ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲಾಮರಾಗುವ ಆಸೆಯೇಕೆ...?

By Staff
|
Google Oneindia Kannada News


.?
Shivamurthy, New Delhi ಶಿವಮೂರ್ತಿ, ನವದೆಹಲಿ
[email protected]


ಕರಗಿ ಹೋಗಲಿಲ್ಲ ನಮ್ಮಲ್ಲಿ ಒಳಕಲಹ
ನಿಲ್ಲಲಿಲ್ಲ ವಿದೇಶಿ ದಬ್ಬಾಳಿಕೆ ಪ್ರವಾಹ
ಒಳಕಲಹವಲ್ಲವೆ ಹೊರಗಿನವರಿಗೆ ಬರುವ ದಾರಿ
ಒಳನುಗ್ಗಿ ನಮ್ಮೊಳಾವರಿಸಿ ಕೊಲ್ಲುವ ಹೆಮ್ಮಾರಿ

ಆಳಿದ್ದರು ಅಂದು ತುಘಲಕ್‌, ಗುಲಾಮ, ಮೊಗಲರು
ಡಚ್‌, ಫ್ರೆಂಚ್‌, ಪೋರ್ಚ್‌ಗೀಸ್‌, ಬ್ರಿಟಿಷರು
ಸಾವಿರಾರು ವರ್ಷಗಳು ನಮ್ಮನ್ನು ಲೂಟಿ ಮಾಡಿದ್ದರು
ದೇಶದ ಸಂಪತ್ತನ್ನೇ ಕೊಳ್ಳೆ ಹೊಯ್ದಿದ್ದರು

ಅಂದಿನಿಂದಲೂ ನಮ್ಮನ್ನಾಳಿದರಲ್ಲ ವಿದೇಶಿಯರು
ಗುಲಾಮರಾಗಿಯೇ ಉಳಿದಿದ್ದೇವೆಲ್ಲ ನಾವು ಭಾರತೀಯರು
ಶುದ್ಧ ಭಾರತೀಯನ್ಯಾರೂ ನಮ್ಮಲ್ಲಿಲ್ಲವೇ ಆಳಲು?
ನೆಹರು, ಪಟೇಲ್‌, ಶಾಸ್ತ್ರಿ , ವಾಜಪೇಯಿಯಂತವರು ?

ಇನ್ನೂ ಆಳಿಸಿಕೊಳ್ಳುವ ಆಸೆ ಹೋಗಲಿಲ್ಲವಲ್ಲ...
ಸ್ವಾತಂತ್ರ್ಯ ಸಿಕ್ಕಿ ದಶಕಗಳು ಕಳೆದರೂ...
ಮತ್ತೆ ಬರುವರೇ.. ಗಾಂಧಿ, ಚಂದ್ರಭೋಸರು
ಘರ್ಜಿಸಿದ ಲಾಲ ಪಾಲ ಬಾಲರು...?

ಭವ್ಯ ಭಾರತದ ಇತಿಹಾಸ ತಿಳಿಯದವರು
ರೈತರ, ಬಡವರ ಸಮಸ್ಯೆಯನ್ನರಿಯದವರು
ಈ ದೇಶದೇಳಿಗೆಗೇನು ಮಾಡಬಲ್ಲರು..?

ದೇಶವನ್ನು ವಿದೇಶಿಯರಿಗೆ ಮಾರಿ
ಈ ದೇಶಿಗರನ್ನು ಕೂಪಕ್ಕೆ ತಳ್ಳಿ
ಅಟ್ಟಹಾಸದಿ ಮೆರೆದಾಡುವವರ ನಡುವೆ
ಕೇಳುವವರ್ಯಾರು ಜನ ಸಾಮಾನ್ಯನ ಅಳಲು..?


ಓದಿ :
ಎದೆಗೆ ಸಂದ ಮಳೆಬಿಲ್ಲು!
ಮೋಡಗಳು
ಮೇಘಮಲ್ಹಾರ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X