ಓಂ ಗಣಕಾಯ ನಮ ಃ
- ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
[email protected]
ನುಡಿ ಬರಹಗಳನರಿಯೆ
ಸಿ. ಡಿ. ಪ್ಲಾಪಿಗಳನರಿಯೆ
ಕೇಡಿ ವೈರಸ್ಗಳನರಿಯೆ
ಸೈಬರ್ ಜಾಲಗಳನರಿಯೆ
ಗಣಕವೆ,
ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ
ಸಿಲಿಕಾನ್ ಶಿವದೇವ.
*
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿನ್ನ ಅಂತರ್ಜಾಲ
ಬ್ರಹ್ಮಾಂಡದಿಂದತ್ತತ್ತ ನಿನ್ನ ವೆಬ್ ತಾಣ
ಸರ್ವ ಅಂತರ್ಯಾಮಿ, ಸರ್ವ ಗೋಚರ
ಸಪ್ರತಿಮ ಗಣಕಯಂತ್ರವೆ,
ಎನ್ನ ಲ್ಯಾಪ್ ಟ್ಯಾಪ್ಗೆ ಬಂದು
ಚುಟುಕಾದೆಯಯ್ಯ ಸಿಲಿಕಾನ್ ಶಿವದೇವ.
*
ನುಡಿ ಲಿಪಿಸಿದರೆ ಮತ್ತಿನಂತಿಹುದಯ್ಯ
ಬರಹ ಬರೆದರೆ ಸ್ಫಟಿಕದಂತಿಹುದಯ್ಯ
ಲೇಸರ್ಮುದ್ರಿಸಿದರೆ ಮಾಣಿಕ್ಯದ ದೀಪ್ತಿಯಂತಿಹುದಯ್ಯ
ಲಘುವರ ಸೃಷ್ಟಿಸಿದರೆ ಜಗಮೆಚ್ಚಿ ಅಹುದಹುದೆನುವುದಯ್ಯ
ಗಣಕ ಯುಗದಲ್ಲಿದ್ದು ಅಂತರ್ಜಾಲವ ಭೇದಿಸದಿದ್ದರೆ
ಮೆಚ್ಚ ನಮ್ಮ ಸಿಲಿಕಾನ್ ಶಿವದೇವ.
*
ಶಿಕ್ಷಣ ಪಡೆಯಲೆಂದು ಬಂದು
ಗಣಕಕ್ಕೆ ಅಂಜಿದಡೆ ಎಂತಯ್ಯ
ಸೈಬರ್ ಲೋಕದೊಳಗಿದ್ದು
ಚಾಟ್ ಮಾಡದಿದ್ದರೆ ಎಂತಯ್ಯ
ಅಂತರ್ ಜಾಲದ ವಿಶ್ವದಲಿದ್ದು
ಮಾಹಿತಿ ಪಡೆಯದಿದ್ದರೆ ಎಂತಯ್ಯ
ಸಿಲಿಕಾನ್ ಶಿವದೇವ ,
ಆಧುನಿಕ ಯುಗದಲಿದ್ದ ಬಳಿಕ
ಗಣಕಾವಧಾನಿಯಾಗಿರಬೆಕಯ್ಯ.
***
ಗಣಕ ಅಣಕಗಳು
ಚಾಲಿಸು ಗಣಕವ ಚಕಚಕನೆ
ಓ, ಕನ್ನಾಡಿನ ಬಾಲಕನೆ
*
ವಿದ್ಯುನ್ಮಾನಿಯ ತನುಜಾತೆ
ಜಯ ಹೇ, ಕರ್ನಾಟಕ ಮಾತೆ
*
ಎಲ್ಲಾದರು ಇರು ಎಂತಾದರು ಇರು
ತುಸು ಹೊತ್ತಾದರೂ ಗಣಕದೆದುರು ಕುಂತಿರು
*
ಬಂದದ್ದೆಲ್ಲ ಬರಲಿ
ಗಣಕದ ದಯವೊಂದಿರಲಿ
*
ನಗೆಯು ಬರುತಿದೆ ಎನಗೆ
ಗಣಕ ನಿರಕ್ಷರಿಯ ಕಂಡು
*
ಗಣಕವ ಕಲಿತರೆ ಭಯವಿಲ್ಲ
ಜಗದಲಿ ಕಲಿಯದ ಜನರಿಲ್ಲ
*
ಕಲಿ ಕಲಿ ಕಲಿ ಕಲಿ ಗಣಕವನು
ಕಲಿತರೆ ಮೆಚ್ಚುವ ಸಿಲಿಕಾನ್ ಶಿವನು
***
ಗಣಕ ಗಾದೆಗಳು
ಗಣಪನ್ನ ಒಲಿಸಿಕೊಂಡ್ರು
ಗಣಕನ್ನ ಒಲಿಸಿಕೊಳ್ಳಲಾಸಲ್ಲ
*
ಗಣಕದ ಮುಂದಕೂತು
ನೊಣ ಹೊಡದ್ರ ಏನು ಬಂತು
*
ಗಣಪನ್ನ ಪೂಜಾಕ್ಕ ಕರಿಕಿ ಬೇಕು
ಗಣಕ ಕಲಿಲಾಕ ಬೆರಿಕಿ ಇರಬೇಕು
*
ಆಸತ್ತ ಬ್ಯಾಸತ್ತ ಬ್ಯಾಸಿಗಿ ಸೂಟಿಗಿ ಬಂದ್ರ
ಬೇಸಾಯ್ತು ಮಗನೇ ಬೇಗನೆ ಗಣಕಕ್ಕ ಹಚ್ಚು ಅಂದ್ರಂತ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications