ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನೆಗೆ ಮಾರಿ...
-
ಆನಂದ್
ಜಿ.,
ಬನವಾಸಿ
ಬಳಗ,
ಬೆಂಗಳೂರು
[email protected]
ಕಾರ್ಗಿಲ್ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ... ಲಾಥೂರ್, ಕಿಲಾರಿಯಲೊಮ್ಮೆ
ಕಛ್, ಭುಜ್ನಲ್ಲಿ ಮತ್ತೊಮ್ಮೆ
ಮನೆ ಮುರಿದಾಗ
ಮಿಡಿದ ಕನ್ನಡ ಮನವೇ ...
ನಿನ್ನೆ ... ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ ...
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ ... ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ... ಕೃಷ್ಣೆ ಉಕ್ಕಿಹುದು,
ಭೀಮ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು ಕಡೆಗೆ
ಹೆತ್ತ ಕಂದಮ್ಮಗಳೂ ... ಕೃಷ್ಣಾರ್ಪಣ ...
ಇಂದು ... ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ
ಬಟ್ಟೆ
ಸೈನ್ಯದ
ಜನಕೆ
ಹಣ,
ಸುನಾಮಿ
ಪೀಡಿತರಿಗೆ
ಚಪಾತಿ
ಅನ್ನ.
ನಿನ್ನಯ
ಮನೆಯ
ಜನಕ್ಕೆ
??
ಕಡೆ
ಪಕ್ಷ
ಒಂದು
ಹನಿ
ಕಣ್ಣೀರು
?
mp;#3210;ರಿಗೆ
ಉಪಕಾರಿ
ಇದು
ಕನ್ನಡಿಗನ
ನಿಜ
ರೂಪವೆಂದು
ಬೆಚ್ಚಿಹಳು
ಭುವನೇಶ್ವರಿ
...
ನಿನ್ನ
ನಿರಭಿಮಾನ
ನಿರ್ಲಜ್ಜತನ,
ನಿನ್ನದೇ
ಜನಗಳ
ಕಷ್ಟಕಾಲದಲ್ಲೂ
ತಟಸ್ಥವಾಗಿಹ
ನಿನ್ನ
ಗುಣ,
ಮೈಮನ
ತುಂಬಿಹ
ನಿಷ್ಕಿೃಯತನ
ನಿನ್ನಂತಹ
ಮಕ್ಕಳನ್ನು
ಹಡೆದವ್ವೆ
ಧನ್ಯ
!!!
Comments
Story first published: Monday, February 3, 2003, 5:30 [IST]