ತೌರು
‘ಜಾನಪದ
ಶ್ರೀ’
ಪ್ರಶಸ್ತಿ
ವಿಜೇತ
ಎಸ್.ಕೆ.ಕರೀಂಖಾನ್
ಸಂಪಾದನೆಯ
‘ಕನ್ನಡ
ಜಾನಪದ
ಗೀತೆಗಳು’
ಪುಸ್ತಕದಿಂದ
ಆರಿಸಿದ
ಅಪರೂಪದ
ಗೀತೆ-
‘’.
ಯಾವ
ಹೆಣ್ಣುಮಗಳು
ತಾನೆ
ತೌರೆಂದರೆ
ಹಿಗ್ಗಿ
ಹೀರೇಕಾಯಿ
ಆಗುವುದಿಲ್ಲ
.
ಕನ್ನಡದ
ಹೆಣ್ಣುಮಗಳಂತೂ
ಮಾನಸಿಕವಾಗಿ
ತೌರಿನಲ್ಲೇ
ಉಳಿದವಳು.
ತನ್ನ
,
ಅಮ್ಮ
,
ಅಪ್ಪ
ಹಾಗೂ
ಕಳ್ಳುಬಳ್ಳಿಗಳ
ಬಗ್ಗೆ
ಹೇಳುವಾಗಲಂತೂ
ಆಕೆ
ಯಾವ
ಕವಿಗೂ
ಕಡಿಮೆಯಿಲ್ಲ
.
ವೃದ್ಧಿಸಲಿ,
ತೌರವರ
ರಸಬಳ್ಳಿ
ಕರಕೀಯ
ಕುಡಿಯಂಗೆ
ಹಬ್ಬಲಿ
ಎಂದು
ಅವಳ
ಮನಸ್ಸು
ಶಿವನ
ಕೋರುತ್ತಲೇ
ಇರುತ್ತದೆ.
ಹೆಣ್ಣುಮಕ್ಕಳ
ಮನಸ್ಸು
ತೌರಿನತ್ತ
ತುಡಿಯುವ
ಹಬ್ಬಗಳ
ಮಾಸದ
ಈಹೊತ್ತು
,
ಇಲ್ಲಿನ
‘’
ಗೀತೆ
ಆಪ್ತವಾಗಿದೆ.
ಮೂಗೂತಿ
ಮುಂಭಾರ
ಎಣೆಗಂಟು
ಹಿಂಭಾರ
ಕೆನ್ನೇಗೆ
ಭಾರ
ಹರಳೋಲೆ
।
ನನ್ನ
ನಲ್ಲ
।।
ಬೆನ್ನೀಗೆ
ಭಾರ
ಶಿವದಾರ
।।
ನಡೆದಾರೆ
ನಡು
ಭಾರ
ಗಟ್ಟೀಯ
ನರಿ
ಭಾರ
ತೌರೀನ
ಹಂಬಲಿಕೆ
ಬಲು
ಭಾರ
।
ದೊರೆ
ಮೋಜಿನಣ್ಣ
ಮನೆ
ತಾನು
।।
ಬಂಗಾರ
ಬಳೆಯೋರು
ತಿಂಗಳ
ಹಾದ್ಯೋರು
ನನ್ನ
ಕೊಟ್ಯಾಕೆ
ಮರೆತಾರು
।
ಮಾವಿನ
ಹಣ್ಣು
ಉಣುವಾಗ
ನನೆಸ್ಯಾರು
।।
ಕೆಂದೆತ್ತು
ಕೈಯಲ್ಲಿ
ಕೆಂಪಂಗಿ
ಮೈಯಲ್ಲಿ
ಚಿಂದರು
ಬಾವಲಿ
ಕಿವಿಯಲ್ಲಿ
।
ಇಕ್ಕೊಂಡು
ಅಣ್ಣಾ
ಬಂದಾ
ತಂಗೀ
ಕರೆಯೋಕೆ
।।
ಮನೆಯ
ಹಿಂದಲ
ಮಾವು
ನೆನೆತಾರೆ
ಘಮ್ಮೆಂದೊ
ನೆನೆದ್ಹಂಗೆ
ಬಂದ
ನನ್ನ
ಅಣ್ಣ
।
ಬಾಳೆಯ
ಗೊನೆ
ಹಂಗೆ
