ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮದೊಂದು ಕೋರಿಕೆ...

By Staff
|
Google Oneindia Kannada News
  • ಚಂದ್ರಶೇಖರ ಬಿ.ಎಚ್‌.
    ಐ.ಎಸ್‌.ಇ.ಸಿ. , ಬೆಂಗಳೂರು
    [email protected]
ಚಿಗುರಿನೊಂದಿಗೆ ತೂಗುತಿರಲು ನಾವೆಲ್ಲ !
ಮೂಡಿ ಬಾರದೆ ಜಗಕೆ ನವ ಚೈತನ್ಯ?
ನಲಿಯುತಿರೆ ನಾವೆಲ್ಲ , ಸಂತಸ, ಸಂಭ್ರಮ
ಇರುವುದಿಲ್ಲವೇ ದಿನವೆಲ್ಲ ನಿಮಗೆಲ್ಲ ?

ಬೀಸುತಿರೆ ತಂಗಾಳಿ, ತುಂಬದೇ
ಹೃದಯಕೆ ಜೀವದ ಸಿಹಿಜೇನೆಲ್ಲ ?
ಹರಿಯುತಿರೆ ನೀರಾಗಿ ಬಳುಕುತಲಿ
ನಲಿಯದೇ ಮನವು ಪುಳಕದಲಿ ?

ತೇಲುತಿರೆ ಮುಗಿಲು ಚಿತ್ತಾರದಲಿ
ಕಂಡುಬರದೇ ಕಲ್ಪನೆಯ ಕಲೆಯೆಲ್ಲ ?
ಕೊಂಬೆ ರೆಂಬೆಯಲಿ ಕುಳಿತು ಕೂಗಿರಲು
ಇಂಪಾದ ಸಂಗೀತ ಕೇಳಿ ಬಾರದೇ ಅಲ್ಲೆಲ್ಲ ?

ಅರಳುತಿರೆ ಬಳ್ಳಿಯಲಿ ಪರಿಮಳದ ಹೂವೆಲ್ಲ
ಮುಡಿವಾಸೆ ಮಕ್ಕಳಿಗೆ ಮೂಡದೇ ಆಗೆಲ್ಲ ?
ಮರಳರಾಶಿಯಲಿ ಅಲೆದಾಡುತಿರೆ ಅಲೆಯೆಲ್ಲ
ಮನೆಗೆ ಮರಳುವಾಸೆ ಬರದಲ್ಲವೆ ನಿಮಗೆಲ್ಲ ?

ಎತ್ತೆತ್ತ ನೋಡಿದರತ್ತತ್ತ ಹಸಿರಿನ ಮಾಲೆಯಲಿ
ಪವಡಿಸಿ, ತಂಗಾಳಿ ತೊಟ್ಟಿಲಲಿ ನಲಿದಂತಿಲ್ಲವೇ ನಿಮಗೆಲ್ಲ ?
ಬೆಟ್ಟದಾ ತುದಿಯಲಿ ನಿಂತು ಅತ್ತಿತ್ತ ನೋಡಲಾಗಿ
ಬೆಂಬಿಡದ ಆಯಾಸಕೇ ಉಲ್ಲಾಸ ಬರಲಿಲ್ಲವೇ ನಿಮಗೆಲ್ಲ ?

ಇಂತಿರುವಾಗ ಹಾಳ್ಗೆಡವದಿರಿ, ನಲಿವಾಗ ನಲಿದಾಡಿ
ಕುಣಿದಾಡಿ, ಸಂತಸದಲೊಂದಾಗಿ ಬಾಳಿರಿ, ಆದರೆ..
ಕಡಿಯದಿರಿ, ಕದಡದಿರಿ, ನೀಡದಿರಿ ತೊಂದರೆ, ಕೊಡಿರಿ
ಸ್ವಲ್ಪ ಜಾಗ, ಬಾಳಲು ನಮಗೂ ಎಂಬುದೊಂದೇ ಕೋರಿಕೆ ನಮ್ಮದೀಗ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X