ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿ

By Staff
|
Google Oneindia Kannada News
  • ಬಸವರಾಜೇಶ್ವರಿ ಪಾಟೀಲ, ತಾಳಿಕೋಟಿ
    [email protected]
ಮಿಡಿಯುತಿದೆ ವಾದ್ಯ
ಕೇಳುತಿದೆ ನಾದ
ಕತೆಯು ಮುಗಿದ ಮೇಲೂ
ಮಿಡಿಯುತಿದೆ ವಾದ್ಯ
ಕೇಳುತಿದೆ ನಾದ
ಪರದೆ ಎಳೆದ ಮೇಲೂ
ಚೋಮನೊಡನೆ ಆಸೆ ಬಯಕೆಗಳು
ತೀರಿಹೋದ ಮೇಲೂ !

ಬದುಕ ನದಿಯಲಿ
ಬಯಕೆ ದೋಣಿಯಲಿ
ಆಸೆಯಾಂದೆ ನಿನಗೆ
ಬಿತ್ತಬೇಕು, ಬಿತ್ತು ಉತ್ತ ಬೇಕು
ನಿನ್ನ ಸ್ವಂತ ಭೂಮಿಯೊಳಗೆ ;
ಆಸೆಯಾಂದೆ ಕೊನೆಯಾಸೆಯಾಂದೆ
ಇರಬೇಕು ನನಗೆ
ನನ್ನದೆ ಭೂಮಿಯಾಂದು !

ನಿನ್ನ ನೆರಳ ಅಡಿಯುಲ್ಲಿನ ಸಸಿ
ಬೇರೆ ಆಸರೆಯು ಹಿಡಿದಿರಲು
ಪಾಲಿಪ ಮನಕೆ ನೋವು ನೀಡಿ
ತರೆದು ದೂರ ಹೋದ

ಆಸೆ ನೂರು ಒಡಲಲಿ
ಬಯಕೆಗಳ ಬದುಕಲಿ
ನಿರೀಕ್ಷೆಯಾಂದೇ ಜೊತೆಯಲಿ
ನನಸುಗಳಿಲ್ಲ ಎದುರಲಿ

ಬದುಕು ದೋಣಿ ಬಯಕೆ ಸಾಗರ
ಆದರೊಂದೇ ಆಸೆ ಮನದಲಿ
ಭೂ ಒಡೆತನ ಬಂದೀತೇ?
ಆಸೆ ಈಡೇರೀತೆ ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X