ತೋಳ
ತಿರುವೂತ
।।
ಅರಕೆರೆ
ಬನ್ನೂರು
ಅದು
ನನ್ನ
ತವರೂರು
ಸರಕಾನೆ
ಕೂಗಿ
ಬರುತೀಯ
।
ಅಣ್ಣಯ್ಯ
ಸರಿಕಾಣೊ
ನಿನ್ನ
ದೊರೆತಾನ
।।
ಮೂರು
ತಿಂಗಳಿಗೆ
ಮುಖ
ಬೆಳ್ಳಗಾಯಿತು
ಹುಸಿಯಿಲ್ಲದ್ದೇಳು
ತಂಗ್ಯೆಮ್ಮ
।
ನಿನ್ಮಖ
ಹಸನಾದ
ಚಿನ್ನ
ಎಸೆದ್ಹಂಗೆ
।।
ತೌರೂರು
ದಾರೀಲು
ತೆಗಿಸಣ್ಣ
ಬಾವಿಯ
ಅಕ್ಕತಂಗೀರು
ತಿರುಗಾಡೋ
।
ಹಾದೀಲಿ
ತೆಗಿಸಣ್ಣ
ಕಲ್ಯಾಣದ
ಕೊಳಗಳ
।।
ತೌರೂರ
ದಾರೀಲಿ
ಕಲ್ಲಿಲ್ಲ
ಮುಳ್ಳಿಲ್ಲ
ಸಾಸುವೆಯಷ್ಟು
ಮರಳಿಲ್ಲ
।
ಬಾನಲಿ
ಬಿಸಿಲಿನ
ಬೇಗೆಯ
ಸುಡಲಿಲ್ಲ
।।
ತೌರೂರ
ಹಾದೀಲಿ
ಗಿಡವೆಲ್ಲ
ಮಲ್ಲಿಗೆ
ಹೂವರಳಿ
ಪರಿಮಳ
ಘಮ್ಮೆಂದೂ
।
ನಾಕೊಯ್ದು
ಗಿಡಕೊಂದು
ಹೂವ
ಮುಡಿದೇನು
।।
ಹೆಣ್ಣೇಗೆ
ತೌರೂರು
ರಸಬಾಳೆ
ಹಣ್ಣಂತೆ
ಮಲೆನಾಡು
ತುಡುಬೆ
ಜೇನಂತೆ
।
ತಾಯಿಯ
ಎದೆ
ಹಾಲು
ರುಚಿಯ
ಸವಿದಂತೆ
।।
ಪಾರಿವಾಳದ
ಹಕ್ಕಿ
ಏನಾಸೆಲಿದ್ದಾವೊ
ನೀರಾಸೆ
ಮರದ
ನೆರಳಾಸೆ
।
ಹೆಣ್ಣೀಗೆ
ತಾಯಾಸೆ
ತೌರ
ಮನೆಯಾಸೆ
।।
ಮಳೆ
ಬಿಟ್ಟರೂ
ಮರದ
ಹನಿ
ಬಿಡದು
ತಾಯವ್ವ
ನೀ
ಬಿಟ್ಟರೂ
ನಿನ್ನ
ಮನೆ
ಬಿಡದು
।
ನನ್ನವ್ವಾ
ನಿನ್ನಾಸೆ
ನನ್ನ
ಬಿಡದಲ್ಲೆ
।।
ಬಾರೋ
ಬಾರೋ
ನನ್ನ
ಬಣ್ಣದೊಲ್ಲಿಯ
ತಮ್ಮ
ಬರಿಗೈಲಿ
ಬರಲಾರೆ
ತಡಿಯಕ್ಕ
।
ನಿನ್ನ
ವಾಲೇಗೆ
ತರುವೇನು
ಬಿಡಿಮುತ್ತ
।।
ಹೊಟ್ಟೆನೋವು
ಎಂದಾಳು
ಪಟ್ಟೆ
ಜವಳಿ
ತೆಗೆದಾಳು
ಹಟ್ಟೀಗೂ
ಹೊಲಕು
ಓಡ್ಯಾಡಿ
।
ತಂಗ್ಯಮ್ಮ
ಪುಟ್ಟ
ಬಾಲಕನ
ಹಡೆದಾಳು
।।
ಬಂಗಾರದ
