ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕವಿತೆಯಾಗದು.......
-
ರೇಣುಕಾ
ಶ್ಯಾಮ್,
ನವದೆಹಲಿ
[email protected]
ಭಾವ ಚಿಂತನೆಗಳ ಮಥಿಸಿ ಹಳತಾಗಬೇಕು
ಹುಗಿದ ಗಾಥೆಗಳ ನೋವು ಎದೆ ಮೀಟಬೇಕು.
ನೆತ್ತರಿನ ಕಣವೂ ಅಕ್ಷರವಾಗಿ ಇಳಿಬೇಕು,
ನರನಾಡಿಗಳುದ್ದಕ್ಕೂ ಹೊಮ್ಮಿ ಚಿಮ್ಮಬೇಕು.
ಹಾಡಿದುದೆಲ್ಲ
ಹಾಡಾಗುವದಿಲ್ಲ,
ಹದನಾದ
ನಾದ
ಹುರಿಗಟ್ಟಬೇಕು
ಕೊರಲಸೆರೆ
ಬಿಡಿಸಿ
ಸ್ವರಹೊಮ್ಮಬೇಕು,
ಎದೆಹೊತ್ತಿ
ರಾಗ
ಇಂಪಾಗಿ
ಹರಿಬೇಕು,
ತಿದಿಯಾತ್ತಿ
ಉಸಿರುಸಿರು
ತೀಡಿ
ಮೇಳೈಸಬೇಕು.
ಆಡಿದುದೆಲ್ಲ
ಮಾತಾಗುವದಿಲ್ಲ,
ಪ್ರತಿನುಡಿಯೂ
ಮುತ್ತಿನಂತಿರಬೇಕು,
ಇತಿಮಿತಿಗಳೊರೆಹಚ್ಚಿ
ತೂಗಿ
ಜಾಳಿಸಬೇಕು,
ತಾಗಿದರೂ
ತನಗೇ
ನೋವಾಗದಂತಿರಬೇಕು,
ಬೆಲೆಯರಿತು
ಹಿತವಾಗಿ
ಗಂಧತೇಯ್ದಂತಿರಬೇಕು.
Comments
Story first published: Monday, February 3, 2003, 5:30 [IST]