Get Updates
Get notified of breaking news, exclusive insights, and must-see stories!

ಸುನಾಮಿ

ನಾನು ನಾನೇ ಎಂದು ಅಟ್ಟಹಾಸದಿ
ಮೆರೆಯುತ್ತಿದ್ದ ಮನುಜನ ಕಣ್ಣ ತೆರೆಸಲು
ಬಂದಾನೊಬ್ಬ ದಾನವ ಮುಂಜಾವಿನ
ತಂಪು ವೇಳೆಯಲಿ ಕಡಲ ತೀರದಿ ಭುಗಿಲೆದ್ದು
ಅಡ್ಡ ಬಂದವರನ್ನೆಲ್ಲಾ ತನ್ನೊಡಲಲಿ ಸೆಳೆಯುತ !

ಏನು ಹೇಳಲಿ ಅವನ ಅಟ್ಟಹಾಸ, ಅಬ್ಬರ
ಅಬ್ಬಬ್ಬಾ, ಅವನಿಗಾರು ಸರಿಸಾಟಿ ಆ ದಿನ,
ಮಿಂಚು ಗುಡುಗಿಗೂ ಸೆಡ್ಡುಹೊಡೆದು ನಿಲ್ಲುವಂತ
ಧೈರ್ಯ, ನಾವ್ಯಾರೂ ಕಂಡರಿಯದ ಆ ಮರ್ಮಾ
ಅವನಲ್ಲಿರಲಿಲ್ಲ ನಮ್ಮಲ್ಲಿನ ಭೇದಭಾವ !

ಕಣ್ಣು ಮುಚ್ಚಿ ತೆರೆಯುವುದರಲಿ ತಿಂದು
ತೇಗಿದ ಸಾವಿರಾರು ಕಂದಮ್ಮಗಳ, ತಾನೇ ಹೆತ್ತ
ಮಕ್ಕಳ ತಾನೇ ನುಂಗಿದಂತಿತ್ತು ಅವನ ಭಾವ,
ಇರಲಿಲ್ಲ ಅವನಲ್ಲಿ ಪಶ್ಚಾತಾಪದ ಭಾವ
ಮನುಜನಲ್ಲಿಲ್ಲದ್ದು ನನಗೇಕೆ ಎಂದು !

ಸಾವಿರಾರು ಜೀವಗಳು ಲೀನವಾದವು ಮಣ್ಣಾಗಿ
ಮುಂದೆಂದೂ ಬರದಿರಲಿ ಆ ದುರ್ಗಮ ದುರಂತ
ಏನ ಮಾಡಬಲ್ಲೆವು ನಾವು ಆ ದೇವನಣತಿಯ ಮುಂದೆ
ಸಾಗೋಣ ಮುಂದೆ ನಮ್ಮ ಆರ್ಭಟಗಳ ಮೆಟ್ಟಿಮೀರಿ
ಅದುವೇ ನಮಗಿಹುದೊಂದು ದಾರಿ ಈ ಹೊಸವರುಷದಲಿ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+