ಎದೆಯ ಭಾವದ ಮೂರು ಕವಲು
ಧಾರವಾಡದಲ್ಲಿ ನಿಂತು ಎಲ್ಲಿ ಕಲ್ಲು ತೂರಿದರೂ ಅದು ಕವಿಮನೆಯ ಮೇಲೆ ಬೀಳುತ್ತದೆನ್ನುವ ಮಾತೀಗ ಹಳೆಯದು. ಈಗ ಕರ್ನಾಟಕದ ತುಂಬಾ ಕವಿಗಳು ; ಕೊರತೆಯಿರುವುದು ಕಿವಿಗಳಿಗೆ ! ಅದೆಲ್ಲ ಪಕ್ಕಕ್ಕಿರಲಿ, ಕೆಲವು ಯುವ ಪ್ರತಿಭೆಗಳಾದರೂ ಗಮನ ಸೆಳೆಯುವಂತೆ ಕವಿತೆ ಬರೆಯುತ್ತಿರುವುದು, ಬೆನ್ನು ತಟ್ಟಿದರೆ ಬೆಳೆಯುತ್ತಾರೆ ಎಂದು ಆಸೆ ಹುಟ್ಟಿಸುವಂಥ ಇನ್ನೊಂದಷ್ಟು ಕವಿಕಿಡಿಗಳ ಸಮೂಹ ಕಾಣಿಸುತ್ತಿರುವುದು- ನೆಮ್ಮದಿ ಹುಟ್ಟಿಸುವ ವಿಷಯ. ತಾಳೀಕೋಟೆಯಲ್ಲಿ 2ನೇ ವರ್ಷದ ಬಿ.ಎ. ಕಲಿಯುತ್ತಿರುವ ಬಸವರಾಜೇಶ್ವರಿ ಪಾಟೀಲರನ್ನೇ ನೋಡಿ. ವಿದ್ಯಾರ್ಥಿದೆಶೆಯಲ್ಲಿಯೇ ನೂರಾರು ಕವಿತೆ ಬರೆದಿರುವ ಈ ಹೆಣ್ಣುಮಗಳು, ತಿದ್ದುವ ಶಿಲ್ಪಿಯಾಬ್ಬ ಸಿಕ್ಕರೆ ಒಂದಷ್ಟು ಒಳ್ಳೆಯ ಕವಿತೆ ಬರೆದಾಳು. ಆಕೆಯ ನೂರಾರು ಕವಿತೆಗಳಲ್ಲಿ ಇಲ್ಲಿವೆ ಮೂರು.
ಯಾರು ?
ಯಾರು, ಅವರ್ಯಾರು ?
ಹೂವಿನೊಳಗೆ ಅಂದವ
ಅದಕ್ಕೊಂದು ಬಣ್ಣವ
ಗಂಧದ ಮಧು ಪರಿಮಳವ
ತಂದು ಇಟ್ಟೋರ್ಯಾರು ?
ಯಾರು, ಅವರ್ಯಾರು ?
ಆಗಸದಲಿ ಮೋಡ
ಮೋಡದಲ್ಲಿ ನೀರು
ನೀರಿಗೆ ಹುರುಪ ತುಂಬಿ
ಸುರಿ ಅಂದವರ್ಯಾರು ?
ಯಾರು, ಅವರ್ಯಾರು ?
ಜಗದಾಗೆ ಅಂದವನು
ಅದಕ್ಕೆಂದೆ ಹೆಣ್ಣನ್ನು
ಮನದಾಗೆ ಆಸೆ ತುಂಬಿ
ತಂದು ಬಿಟ್ಟೋರ್ಯಾರು ?
ಯಾರು, ಅವರ್ಯಾರು ?
ಭೂಮಿಯಾಳಗೆ ಹೊನ್ನು
ಹೊನ್ನಿಗೆ ನೂರು ರೂಪ
ರೂಪಕೆ ಕೀರ್ತಿ ತುಂಬಿ
ನಮಗೆ ಕೊಟ್ಟೋರ್ಯಾರು ?
ಯಾರು, ಅವರ್ಯಾರು ?
ಜಗದೊಳು ಮನೆಯ
ಮನೆಯಲಿ ಮನುಜನ
ಮನದಲಿ ಭಾವನೆಯ
ಹುದುಗಿಸಿಟ್ಟವರ್ಯಾರು ?
ಯಾರು, ಅವರ್ಯಾರು ?
*
ಹನಿ !
ನೆಲದಿಂದಲೇ ಆಗಸಕೇರಿದೆ
ಹಲವಾಗಿ ರೂಪ ಪಡೆದೆ !
ನಾನಿಂದು ಬಂದೆ ಈ ಧರೆಗೆ
ತೊರೆದು ಹೋದ ನನ್ನ ತವರಿಗೆ !
ಎಲೆಯ ಮೇಲೆ ಹೊಳೆವಾಗ
ನಾನೊಂದು ಹವಳ,
ನಾನೊಂದು ಮುತ್ತು !
ಸೌಂದರ್ಯ ನನ್ನ ಸೊತ್ತು !
ಹೊಂಬೆಳಕಿನ ಸೂರ್ಯ ಜಗಕೊಬ್ಬನೆ ನಿಜ
ನನ್ನಲಿ ನೂರಾರು, ಸಾವಿರಾರು !
ಹನಿ ನೀರಲ್ಲೆ ಕಾಣುವುದು ಇಡೀ ಜಗ
ಮುಂದೆ ನಿಂತರೆ ಕಾಣುವುದು ನಿನ್ನ ಮೊಗ !
ನಾ ಹನಿಯೇ ಆದರೂ ಶೃಂಗಾರವು
ನಾ ಅಲ್ಪವೇ ಆದರೂ ಸೌಂದರ್ಯವು !
*
ಕಲ್ಪನೆಯ ಚಿತ್ತಾರ !
ಮನದ ಭಾವನೆಯಂತೆ
ಮೋಡಗಳ ಚಿತ್ತಾರ !
ಕಣ್ಣ ಕಲ್ಪನೆಯಂತೆ
ಮೋಡಗಳ ಆಕಾರ !
ಅಂಬೆ ಕಾಲಿಡುವ ಮಗು,
ತಾಯಿ ಕಣ್ಣಿಗೆ ;
ಆಟವಾಡೊ ಗುಂಡು ಚಂಡು
ಮುದ್ದು ಮಗುವಿಗೆ !
ಹೂವು ಬಿರಿದಂತೆ
ಅರಳೊ ಯುವ ಮನಸಿಗೆ !
ಬೆಟ್ಟವಿದೆ ಬಾನಲ್ಲಿ ,
ಮರವಿದೆ ಜೊತೆಯಲ್ಲಿ !
ನೂರು ನೂರು ಭಾವನೆ
ಅದರಂತೆಯೆ ಚಿತ್ತಾರ !
ನೂರು ನೂರು ಕಲ್ಪನೆ
ಅದರಂತೆ ಆಕಾರ !
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications