ಯಾಕ್ ಹೀಗ್ ಮಾಡ್ತೆ?
;?
- ಕೆ.ವಿ.ನಂದಕುಮಾರ್, ನಂಜನಗೂಡು.
[email protected]
ನಿನ್ನ ಇಷ್ಟೆತ್ತರಕ್ಕೆ ಬೆಳೆಸಲು
ಬದುಕನು ಸವೆಸಿದ ರೀತಿ,
ಸ್ಕೂಲ್ ಫೀಸು, ಸ್ಲೇಟು, ಬಳಪ, ಪುಸ್ತಕ,
ಜಾಮಿಟ್ರಿ ಬಾಕ್ಸು, ಯೂನಿಫಾರಮ್ ಬಸ್ ಫೇರ್,
ನೀ ಇಷ್ಟಪಟ್ಟ ತಿಂಡಿ ತಿನಿಸು,
ಎಲ್ಲಾ ಅಂದರೆ ಎಲ್ಲಾ ಒದಗಿಸಲು
ಅಪ್ಪ ಹೆಣಗಾಡಿದ ಪರಿ
ನಿನಗೆ ನೆನಪಿಲ್ಲವೇನೆ?
ನಿನ್ನ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಮತ್ತು
ಸಿ.ಇ.ಟಿ ಪರೀಕ್ಷೆಗಳ ದಿನಗಳಲ್ಲಿ
ಅಪ್ಪನಿಗಿದ್ದ ಆಂತಕ, ನಿನ್ನ ಪ್ರತಿ
ಗೆಲುವಿನೆಡೆಗೆ ಆತನಿಗಿದ್ದ ಒಲವು,
ಮುಂದೊಮ್ಮೆ ಎಂದಾದರೂ
ನೀ ಊರುಗೋಲಾಗಬಹುದು ಎಂದೆನಿಸಿ
ನೀ ಚಿಗುರಿಸಿದ ಆಸೆ ಮರೆತೇ ಹೊಯಿತೆ?
ಹೃದಯದಿ ಸೆಳಕು, ಸೊಂಟನೋವುಗಳಿಗೂ
ಸೋಲದೆ ಅಂದೊಂದು ದಿನ ಅಮ್ಮ
ಕಷ್ಟ ಪಟ್ಟು ಸುಟ್ಟು ಕೊಟ್ಟ ರುಚಿ
ರಾಗಿ ರೊಟ್ಟಿಗಳಿಗೆ ಇಂದಿನ ನ್ಯೂಡಲ್ಸ್,
ಪಿಜಾ ಸರಿಸಾಟಿಯಾಗ ಬಲ್ಲದೇನೆ ಹುಡುಗಿ?
ಹದ್ದುಗಳಿಗೆದರಿ ರೆಕ್ಕೆಗಳಡಿಯಲ್ಲಿ
ಮರಿಗಳನಡಗಿಸುವ ಕೋಳಿಯ ಶೈಲಿ, ಅಮ್ಮನ
ಬದುಕು ಮತ್ತು ನಿನ್ನ ಇಂದಿಗೂ ಬೆಳೆಸುವ ರೀತಿ!
ಅವಳ ಪ್ರೀತಿ ಅನನ್ಯ, ಮರೆತೆಯೇಕೆ ಹುಡುಗಿ?
ಅಂದು ನೀ ಕೇಳಿದೆಯಲ್ಲಾ ಎಂಬ ಕಾರಣಕ್ಕೆ
ಹುಂಡಿಯಾಡೆದು ಹಣ ಹೊಂದಿಸಿ
ತಂದುಕೊಟ್ಟ ಆ ಹೀರೋ ಪೆನ್ಗಿಂತ
ಅವನ್ಯಾರೋ ನಿನ್ನ ಗೆಳೆಯ ಗುಟ್ಟಾಗಿ
ತಂದುಕೊಟ್ಟ ಮೊಬೈಲ್ ಎಂದಿಗಾದರೂ
ಅಮೂಲ್ಯವಾದೀತೇನೆ?
ಹುಟ್ಟಿನಿಂದ ಅಪ್ಪ ತೋರುವ ಪ್ರೀತಿ, ಆದರಕ್ಕಿಂತ,
ನಿನ್ನವನ ಇತ್ತೀಚಿನ ಪ್ರೀತಿ
ಎಂದಿಗೂ ಮಿಗಿಲಾಗದು ಅನ್ನಿಸಲೇ ಇಲ್ಲವೇನೆ?
ಬಾನೆತ್ತರಕ್ಕೆ ನೀ ಬೆಳೆಯುತ್ತಾ ಹೋದಂತೆಲ್ಲಾ,
ಅಪ್ಪ ಹೇಳುವ ತಿಳಿವಳಿಕೆ ಮಾತುಗಳು,
ಗಿಳಿಯಂತಾರಾಡುವ ನಿನಗೆ ಅರಿಯಲು
ಅದ್ಯಾವ ಅರಿವಳಿಕೆ-ಮಂಪರು ಅಡ್ಡಿ ಬಂದವು ?
ಹೊಸ ತಾರುಣ್ಯ, ರೂಪ, ಆಧುನಿಕ ಬದುಕು,
ಉಡುಗೆ-ತೊಡುಗೆ, ಮತ್ತು ಹೊಸ ಹೊಸ ಅವಿಷ್ಕಾರ,
ಹೆತ್ತವರೆಡೆಗಿನ ಕಾಳಜಿ ಕಡಿತಗೊಳಿಸಿಬಿಟ್ಟಿತೆ?
ಅವರುಗಳಿಗೆ ನೀ ಬಗೆದ ಈ ಪರಿ ದ್ರೋಹಕ್ಕಿಂತ
ಹೆಚ್ಚಿನದೇನಿದೆ? ಚೇತರಿಸಿಕೊಳ್ಳಲು
ಬೇಕಾಗಬಹುದು ಅವರಿಗೆ ಮತ್ತೊಂದು ಮರು ಹುಟ್ಟು!
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications