ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆಯಾಗದು.......

By Staff
|
Google Oneindia Kannada News
ಬರೆದುದೆಲ್ಲ ಕವಿತೆಯಾಗುವದಿಲ್ಲ
ಭಾವ ಚಿಂತನೆಗಳ ಮಥಿಸಿ ಹಳತಾಗಬೇಕು
ಹುಗಿದ ಗಾಥೆಗಳ ನೋವು ಎದೆ ಮೀಟಬೇಕು.
ನೆತ್ತರಿನ ಕಣವೂ ಅಕ್ಷರವಾಗಿ ಇಳಿಬೇಕು,
ನರನಾಡಿಗಳುದ್ದಕ್ಕೂ ಹೊಮ್ಮಿ ಚಿಮ್ಮಬೇಕು.

ಹಾಡಿದುದೆಲ್ಲ ಹಾಡಾಗುವದಿಲ್ಲ,
ಹದನಾದ ನಾದ ಹುರಿಗಟ್ಟಬೇಕು
ಕೊರಲಸೆರೆ ಬಿಡಿಸಿ ಸ್ವರಹೊಮ್ಮಬೇಕು,
ಎದೆಹೊತ್ತಿ ರಾಗ ಇಂಪಾಗಿ ಹರಿಬೇಕು,
ತಿದಿಯಾತ್ತಿ ಉಸಿರುಸಿರು ತೀಡಿ ಮೇಳೈಸಬೇಕು.

ಆಡಿದುದೆಲ್ಲ ಮಾತಾಗುವದಿಲ್ಲ,
ಪ್ರತಿನುಡಿಯೂ ಮುತ್ತಿನಂತಿರಬೇಕು,
ಇತಿಮಿತಿಗಳೊರೆಹಚ್ಚಿ ತೂಗಿ ಜಾಳಿಸಬೇಕು,
ತಾಗಿದರೂ ತನಗೇ ನೋವಾಗದಂತಿರಬೇಕು,
ಬೆಲೆಯರಿತು ಹಿತವಾಗಿ ಗಂಧತೇಯ್ದಂತಿರಬೇಕು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X