ನನಗಷ್ಟೇ ಗೊತ್ತು
- ರೇಣುಕಾ ಶ್ಯಾಮ್, ನವದೆಹಲಿ
[email protected]
ಒಡಲ ತುಂಬಾ ಮುಸ್ಸಂಜೆಯ ಹೊಂಗದಿರು
ಇಳಿದು ಭುವಿಗೆ ನಿನ್ನ ಜತೆಗೆ ನನ್ನನೂ ಕರೆಯಿತು,
ಹಕ್ಕಿ ಗೂಡಿನ ದಿಕ್ಕು ದಿಶಾಂತಕೂ ತಂಬೆಲರ ಹೊನಲು:
ನಿನ್ನ ಜತೆ ಕುಳಿತು ಕಳೆದೆರಡು ಕ್ಷಣಗಳೇ ಸಾಕು
ಯಾವ ಸೌಭಾಗ್ಯವೂ ಬೇಡ ನೀನೊಬ್ಬನಿರು ಸಾಕು
ಹೀಗೆ ನನ್ನೊಳಗಿನ ಭಾವ ನಿನ್ನೊಳಗಿಳಿವ ಮೌನ-
ರಾಗದ ಭಾಷೆ ...
ಹಗಲಿನ ದೀರ್ಘಯಾತ್ರೆಯ ಆಕಳಿಕೆ ಬೇಸರವೂ
ಇರುಳಿನ ಮುಸುಕಿನಲಿ ಕನಸುಗಳ ತಿಗಣೆಕಾಟ
ಆದರೂ ನಿನ್ನ ನೆನಪನೇ ಹೊದ್ದು ಮಿಸುಕಾಡಿವೆ ಬಯಕೆ;
ಕೈಜಾರಿ ಉರುಳುವ ಕ್ಷಣಗಳು ನನ್ನವಾಗಬೇಕೆಂದು
ಹಲುಬಿದೆ- ಮಿಡುಕಿದೆ, ಹೊರಳಿದೆ- ನರಳಿದೆ.. ನಾ
ಹುಡುಕಿದೆ ನಿನಗಾಗಿ, ಬಳಲಿದೆ- ಬಸವಳಿದೆ.
ನೆಗೆ ನೆಗೆದು ಓಡುವ ಎಳೆಗರುವಿನಂತೆ ಪುಟಿವ
ಹೃದಯದ ಹಂಬಲಿಕೆ ..!!
ಇದ್ದೆವು ನೀನೆತ್ತಲೋ ನಾನೆತ್ತಲೋ ಆಚೆಗೆಲ್ಲೋ ದೂರ
ಎಷ್ಟೋ ಸಾರಿ ನೀ ನಡೆದು ಬಂದಿರುವಿ ನನ್ನೂರಿನ ಹಾದಿ,
ಇರಬೇಕು ಯಾವದೋ ಜನುಮದ ಭವ ಬಂಧನದ ಸಿರಿ ;
ನಿನ್ನ ಸನಿಹದ ಹಿತವೇ ಬೇರೆ, ಮನಕೆಲ್ಲ ನಿನ್ನದೇ ಸ್ಮರಣೆ
ನೂರು ಮಾತಿಗೂ ಸಾವಿರ ವೀಣೆಯ ತಂತಿ ಮೀಟಿದೆ, ನನ್ನ-
ನರನಾಡಿಗಳಿಗೆಲ್ಲ ಸಪ್ತ ಸ್ವರಗಳ ಜೀವ ಲಾಸ್ಯವಾಡಿವೆ,
ನಿನ್ನೆದೆಗೆ ಒರಗಿ ಕರಗುವ ಬಯಕೆಯ ನೋವು.....
ಅಗಲಿಕೆಯ ಕಾವು ಗೆಳೆಯಾ !!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications