ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನೆಲದೊಳಗೆ

By Staff
|
Google Oneindia Kannada News
  • ಡಿ.ಎಸ್‌. ರಾಮಸ್ವಾಮಿ
ಹೊಳೆವ ಹೊಂಬಣ್ಣದೋಕುಳಿ ಕೇಳಿ
ಅರಮನೆ-ಕುದುರೆ-ಸವಾರಿ ಆಟ,
ವಿಕ್ರಮದ ವಿಜಯಕ್ಕೆ ಅಸೂಯೆ ಅಡ್ಡಿ-
ಸುಖ ಮೆಟ್ಟಿ ಕಲ್ಲಾಗಿ ನಿಂತ ಮಹಾವಿರಕ್ತ.

ತೆರೆ ಎಳೆದ ಕಾವದಂತೇ ಸಂಸಾರ ಗುಟ್ಟು
ಲೌಕಿಕದ ದ್ವೆ ೖತ ಸಾಗಬೇಕಿರುವ ಹಾದಿ,
ಕಾಯದ ಮೋಹಕ್ಕೆ ಎಚ್ಚರ ತಪ್ಪುವ ಗಂಡ-
ಒಲಿದವನನ್ನರಸುತ್ತ ನಡೆದ ದಿಟ್ಟ ಹೆಣ್ಣು.

ಸೂರ್ಯಚಂದ್ರರಿಗೂ ಚಣ ಹೊತ್ತು ಬಿಡುಗಡೆ ಕೊಟ್ಟು
ಕಾಲ ನಿಂತಲ್ಲಿ ನಿಂತಂತೆ ಭಾಸ,
ಭ್ರಮೆಯ ನೇಪಥ್ಯ ಸರಿದು-
ಯಯಾತಿಗೂ ಉಂಟೆ ಶೂನ್ಯ ದರ್ಶನದ ಅರಿವು?

ಸಾಕು ಹುಡುಗಿಯ ತುಟಿ ತುದಿಯಲ್ಲಿ ವಿಷ
ಪುಷ್ಠ ರಸಫಲದೊಳಗೇ ನಾಸಿಕ-ಕ್ಷಯದ ಸುವರ್ಣ ಕೀಟ-
ನಗುಮುಖದಡಿಯಲ್ಲೇ ತಮದ ದ್ವೇಷ!

ತಣ್ಣನೆತ್ತರ ಸರೀಸೃಪ ಒಳಗೇ ಸರಿಯುತ್ತಿರುವಾಗ
ಕಥೆಗೆ ಹಾತೊರೆಯುವನು ಜನಮೇಜಯ,
ಗಳಿಗೆ ಬಟ್ಟಲ ಗಂಟಲಿಗೇ ಅಂಟಿನಿಲ್ಲುವ ಜಾಡ್ಯ-
ನಿಲ್ಲಿಸಿದ್ದುಂಟೆ ಕಾಲಚಕ್ರದ ಗತಿಯ?!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X