ಬಳೆ
ನಾಲ್ಕು
ಸಾಕು
ನನ
ಬಲಗೈಗೆ
ನಾಲ್ವರಹದ್ವಾಲೆ
ಹೂ
ಬುಗುಡಿ
।
ಗೆಜ್ಜೆಟೀಕೆ
ಸಾಕು
ತವರವರು
ಬಡವಾರು
।।
ಕಾಲುಂಗುರ
ತಂಗೀಯ
ಕರೆಯ
ಬಂದಿದಾರೆ
ಕಾರೊಡ್ಡಿ
ಹುಯ್ಯೋ
ಮಳೆರಾಯ
।
ತಂಗೀಯ
ಇಂದಿನ
ಪಯಣ
ಉಳಿಯಾಲಿ
।।
ಹಟ್ಟೀಲಾರಮ್ಮೆ
ಕೊಟ್ಟಿಗೇಲಿ
ಮೂರೆಮ್ಮೆ
ಕೊಟ್ಟಿರೋ
ಕೊಂಡಿರೋ
ನನಗೊಂದ
।
ಅಣ್ಣಯ್ಯ
ಹುಟ್ಟಲಿಲ್ಲವೇ
ನಾನು
ಮನೆಯಾಗೆ
।।
ಹುಟ್ಟಿದೆ
ತಂಗ್ಯಮ್ಮ
ಉಟ್ಟು
ಕೊಳೆ
ಪಟ್ಟೀಯಾ
ಕಟ್ಕೊಳೆ
ಕೊರಳ
ಪದಕಾವ
।
ಕಿರಿತಂಗಿ
ಬಂಗಾರ
ಬೇಡು
ಬಳೆ
ಬೇಡ
।।
ಬಂಗಾರ
ಬೇಡ
ಬಳೆ
ಬೇಡ
ಅಣ್ಣಯ್ಯ
ಕೊಡಿರೋ
ನನಗೊಂದು
ಎಮ್ಮೆಯ
।
ಅಣ್ಣಯ್ಯ
ಹೆಸರ್ಹೇಳಿ
ಮೊಸರ
ಕಡೆದೇನು
।।
ಖಂಡ್ಗ
ಹಾಲಿನೆಮ್ಮೆ
ಗುಂಗ್ರು
ಗೋಡಿನೆಮ್ಮೆ
ಅಕ್ಕಯ್ಯ
ಬೇಡಿ
ಅಳುತಾಳೆ
।
ಅಣ್ಣಯ್ಯ
ದಂಡಿಯ
ಹಾಕಿ
ಹೊಡಕೊಡಿ
।।
ಅಳುತ್ತಿದ್ದ
ತಂಗೀಗೆ
ನಗುತ
ಎಮ್ಮೆಯ
ಕೊಟ್ಟ
ಮೇಲೊಂದು
ಮಾತ
ತಾನುಡಿದ
।
ತಂಗ್ಯಮ್ಮ
ಮಡದಿಗೊಪ್ಪಿರದೆ
ಹೊಡೆದಿವ್ನಿ
।।
ನೀವೊಪ್ಪಿ
ನಿಮ್ಮ
ಮಡದ್ಯೊಪ್ಪಿ
ಕೊಟ್ಟರೆ
ಹೆಸರ್ಹೇಳಿ
ಮೊಸರ
ಕಡದೇನು
।
ಅಣ್ಣಯ್ಯ
ನಿಮ್
ದೇವ್ರೆಗೊಂದೀಪ
ಉರಿಸೇನು
।।
ತೊಟ್ಟಿಲ
ಹೊತ್ತುಕೊಂಡು
ಬಣ್ಣ
ಉಟ್ಟುಕೊಂಡು
ಅಣ್ಣ
ಕೊಟ್ಟೆಮ್ಮೆ
ಹೊಡಕೊಂಡು
।
ತೌರೂರ
ತಿಟ್ಹತ್ತಿ
ತಿರುಗಿ
ನೊಡ್ಯಾಳು
।।
ಕರಿಯ
ಸೀರೆಯನುಟ್ಟು
ಕೆರೆಯ
ನೀರಿಗೆ
ಹೋದೆ
ಬೆಲೆಯ
ಕೇಳಿದರು
ಬಹುಮಂದಿ
।
ನಮ್ಮೂರ
ದೊರೆ
ಮೋಜಿನಣ್ಣ
ಉಡಿಸ್ಯಾನು
।।