇಜಿಗೆ ಹೋಗಲು ಹೆದರುವುದಿಲ್ಲ
ವರದಕ್ಷಿಣೆ ಬೇಡುವ ಭಿಕ್ಷುಕರ ವರಿಸುವುದಿಲ್ಲ
ಸ್ತ್ರೀ ಶಕ್ತಿ ಸಂಘಗಳು
ಉಳಿತಾಯ ಆದಾಯ ಸಂಘಟನೆಯಲಿ ಹಿಂದೆ ಬಿದ್ದಿಲ್ಲ.
ರೈತರು
ಹೊಸ ವಿಧಾನ ಕೃಷಿಯಲಿ ಕೈಯಾಡದೇ ಇಲ್ಲ
ಹನಿ ನೀರನು ಹೊಲದಾಟಿ ಬಿಡುವುದೇ ಇಲ್ಲ.
ಕಂಬಾರ, ಕುಂಬಾರ, ನೇಕಾರರೆಲ್ಲ
ಕಾಯಕ ಘನತೆ ಕೌಶಲ್ಯಗಳ ಮರೆತಿಲ್ಲ.
ನನ್ನೂರಿನಲ್ಲಿ
ಕೆರೆ ಅಂಗಳ ಗೋಮಾಳಗಳ ಒತ್ತುವರಿಯಿಲ್ಲ
ಗುಂಡು ತೋಪಿನ ಮರಗಳು ಸಾಮಿಲ್ಲು ಸೇರಿಲ್ಲ
ಹಳ್ಳ-ಕೊಳ್ಳ ಮಡುವುಗಳು ಬತ್ತಿ ಹೋಗಿಲ್ಲ
ಹಕ್ಕಿ ಪಕ್ಷಿಗಳು ದೂರ ಹಾರಿ ಹೋಗಿಲ್ಲ
ಗುಬ್ಬಚ್ಚಿಗಳ ಚಿಂವ್ಗುಡಿಕೆ ಮಾಯವಾಗಿಲ್ಲ.
ಕುಸ್ತಿ ಕ್ರೀಡೆ ಸ್ಪರ್ಧೆಗಳಿಗೆ ಲೆಕ್ಕವಿಲ್ಲ.
ಜಾನಪದ ಹಾಡು ದೊಟ್ಟಾಟಗಳಿಗೆ ಕೊರತೆಯಿಲ್ಲ
ಆಧ್ಯಾತ್ಮ ಗೋಷ್ಠಿಗಳಿಗೂ ಬರವಿಲ್ಲ
ಬೀರು ಬಾರುಗಳಿಗೆ ಮಾತ್ರ ಪ್ರವೇಶವಿಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications