ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿಗವನಗಳು

By Staff
|
Google Oneindia Kannada News
  • ಬಿ.ಆರ್‌. ಲಕ್ಷ್ಮಣರಾವ್‌, ಚಿಂತಾಮಣಿ
ಮಾಯಾವಿ

ನಮ್ಮ ವ್ಯಾಪಾರಿಗಳಿನ್ನು
ಕೆಟ್ರೊ,
ನಮ್ಮವರೇ ನಮ್ಮವರ ಕೈ
ಬಿಟ್ರೊ,
ಮಾಯಾವಿಗೆ ಮನಸು
ಕೊಟ್ರೊ,
ಬಂದಿದೆ ಬೆಂಗಳೂರಿಗೆ
ಮೆಟ್ರೊ

*

ದಿಟ್ಟೆ

ಇವಳು ಇಂದಿನ ಹೆಣ್ಣು :
ಸ್ವಾವಲಂಬಿ, ದಿಟ್ಟೆ
ಗಂಡ ಧಿಮಾಕು ಮಾಡಿದರೆ
ಅನ್ನುತ್ತಾರೆ : ಬಿಟ್ಟೆ

*

ಪಾರ್ಥ, ಸಾರಥಿಗೆ

ಸಾಕು ಮಾಡು, ಕೃಷ್ಣ
ನಿನ್ನ ಬೋರು.
ಯುದ್ಧಕ್ಕೆ ನಾನು
ತಯ್ಯಾರು

*

ಪರಿಹಾರ

ವ್ಯವಸಾಯವನ್ನು ನಿಷೇಧಿಸಿ
ರೈತರ ಪ್ರಾಣ ಉಳಿಸಿ

*

ಪ್ರತಿಮೆ

ಗಾಂಧೀ ಪ್ರತಿಮೆಯ ತಲೆ ಮೇಲೆ
ಕೂತಿದೆ ಒಂದು ಕಾಗೆ,
ನಾವೇ ಕೂರಿಸಿದ ಹಾಗೆ.

*

ಮಡಿ

ಎಂಥೆಂಥ ಜನ ಅದನ್ನು
ಮುಟ್ಟಿದ್ದರೂ,
ಏನೇ ಕಲೆ, ಕಳಂಕ
ತೊಟ್ಟಿದ್ದರೂ,
ಮೈಲಿಗೆಯಲ್ಲ ಬಿಡಿ :
ನೋಟು
ಪುರೋಹಿತರ ಪಾಲಿಗೆ
ಸದಾ ಮಡಿ


ಪೂರಕ ಗದ್ಯ
ಭಾವಗೀತೆಗಳ ಕವಿಗೆ ಇದೋ ಭಾವನಮನ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X