ಮೂರು ಕವಿತೆಗಳು
- ಬಸವರಾಜೇಶ್ವರಿ ಪಾಟೀಲ, ಲಕ್ಕುಂಡಿ.
[email protected]
ಅಂತರಂಗದ ಮೌನಗೀತೆ
ಭಾವನೆಗಳೆ ಪಲ್ಲವಿ-ಚರಣ
ಕಲ್ಪನೆಯೇ ತಾಳ
ಯಾವ ವಾದ್ಯವಿಲ್ಲದೆ
ನಾದಲಹರಿ ಹೊಮ್ಮುತ್ತಿದೆ ;
ಯಾವ ತಾಳವಿಲ್ಲದೆ
ರಾಗಲಹರಿ ಹರಿಯುತಿದೆ :
ನುಡಿಯುವ ವಾದ್ಯವಿಲ್ಲ
ನುಡಿಸುವಂತಹ ಕೈಗಳಿಲ್ಲ.
ಮಿಡಿಯುವ ಮನವಿರಲು
ಮೌನಗೀತೆಗೆ ಬರವಿಲ್ಲ
ರಾಗ ತಾಳ ಭಾವ ಭಂಗಿ ಆವುದರ ಅರಿವಿಲ್ಲ
ಇತಿ ಮಿತಿ ರೀತಿ ನೀತಿ ಯಾವುದರ ಪರಿವಿಲ್ಲ
ಹಾಡಲು ಬಾಯಿಯಿಲ್ಲ
ಕೇಳುವ ಮನಗಳಿಲ್ಲ
ಹೊಮ್ಮಿ ಬರುವ ಮೌನಗೀತೆಯ
ಅರಿತಿಹುದು ಮನವೆಲ್ಲ !
*
ಬಂದವರು ಬಾರದವರು
ಯಾರು ಬರುವರೆಂದು ಕೊಂಡೆ
ಅವರೆ ಬಾರದೇ ಹೋದರು
ಯಾರು ಬಾರರು ಎಂದುಕೊಂಡೆ
ಅವರೆ ಬಂದು ನಿಂತರು
ಬಂದವರು ನನಗಾರು ?
ಬಾರದವರು ಯಾರು ?
ಬಾರದವರ ಕಾತುರದ
ದಾರಿಯಲಿ ಬೇರಾರು ?
ಬಾರದವರ ನೆನಪಿನ
ಪಯಣದಿ ಜೋತೆಯಾರು ?
ಬಾರದವರು ಮರೀಚಿಕೆಯೋ ?
ಬಂದವರು ಬಾರದವರಿಗೆ
ಸರಿಯಾ ? ಸರಿಸಮವೋ ?
ಬಯಸದವರ ಕಳಿಸಿ
ಬಯಸಿದವರ ತಡೆದು
ನಿಲಿಸಿದವರಾರು ?
ಯಾರು ಅವರಾರು ?
*
ವಿಸ್ಮಯ
ಜಗವು ಎಷ್ಟು ದೊಡ್ಡದು
ಕಾಣೋ ನಯನ ಕಿರಿಯದು ;
ಮನಸು ಕೂಡ ಚಿಕ್ಕದು
ಅದರ ಭಾವ ಹಿರಿಯದು !
ಜಗವ ನೋಡೋ ನಮ್ಮ ಕಣ್ಣು
ನಮ್ಮನೋಡಲರಿಯದು !
ಎಮ್ಮ ನೋಡಲೆಮ್ಮ ಕಣ್ಣು
ಕನ್ನಡಿಯ ಬಯಸುವದು !
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications