ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ಷಣಮಾತ್ರ ಫಲಿಸಲಿ ಸ್ವಂತ ನೋವೊಂದು....
- ಲಲಿತಾ ಸಿದ್ಧಬಸವಯ್ಯ
ಯಾವ ಮತ್ಸ್ಯವೂ ನುಂಗದಿರಲಿ
ಮತ್ತೆಂದೋ ನಿನ್ನೊಡ್ಡೋಲಗದಲಿ ಪ್ರತ್ಯಕ್ಷನಾಗುವ ದೂತ
ನ್ಯಾಯ ದಂಡದ ಇದಿರು ಅದನೊಡ್ಡದಿರಲಿ
ಬಿಡುವಿರದ ರಾಜಕಾರಣದಲಿ ದಣಿದು ನೀನೊರಗಿರಲು
ಕಾಡು ಹುಡುಗಿಯ ಹುವ್ವಜಡೆ ಕಾಡದಿರಲಿ
ಬಿದಿರು ಮೆಳೆಯಡಿಯಲ್ಲಿ ಕುಮುದಿನಿಯ ಕೊಳದಲ್ಲಿ
ನಮಗೆ ನಾವೇ ಅಚ್ಚರಿಯಾದದ್ದು ಹೊಚ್ಚ ಹೊಸದಾಗೇ ಉಳಿದು
ದಕ್ಷಿಣದ ಮಳೆಗಾಳಿ ಮಣ್ಣ ವಾಸನೆ ತರಲು
br/>
ಮರಿದುಂಬಿಗಳುಕಿ ಬಿದ್ದದ್ದು ನೆಟ್ಟಗೆ ಹುಲಿಯ ಬಾಯಾಳಗೆ
ತಿಂದು ತೇಗುತಿರಲಿಲ್ಲ , ಕೀಟವಾದರೋ ಕುಟುಕಿ ಮರೆಯಾಗುತ್ತಿತ್ತು
ಇರಲಿ ಬಿಡು, ಅಂದುಕೊಂಡದ್ದೆಲ್ಲ ಅಂತೆಯೇ ಜರುಗಿದರೆ
ಬದುಕೆನ್ನುವರೆ ಅದನು, ಬರೆದ ಕಥೆ ಮಾತ್ರ
ಸಿರಿಕಂಠವಿರಲಿ, ಸೀಳುದನಿಯಿರಲಿ ನನ್ನ ಹಾಡನು
ನಾನೇ ಕಲಿತು, ಕಲಿಸುವೆನು ಚರಣಕ್ಕೂ ಪಲ್ಲವಿಯ ಅರ್ಥ
ಬರೆಯದಿರನೇ ನಾಳೆಗಳ ನಾಟಕಕಾರ ಇಂಥದೇ ಇನ್ನೊಂದು
ಆಗ br/>ಮತ್ತು ಶಾಶ್ವತ ರದ್ದಾಗಲಿ ಮಾರೀಚಾಶ್ರಮದ ಮರುಭೇಟಿ ದೃಶ್ಯ
ಕಳೆದುಕೊಳ್ಳುವುದೊಂದೇ ನಾ ಕಲಿತ ಗಣಿತ, ರಿಕ್ತಹಸ್ತಕ್ಕೆಂತ ಭವಿಷ್ಯದ ಭಾಷ್ಯ
(‘ಸಂಚಯ’ ಕಾವ್ಯಸ್ಪರ್ಧೆಯಲ್ಲಿ ಬಹುಮಾನಿತ ಕವನ)
Comments
Story first published: Monday, February 3, 2003, 5:30 [IST]