ಕೆಂಪುತೋಟ ಮತ್ತು ಡಾ. ಎಚ್ಚೆನ್
- ಪ್ರೊ. ಕೆ. ಎಸ್. ನಿಸಾರ್ ಅಹಮದ್
ಸಂಜೆ ಕೆಂಪು ತೋಟದಲ್ಲಿಂದು
ಮಳೆ ಬಂದು ಇಳೆ ಮಿಂದು
ಮಡಿಯಾಗಿ ಮೈ ಮೆರೆಸಿತು
ಸುತ್ತಮುತ್ತಲಿನಚ್ಚ ಹಸಿರು ದಂದು
ಲಾಗಾಯ್ತಿನಿಂದಿನವರಿಗೆ ನನ್ನ ಬಗೆಗೆ ಅಮಿತ ಕಕ್ಕುಲತೆ
‘ಬೆಳಗ್ಗೆಯಷ್ಟೇ ಭಾಷಣದಲ್ಲಿ ಉದ್ಧರಿಸಿದೆ ನಿಮ್ಮ ಕವಿತೆ’
ಎಂದರು. ಏನೊ ಹೊಳೆದಂತೆ ಗಹಗಹಿಸಿ
ಮಾತು ಮುಂದುವರಿಸಿದರು.
‘ಇಲ್ಲಿನೊಂದೊಂದು ಮರ ಗಿಡ ಬಳ್ಳಿ ನನಗೆ ಪರಿಚಯವುಂಟು
ಇವಕು ನನಗು ಮೂವತ್ತೆಂಟು ವರ್ಷಗಳ ದೀರ್ಘ ನಂಟು.
ಮುಂಜಾನೆ ಪ್ರತಿನಿತ್ಯ ಇಲ್ಲಿ ವಾಕಿಂಗ್ ಬರುತ್ತಿದ್ದ ರೂಢಿ.
ಅಸ್ವಸ್ಥತೆಯ ನಿಮಿತ್ತ ಕೆಲ ಸಮಯದಿಂದ ತಪ್ಪಿತ್ತು ನೋಡಿ.
ಆದರಿಂದ ; ಈಚೆಗೇಕೋ ಮುದುಕ ಪಾದ ಬೆಳೆಸಿಲ್ಲವೀ ಎಡೆಗೆ,
ಗೊಟ್ಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?
ಎನುವ ಈ ತರುಲತೆಗಳನುಮಾನ ನೀಗಲಿಕೆಂದೇ,
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ’
ಎನ್ನುತ್ತ, ನೆನಪುಗಳ ತೋಳ್ತಕ್ಕೆಗೆ ಸಂದರು.
ಹೌದೆಂಬಂತೆ ತೆಳ್ಳನೆಯ ಸುಯ್ಗಾಳಿ ಬೀಸಿ,
ಬದಿಯ ವೃಕ್ಷದಿಂದುರಿದಾಕಾಶ ಮಲ್ಲಿಗೆ ಬೆಳ್ನಗೆ ಸೂಸಿ.
ಅಡಿಯ ನೆಲ ಪೂರ್ತಿ ಕಣ್ಸೊಗದ ಬಂದರು.
2
ಪಾಠ ಹೇಳದಿದ್ದರೂ ನನಗಿವರು ಕಾಲೇಜಿನಲ್ಲಿ
ಎಲ್ಲರ ಹಾಗೆ ನನ್ನ ಪಾಲಿಗು ಮೇಷ್ಟ್ರೆ.
(ಇವರು ಬರುವುದ ಕಂಡು ಹಿಂದೆ ಸಿಗರೇಟನಾರಿಸಿ,
ದೂರ ಸರಿಸಿದ್ದುಂಟು ಆ್ಯಷ್ ಟ್ರೆ.
ಮಾನಾಭಿಮಾನಗಳ ಪ್ರಶ್ನೆಯೆದುರಾದಾಗ
ಮಾಡಿಕೊಂಡಿದ್ದಿಲ್ಲ ಬಿಲ್ಕುಲ್ ರಾಜಿ,
ಹಲವು ಪೊಗದಸ್ತು ಹುದ್ದೆಗಳ ಈ ಮಾಜಿ.
ಹಾಗೆಯೇ, ಹಿರಿಯರೊ ಕಿರಿಯರೊ ಭೇದವೆಣಿಸದೆ,
ಅಂತಸ್ತು ಕುಲ ಆಚಾರ ಕಿಂಚಿತ್ತು ಗಣಿಸದೆ-
ಕಂಡಿತೇ ಅವರಲ್ಲಿ ಕಣದಷ್ಟು ಗುಣ,
ಹೊಗಳಿಕೆಯ ಹತ್ತು ಮಣ
ಹೊರೆಸಿದಲ್ಲದೆ ತಣಿವ ಕುಳವಲ್ಲ ಪರ ಹಿತೈಷಿ ;
ಅದಕ್ಕಿಲ್ಲವೇ ನಾನೆ ಜ್ವಲಂತ ಸಾಕ್ಷಿ ?
3
ಇದೆಲ್ಲ ಒತ್ತಟ್ಟಿಗಿರಲಿ,
ಲಾಲ್ಬಾಗಿಗೆ ಬರೋಣ ಮರಳಿ.
ಗಾದಿಗೆಂದೂ ತಾನೆ ಮುಂದಾಗಿ ಚಿತಾವೆಣಿಸದ
ಗಾಂಧಿಯನುಮೋದಿ.
ಷಾದಿಯಾಗದ ಈ ವಿಚಾರಪೂಜಕ ‘ನಿರೀಶ್ವರವಾದಿ’,
ದೈವಸೃಷ್ಟಿಯ ವಿವಿಧ ತರು ಸಂತತಿಯ ಚೆಲ್ವಿಕೆಗೆ
ಮನ ಸೋತು ಮೋಹಗೊಂಡಿರುವಮೋಘ ಪರಿ
ಬರಿಸುವುದು ಸಂಸಾರಿ ಆಸ್ತಿಕರಿಗೂ ಮಹದಚ್ಚರಿ.
ಜಂಗುಳಿಯಲ್ಲಿ ಗುರುತಿಸದಷ್ಟು ಸರಳ ಖಾದಿವ್ರತಸ್ಥ ಎಚ್ಚೆನ್
ಮತ್ತವರ ಬದುಕು ಸದಾ ಕಾಲಕ್ಕು ದೊಡ್ಡ ಕ್ವಶ್ಚನ್.
ಪೂರಕ ಲೇಖನ-
ಎಚ್ಚೆನ್ ಎಂಬ ‘ಸ್ಕೂಲ್ ಮಾಸ್ಟರ್!’
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications