ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ನೆಲದೊಳಗೆ
- ಡಿ.ಎಸ್. ರಾಮಸ್ವಾಮಿ
ಅರಮನೆ-ಕುದುರೆ-ಸವಾರಿ ಆಟ,
ವಿಕ್ರಮದ ವಿಜಯಕ್ಕೆ ಅಸೂಯೆ ಅಡ್ಡಿ-
ಸುಖ ಮೆಟ್ಟಿ ಕಲ್ಲಾಗಿ ನಿಂತ ಮಹಾವಿರಕ್ತ.
ತೆರೆ
ಎಳೆದ
ಕಾವದಂತೇ
ಸಂಸಾರ
ಗುಟ್ಟು
ಲೌಕಿಕದ
ದ್ವೆ
ೖತ
ಸಾಗಬೇಕಿರುವ
ಹಾದಿ,
ಕಾಯದ
ಮೋಹಕ್ಕೆ
ಎಚ್ಚರ
ತಪ್ಪುವ
ಗಂಡ-
ಒಲಿದವನನ್ನರಸುತ್ತ
ನಡೆದ
ದಿಟ್ಟ
ಹೆಣ್ಣು.
ಸೂರ್ಯಚಂದ್ರರಿಗೂ
ಚಣ
ಹೊತ್ತು
ಬಿಡುಗಡೆ
ಕೊಟ್ಟು
ಕಾಲ
ನಿಂತಲ್ಲಿ
ನಿಂತಂತೆ
ಭಾಸ,
ಭ್ರಮೆಯ
ನೇಪಥ್ಯ
ಸರಿದು-
ಯಯಾತಿಗೂ
ಉಂಟೆ
ಶೂನ್ಯ
ದರ್ಶನದ
ಅರಿವು?
ಸಾಕು
ಹುಡುಗಿಯ
ತುಟಿ
ತುದಿಯಲ್ಲಿ
ವಿಷ
ಪುಷ್ಠ
ರಸಫಲದೊಳಗೇ
ನಾಸಿಕ-ಕ್ಷಯದ
ಸುವರ್ಣ
ಕೀಟ-
ನಗುಮುಖದಡಿಯಲ್ಲೇ
ತಮದ
ದ್ವೇಷ!
ತಣ್ಣನೆತ್ತರ
ಸರೀಸೃಪ
ಒಳಗೇ
ಸರಿಯುತ್ತಿರುವಾಗ
ಕಥೆಗೆ
ಹಾತೊರೆಯುವನು
ಜನಮೇಜಯ,
ಗಳಿಗೆ
ಬಟ್ಟಲ
ಗಂಟಲಿಗೇ
ಅಂಟಿನಿಲ್ಲುವ
ಜಾಡ್ಯ-
ನಿಲ್ಲಿಸಿದ್ದುಂಟೆ
ಕಾಲಚಕ್ರದ
ಗತಿಯ?!
Comments
Story first published: Monday, February 3, 2003, 5:30 [IST]