Get Updates
Get notified of breaking news, exclusive insights, and must-see stories!

ಇಲ್ಲ... ಇಲ್ಲ

ಇಲ್ಲ, ಇಲ್ಲ ಕನ್ನಡಿಗರಿಗೆ
ಖಂಡಿತವಾಗಿಯೂ ಇಲ್ಲ
ನಾಡು ಭಾಷೆಯ ಬಗ್ಗೆ ಆಭಿಮಾನ.
ಅಂದೂ ಇರಲಿಲ್ಲ. ಈಗಲೂ ಇಲ್ಲ...
ಇದಕ್ಕೆ ಬೇಕೇ ಪುರಾವೆ ?
ಅಯ್ಯೋ ಅದಕ್ಕೇನೂ ಸಾಕಷ್ಟಿವೆ..!
ಕನ್ನಡದಲ್ಲಿ ಕತೆಗಳಿಲ್ಲ,
ಕತೆಗಳಿಲ್ಲ ಎಂಬುದು ನಮ್ಮ
ನಿರ್ಮಾಪಕರ ಕೊರಗು. ನನ್ನ
ಪ್ರಕಾರ ನಮ್ಮ ನಿರ್ಮಾಪಕರಿಗೆ
ಕತೆ ಹುಡುಕುವ ವ್ಯವದಾನವೇ ಇಲ್ಲ.
ಇರುವ ಕತೆಗಾರರಿಗೆ ಬೆಲೆಯೇ ಇಲ್ಲ.
ಕನ್ನಡದಲ್ಲಿ ನಾಯಕಿಯರಿಲ್ಲ
ನಾಯಕಿಯರಿಲ್ಲ ಎಂಬುದು ನಮ್ಮ
ನಿರ್ಮಾಪಕರ ಕೊರಗು. ನೋಡುವ
ಕಣ್ಣು ಸರಿ ಇದ್ದಿದ್ದರೆ ಇವರಿಗೆ ಅಂದ
ಕಾಣಿಸುತ್ತಿತೇನೋ! ಅಂದ-ಚೆಂದಗಳಿಗೂ
ಕರ್ನಾಟಕದಲ್ಲಿ ಬರವೇ ಎಂದು ತಿಳಿಯುತ್ತಿಲ್ಲ.
ಕನ್ನಡದಲ್ಲಿ ಒಳ್ಳೆಯ ಚಿತ್ರಗಳಿಲ್ಲ, ಇಲ್ಲ
ಎಂಬುದು ಕನ್ನಡಿಗರ ಕೊರಗು. ಆದರೆ
ಕಾಲದಿಂದಲೂ ಪರಭಾಷ ಚಿತ್ರಗಳನ್ನು
ಪೋಷಿಸುತ್ತಲೇ, ಉತ್ತಮ ಕನ್ನಡ ಚಿತ್ರಗಳನು
ಸೋಲಿಸುತ್ತಲೇ ಬಂದಿರುವ ಕನ್ನಡಿಗರ
ಮರ್ಮ ಮಾತ್ರ ನನಗೆ ತಿಳಿಯುತ್ತಿಲ್ಲ.
ಅನುಪಮ, ಮಿಂಚಿನ ಓಟ, ಲಾಲಿ, ಹುಲಿಯ,
ಪಲ್ಲವಿ ಅನು ಪಲ್ಲವಿ, ಏಳು ಸುತ್ತಿನ ಕೋಟೆ,
ಮತದಾನ, ಸುಪ್ರಭಾತ, ಮುತ್ತಿನ ಹಾರ, ಹಾಗೂ
ಇನ್ನು ಅದೆಷ್ಟೋ ಉತ್ತಮ ಕನ್ನಡ ಚಿತ್ರಗಳನ್ನು
ಮಾತ್ರ ಕನ್ನಡಿಗರು ಗೆಲ್ಲಿಸಲೇ ಇಲ್ಲ. ಆದರೆ ಕಳಪೆ
ಪರಭಾಷ ಚಿತ್ರಗಳನ್ನು ಮಾತ್ರ ಸೋಲಿಸಲಿಲ್ಲ.
ಇನ್ನು ಕೆಲವು ಉತ್ತಮ ಕನ್ನಡ ಚಿತ್ರಗಳಿಗೆ
ಚಿತ್ರಮಂದಿರಗಳೇ ಇಲ್ಲ,ಬೆಂಗಳೂರಿನಲ್ಲಾಗುವ
ಕನ್ನಡ ಚಳುವಳಿಗೆ ಬಳ್ಳಾರಿ ಜನರ ಬೆಂಬಲವಿಲ್ಲ.
