ಕೊನೆಗೊಂದು ಬಾರಿ ಕಣ್ಣು ಕೂಡಿಸು
(ಗಜಲ್)
- ತುರುವೀಹಾಳ ಚಂದ್ರು
ಸಖಿ, ನನ್ನ ಜೀವ ನುಂಗಿ ಮಲಗಿರುವ ನಿನ್ನ ಬೈತಲೆಯಲಿ ಚಂದ್ರನನು ಮುಕ್ಕಾಗಿಸಿದೆ ಬಿದಿಗೆ
ಹಳೆಯ ಪುಸ್ತಕದಂಥ ಅವ್ವನ ಸೀರೆಯ ಕಮ್ಮನೆ ವಾಸನೆಗೆ ಹೇಗೆ ಹಿಗ್ಗುತಿದೆ ಜೀವ
ಒಡೆದ ಬಳೆಚೂರಿನಲಿ ಕಳದು ಹೋಗಿರುವ ಅವಳ ಕನಸನ್ನು ಮರಳಿ ದೊರಕಿಸಿಕೊಡು ದೇವ
ಯಾರು ಕಳಿಸಿದರೆಂದು ಹೆಸರು ಹೇಳದೆ ಹಾರಿ ಹೋಯಿತು ಮುಂಜಾನೆ ಮನೆ ಮೇಲೆ ಕೂತಿದ್ದ ಹಕ್ಕಿ
ಇರುಳ ತೇರನಿಳಿದು ನೀನು, ಬಲಗಾಲಿಲೇ ನನ್ನೆದೆ ತುಳಿದು ಚಂದ್ರಮನ ತಿಂದ ತುಟಿಯಲ್ಲಿ ಮುಗುಳ್ನಕ್ಕೆ
ಬಿಂಬ ತೋರುವ ಕನ್ನಡಿಯನಾರೋ ಕಸಿದರೆಂದು ನಿನಗೇಕೆ ಸಖಿ, ನನ್ನ ಕಣ್ಣು ಕಳೆಯುವ ಮುನಿಸು
ಏಳು ಬೆಟ್ಟಗಳಾಚೆಯ ಪ್ರಾಣಪಕ್ಷಿ ನೀನು : ಆ ಕಣ್ಣೊಳಗೆ ಜ್ವಲಿಸುತಿದೆ ಗಾಯಗೊಂಡಿರುವ ನನ್ನ ಮನಸು
ಅಡಿ ಇಟ್ಟಲ್ಲಿ ನುಡಿ ಉಣಿಸುವ ಎಷ್ಟೋ ಜೀವಗಳ ಹರಕೆ ನನ್ನ ಬೆನ್ನ ಹಿಂದಿದೆ
ಬರೀ ನೋಟದಲಿ ನೀನು ಬಿಡಿಸಿ ಹೋಗಿರುವ ನೋವಿನ ಹಾದಿ ಕರಗದೆ ಈ ಕಣ್ಣ ಮುಂದಿದೆ
ನಿರಾಕರಣೆಯ ನಂತರವೂ ನಾ ನಿನ್ನ ಬಯಸಿದರೆ ನನ್ನ ರಕ್ತ ನಾನೇ ಕುಡಿದು ಬದುಕಿದಂತೆ
ಎದೆಯಲೊಂದು ಮಮತೆ ಹಣತೆ ಇಲ್ಲದ ಜನರ ನಡುವೆ ನೀನೆಂತು ಉಸಿರಾಡುವೆ, ನನಗಿರುವ ಚಿಂತೆ
ನನ್ನೆದೆಯ ಕುಲುಮೆಯ ಮೇಲೆ ಉರಿ-ಹುರಿದ ಕನಸುಗಳು ಸಖಿ, ಮೌನದಿಂದಲೆ ಮಣ್ಣುಗೂಡಿಸು
ದೇವರನು ಎದುರಿಸಲಾದರೂ ಈ ಪಾಪಿಯ ನೋಟದೊಂದಿಗೆ ಕೊನೆಗೊಂದು ಬಾರಿ ನೀ ಕಣ್ಣು ಕೂಡಿಸು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications