Get Updates
Get notified of breaking news, exclusive insights, and must-see stories!

ಹನಿಗವನಗಳು

  • ಬಿ.ಆರ್‌. ಲಕ್ಷ್ಮಣರಾವ್‌, ಚಿಂತಾಮಣಿ
ಮಾಯಾವಿ

ನಮ್ಮ ವ್ಯಾಪಾರಿಗಳಿನ್ನು
ಕೆಟ್ರೊ,
ನಮ್ಮವರೇ ನಮ್ಮವರ ಕೈ
ಬಿಟ್ರೊ,
ಮಾಯಾವಿಗೆ ಮನಸು
ಕೊಟ್ರೊ,
ಬಂದಿದೆ ಬೆಂಗಳೂರಿಗೆ
ಮೆಟ್ರೊ

*

ದಿಟ್ಟೆ

ಇವಳು ಇಂದಿನ ಹೆಣ್ಣು :
ಸ್ವಾವಲಂಬಿ, ದಿಟ್ಟೆ
ಗಂಡ ಧಿಮಾಕು ಮಾಡಿದರೆ
ಅನ್ನುತ್ತಾರೆ : ಬಿಟ್ಟೆ

*

ಪಾರ್ಥ, ಸಾರಥಿಗೆ

ಸಾಕು ಮಾಡು, ಕೃಷ್ಣ
ನಿನ್ನ ಬೋರು.
ಯುದ್ಧಕ್ಕೆ ನಾನು
ತಯ್ಯಾರು

*

ಪರಿಹಾರ

ವ್ಯವಸಾಯವನ್ನು ನಿಷೇಧಿಸಿ
ರೈತರ ಪ್ರಾಣ ಉಳಿಸಿ

*

ಪ್ರತಿಮೆ

ಗಾಂಧೀ ಪ್ರತಿಮೆಯ ತಲೆ ಮೇಲೆ
ಕೂತಿದೆ ಒಂದು ಕಾಗೆ,
ನಾವೇ ಕೂರಿಸಿದ ಹಾಗೆ.

*

ಮಡಿ

ಎಂಥೆಂಥ ಜನ ಅದನ್ನು
ಮುಟ್ಟಿದ್ದರೂ,
ಏನೇ ಕಲೆ, ಕಳಂಕ
ತೊಟ್ಟಿದ್ದರೂ,
ಮೈಲಿಗೆಯಲ್ಲ ಬಿಡಿ :
ನೋಟು
ಪುರೋಹಿತರ ಪಾಲಿಗೆ
ಸದಾ ಮಡಿ


ಪೂರಕ ಗದ್ಯ
ಭಾವಗೀತೆಗಳ ಕವಿಗೆ ಇದೋ ಭಾವನಮನ

ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+