ಸುನಾಮಿ
- ಪಿ.ಜಿ. ರಘುನಾಥ್, ಬೆಂಗಳೂರು.
[email protected]
ಮೆರೆಯುತ್ತಿದ್ದ ಮನುಜನ ಕಣ್ಣ ತೆರೆಸಲು
ಬಂದಾನೊಬ್ಬ ದಾನವ ಮುಂಜಾವಿನ
ತಂಪು ವೇಳೆಯಲಿ ಕಡಲ ತೀರದಿ ಭುಗಿಲೆದ್ದು
ಅಡ್ಡ ಬಂದವರನ್ನೆಲ್ಲಾ ತನ್ನೊಡಲಲಿ ಸೆಳೆಯುತ !
ಏನು ಹೇಳಲಿ ಅವನ ಅಟ್ಟಹಾಸ, ಅಬ್ಬರ
ಅಬ್ಬಬ್ಬಾ, ಅವನಿಗಾರು ಸರಿಸಾಟಿ ಆ ದಿನ,
ಮಿಂಚು ಗುಡುಗಿಗೂ ಸೆಡ್ಡುಹೊಡೆದು ನಿಲ್ಲುವಂತ
ಧೈರ್ಯ, ನಾವ್ಯಾರೂ ಕಂಡರಿಯದ ಆ ಮರ್ಮಾ
ಅವನಲ್ಲಿರಲಿಲ್ಲ ನಮ್ಮಲ್ಲಿನ ಭೇದಭಾವ !
ಕಣ್ಣು ಮುಚ್ಚಿ ತೆರೆಯುವುದರಲಿ ತಿಂದು
ತೇಗಿದ ಸಾವಿರಾರು ಕಂದಮ್ಮಗಳ, ತಾನೇ ಹೆತ್ತ
ಮಕ್ಕಳ ತಾನೇ ನುಂಗಿದಂತಿತ್ತು ಅವನ ಭಾವ,
ಇರಲಿಲ್ಲ ಅವನಲ್ಲಿ ಪಶ್ಚಾತಾಪದ ಭಾವ
ಮನುಜನಲ್ಲಿಲ್ಲದ್ದು ನನಗೇಕೆ ಎಂದು !
ಸಾವಿರಾರು ಜೀವಗಳು ಲೀನವಾದವು ಮಣ್ಣಾಗಿ
ಮುಂದೆಂದೂ ಬರದಿರಲಿ ಆ ದುರ್ಗಮ ದುರಂತ
ಏನ ಮಾಡಬಲ್ಲೆವು ನಾವು ಆ ದೇವನಣತಿಯ ಮುಂದೆ
ಸಾಗೋಣ ಮುಂದೆ ನಮ್ಮ ಆರ್ಭಟಗಳ ಮೆಟ್ಟಿಮೀರಿ
ಅದುವೇ ನಮಗಿಹುದೊಂದು ದಾರಿ ಈ ಹೊಸವರುಷದಲಿ!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications