ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರ್ಮಿಳಾ

By Staff
|
Google Oneindia Kannada News
ಹೇ ರಾಮಾ...
ಸೀತೆಯ ನೆನೆದು ನೀ ನೊಂದಾಗ
ದೂರವಿದ್ದ ನನ್ನ ನೋವು
ನಿನಗೆ ತಿಳಿಯಲಿಲ್ಲವೇ?

ಶಬರಿಯು ನಿನ್ನ
ಬರುವಿಕೆಗೆಂದು ಕಾದ
ಅರಿವು ನಿನಗಾದಾಗ
ನನ್ನ ನೆನಪಾಗಲಿಲ್ಲವೇ?

ಅಹಲ್ಯೆಯ ಮೆಟ್ಟುವ
ವೇಳೆಯಲ್ಲಿಯೂ ಕೂಡ
ನನ್ನ ವಿರಹದ ಬೇಗೆ
ನಿನ್ನ ತಟ್ಟಲಿಲ್ಲವೇ?

ಸೀತೆಯಂತೆ ನಾನೂ ಕೂಡ
ಸುಡುವ ಬೆಂಕಿಯಲ್ಲಿ ಮಿಂದು
ನಿಂತು ನಿನ್ನ ಇದಿರಿನಲ್ಲಿ
ನ್ಯಾಯವನ್ನು ಬೇಡಲೇ?

ನೋವಿನಲ್ಲೇ ಕಳೆದ ದಿನಕೆ
ಬದಲಿ ನೀಡಬಲ್ಲೆಯಾ?
ನನಗಿತ್ತ ಶಿಕ್ಷೆಯ ಹಿಂದಿನ
ಕಾರಣವ ಹೇಳ ಬಲ್ಲೆಯಾ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X