Get Updates
Get notified of breaking news, exclusive insights, and must-see stories!

ತಂಬೂರಿಯಾಗುತ್ತಾರೆ...

ಕೆಲವರು ಮರೆತುಹೋಗುತ್ತಾರೆ
ಹತ್ತರಲಿ ಹನ್ನೊಂದಾಗುವರು ;
ಭವದ ಕೋಟಲೆಗೆ ಸಿಕ್ಕಿ
ನರಳಿ ನುಗ್ಗಾಗುವರು ;
ಮಕ್ಕಳು ಮರಿ ಆಸ್ತಿ ಪಾಸ್ತಿಗಾಗಿ
ಹಪಹಪಿಸಿ ದುಡಿದವರು ;
ಅಲ್ಲಿಗೂ ಸಲ್ಲದೆ ಇಲ್ಲಿಗೂ
ಸಲ್ಲದೆ ಅಂತರ- ಬೆಂತರಗಳಾಗುವರು !

ಮರೆತು ಹೋಗುತ್ತಾರೆ
ಮರೆಯಾದ ಕೆಲ ಗಳಿಗೆಯಲ್ಲಿಯೆ
ಮರೆತೇ ಹೋಗುತ್ತಾರೆ.

ಕೆಲವರು ಮರೆತು
ಹೋಗುತ್ತಾರೆ!
ನಮ್ಮ ನಿಮ್ಮನ್ನೆಲ್ಲ
ಆಸ್ತಿ ಅಂತಸ್ತನೆಲ್ಲ
ಮರೆತು
ಹೋಗುತ್ತಾರೆ !
ಕರುಳಬಳ್ಳಿ ರಾಗ ಅನುರಾಗಗಳನೆಲ್ಲ
ಕಿತ್ತೊಗೆದು
ಏನೇನೂ ಗೊತ್ತಿಲ್ಲದವರಂತೆ
ಅಚ್ಚರಿ ಮೂಡಿಸಿ
ಮರೆತು ಹೋಗುತ್ತಾರೆ.

ಮರೆತೆನೆಂದರೂ
ಮರೆಯದ ಕೆಲವರಿರುತ್ತಾರೆ
ನಮ್ಮ ನಡೆ-ನುಡಿಯಲ್ಲಿ
ಬೇರೂರುತ್ತಾರೆ ;
ಆಳಕಿಳಿಯುತ್ತಾರೆ ;
ರಾಗ-ಭೈರವಿಯಲ್ಲಿ
ಲೀನವಾಗುತ್ತಾರೆ ;
ಭೈರವಿ-ಮಂಗಲವೋ ?
ಓಂ ನಮವೋ ?-ಎಂದು
ಗೊಂದಲಗೊಳಿಸಿ
ಆದಿಯಿಂದ ಅನಾದಿವರೆಗೆ
ವ್ಯಾಪಿಸಿಬಿಡುತ್ತಾರೆ ;
ಇಲ್ಲಿ ಸಂದು
ಅಲ್ಲಿಯೂ ಸಲ್ಲುವ
ಮಾದರಿಗಳಾಗುತ್ತಾರೆ ;
ತಮಂಧದ ಕೇಡಡಗಿಸಲು
ಜ್ಯೋತಿಯಾಗುತ್ತಾರೆ ;
ಅವಲೋಹವನಪ್ಪಿ
ಚಿನ್ನವಾಗಿಸುತ್ತಾರೆ ;
ಮಧುರ ಆಲಾಪನೆಗೆ
lt;br/>
(ಪಂ. ಪಿ. ಎ. ಸಾಲಿಮಠ ಅವರಿಗೆ ಸಲ್ಲಿಸಿದ ನುಡಿ ವಂದನೆ)


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+