ಮಂಡ್ಯದಲ್ಲಾಗುವ ಗಲಭೆಗಳಿಗೆ ಬೆಂಗಳೂರಿನವರ
ಸಹಕಾರವಿಲ್ಲ. ಇದೆಲ್ಲ ನೋಡುತ್ತಿದ್ದರೆ ನಾವಿರುವ
ಭೂಮಿ ಕರ್ನಾಟಕದಲ್ಲಿದೆಯೇ ಎಂದು ಅನಿಸುತ್ತಿಲ್ಲ.
ರಾಜಕೀಯದಲ್ಲಿ ಅಪ್ಪನ ಕಿರಿಕಿರಿಗಳಿಗೆ ಕೊನೆಯಿಲ್ಲ
ಅಪ್ಪನಂತೆ ಮಗನಿಗೂ ಸ್ವಲ್ಪವೂ ಬುದ್ದಿ ಇಲ್ಲ.
ಇದ್ದಿದ್ದರೆ ಅಂತ, ಬಂಧನ, ಮುತ್ತಿನ ಹಾರ
ಚಿತ್ರಗಳ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು
ವನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕಾರ ಹಾಕುವ
ಪ್ರಯತ್ನವನ್ನು ಮಾಡುತ್ತಿರಲಿಲ್ಲ ಆ ಕುಮಾರ ಸ್ವಾಮಿ !
ಇಂದ್ರಜಿತ್‌ ಎಂಬ ನಿರ್ದೇಶಕನಿಗೆ ತಲೆ ನಿಲ್ಲುತ್ತಿಲ್ಲ..
ತನ್ನ ಮೋನಾಲಿಸ ಚಿತ್ರ ತೆಲುಗಿಗೆ ರಿಮೇಕ್‌ ಆದ
ಕೂಡಲೆ, ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ
ಪ್ರದರ್ಶನ ಕಾಣಲೇಬೇಕು ಎನ್ನುತ್ತಿದ್ದಾನೆ. ಬೇಲಿಯೇ
ಎದ್ದು ಈ ರೀತಿ ಇಲ್ಲಿ ಹೊಲ ಮೇಯುತ್ತಿರುವಾಗ
ಅನಿಸುತ್ತಿದೆ, ನಿಂತ ನೆಲ ಕುಸಿಯಬಾರದೆ ಬೇಗ
ಐವತ್ತು,ನೂರು ವರ್ಷಗಳಿಂದಲೂ ಬೆಂಗಳೂರಿನಲ್ಲೇ
ವಾಸ ಮಾಡುತ್ತಿರುವ ತೆಲುಗು, ತಮಿಳಿನವರು, ಇತ್ಯಾದಿ
ಜನರು ಅದು ಹೇಗೆ ಪರಭಾಷಿಗರಾಗತ್ತಾರೋ ನನಗೆ
ತಿಳಿಯುತ್ತಿಲ್ಲ. ಪರಭಾಷಾ ಚಿತ್ರಗಳ ಗುಣಮಟ್ಟ
ಏನು ಕನ್ನಡಕ್ಕಿಂತ ಮೇಲಿಲ್ಲ. ಆದರೂ ಆ ಚಿತ್ರಗಳಿಗೆ
ಸಿಗುತ್ತಿರುವ ಪ್ರೋತ್ಸಾಹ ಮಾತ್ರ ನಿಲ್ಲುತ್ತಿಲ್ಲ.
ಇಲ್ಲ,ಇಲ್ಲ, ಯಾರಿಗೂ ಇಲ್ಲಿ ಕಾಳಜಿ ಇಲ್ಲ.
ರಾಜ್‌ ಕ್ಯಾಂಪ್‌ ಸಹ ರಿಮೇಕ್‌, ವಿಷ್ಣು ಸಹ ರಿಮೇಕು.
ರವಿಚಂದ್ರನ್‌ ರಿಮೇಕು, ಸುದೀಪು ರಿಮೇಕು.
ಉದ್ಯಮದ ಉಳಿವಿಗಿಂತ, ಅವರವರ ‘‘ಉಳಿವೇ’’
ಎಲ್ಲರಿಗೂ ಮುಖ್ಯ. ಸ್ವಂತಿಕೆ ತೋರುವ ಸೀತಾರಾಂ,
ದೇಸಾಯಿ ಯಂತಹ ನಿರ್ದೇಶಕರು ಜಾಸ್ತಿ ಇಲ್ಲ.
‘‘ಬಾರಿಸು ಕನ್ನಡ ಡಿಂಡಿಮವ’’ ಎಂದರು ಕುವೆಂಪು ಅಂದು.
ಮೊದಲಿಗೆ, ಬಾರಿಸಬೇಕು ರಿಮೇಕ್‌ ಮಾಡುವವರನ್ನು ಇಂದು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+