ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಯ ನೀಡುವೆ

By Staff
|
Google Oneindia Kannada News
ಬೇಸಿಗೆಯ ಝಳದಲಿ
ಮಳೆ ಹನಿಯಾಂದು ಬಿತ್ತು.

ಸಾಯುತ್ತಿದ್ದ ಧರೆ
ತಲೆ ಮೇಲೆತ್ತಿತು.

ಮೋಡಗಳೆಲ್ಲ ಸೇರಿತು
ಒಮ್ಮೆ ಭೋರ್ಗರೆಯಿತು.

ನಾನು ಬಂಧಿ ವಿಧಿಯಲಿ
ಹೇಗೆ ಬಂದು ಸೇರಲಿ

ದಣಿಯದಿರು ಧಣಿಯೇ
ಬಂದು ಸೇರುವೆ

ಎಂದು ದೂರದಲಿ
ಮರೆಯಾಯಿತು ಮೋಡ
ಯಾವ ಜೀವ ಯಾರಿಗೆ

ಕಾಣದ ಕಣ್ಣೋಟ
ಏಕೆ ಕಾಡುತಿದೆ.

ಬೇಡ ನನಗೆ
ಭ್ರಮ ನಿರಸನ ಒಡನಾಟ.

ಸ್ನೇಹವೆಂಬುದು
ಹೃದಯಗಳ ಸಂಮಿಲನ;

ಪ್ರೀತಿಯೆಂಬುದು
ಮನಸ್ಸಿನ ಪ್ರಲೋಹನ;

ಬೇಡ ಅಸಹಜ ನಂಟು,
ಚಿಗುರುವ ಚಿಗುರ
ಮೊಟಕುವ; ನಂಜು
ಮಾಡುವ ಮನಸ್ಸಿಲ್ಲ.

ಸ್ನೇಹಕೆ ಮೋಸವ,
ಪ್ರೀತಿಗೆ ಬಣ್ಣವ
ಬಳಿಯಲಾರೆ ಮನಸೆ,

ದೂರವಾಗು ದುಗುಡವೆ,
ನಿನ್ನದಲ್ಲದ ಹೂವ
ಮುಟ್ಟಲು ಮುಡಿಯಲು
ಅರ್ಹನಲ್ಲ ನೀನು.

ಯಾರ ಹೂ
ಯಾರ ಪಾಲಿಗೋ;
ಯಾರ ಜೀವ
ಯಾರಿಗೆ ಮಿಡಿಯುವುದೋ
ಮನಸೇ.....


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X