ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಮ್ಮದೊಂದು ಕೋರಿಕೆ...
-
ಚಂದ್ರಶೇಖರ
ಬಿ.ಎಚ್.
ಐ.ಎಸ್.ಇ.ಸಿ. , ಬೆಂಗಳೂರು
[email protected]
ಮೂಡಿ ಬಾರದೆ ಜಗಕೆ ನವ ಚೈತನ್ಯ?
ನಲಿಯುತಿರೆ ನಾವೆಲ್ಲ , ಸಂತಸ, ಸಂಭ್ರಮ
ಇರುವುದಿಲ್ಲವೇ ದಿನವೆಲ್ಲ ನಿಮಗೆಲ್ಲ ?
ಬೀಸುತಿರೆ
ತಂಗಾಳಿ,
ತುಂಬದೇ
ಹೃದಯಕೆ
ಜೀವದ
ಸಿಹಿಜೇನೆಲ್ಲ
?
ಹರಿಯುತಿರೆ
ನೀರಾಗಿ
ಬಳುಕುತಲಿ
ನಲಿಯದೇ
ಮನವು
ಪುಳಕದಲಿ
?
ತೇಲುತಿರೆ
ಮುಗಿಲು
ಚಿತ್ತಾರದಲಿ
ಕಂಡುಬರದೇ
ಕಲ್ಪನೆಯ
ಕಲೆಯೆಲ್ಲ
?
ಕೊಂಬೆ
ರೆಂಬೆಯಲಿ
ಕುಳಿತು
ಕೂಗಿರಲು
ಇಂಪಾದ
ಸಂಗೀತ
ಕೇಳಿ
ಬಾರದೇ
ಅಲ್ಲೆಲ್ಲ
?
ಅರಳುತಿರೆ
ಬಳ್ಳಿಯಲಿ
ಪರಿಮಳದ
ಹೂವೆಲ್ಲ
ಮುಡಿವಾಸೆ
ಮಕ್ಕಳಿಗೆ
ಮೂಡದೇ
ಆಗೆಲ್ಲ
?
ಮರಳರಾಶಿಯಲಿ
ಅಲೆದಾಡುತಿರೆ
ಅಲೆಯೆಲ್ಲ
ಮನೆಗೆ
ಮರಳುವಾಸೆ
ಬರದಲ್ಲವೆ
ನಿಮಗೆಲ್ಲ
?
ಎತ್ತೆತ್ತ
ನೋಡಿದರತ್ತತ್ತ
ಹಸಿರಿನ
ಮಾಲೆಯಲಿ
ಪವಡಿಸಿ,
ತಂಗಾಳಿ
ತೊಟ್ಟಿಲಲಿ
ನಲಿದಂತಿಲ್ಲವೇ
ನಿಮಗೆಲ್ಲ
?
ಬೆಟ್ಟದಾ
ತುದಿಯಲಿ
ನಿಂತು
ಅತ್ತಿತ್ತ
ನೋಡಲಾಗಿ
ಬೆಂಬಿಡದ
ಆಯಾಸಕೇ
ಉಲ್ಲಾಸ
ಬರಲಿಲ್ಲವೇ
ನಿಮಗೆಲ್ಲ
?
ಇಂತಿರುವಾಗ
ಹಾಳ್ಗೆಡವದಿರಿ,
ನಲಿವಾಗ
ನಲಿದಾಡಿ
ಕುಣಿದಾಡಿ,
ಸಂತಸದಲೊಂದಾಗಿ
ಬಾಳಿರಿ,
ಆದರೆ..
ಕಡಿಯದಿರಿ,
ಕದಡದಿರಿ,
ನೀಡದಿರಿ
ತೊಂದರೆ,
ಕೊಡಿರಿ
ಸ್ವಲ್ಪ
ಜಾಗ,
ಬಾಳಲು
ನಮಗೂ
ಎಂಬುದೊಂದೇ
ಕೋರಿಕೆ
ನಮ್ಮದೀಗ
Comments
Story first published: Monday, February 3, 2003, 5:30 [IST]