ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹನಿಗವನಗಳು
- ಬಿ.ಆರ್. ಲಕ್ಷ್ಮಣರಾವ್, ಚಿಂತಾಮಣಿ
ನಮ್ಮ
ವ್ಯಾಪಾರಿಗಳಿನ್ನು
ಕೆಟ್ರೊ,
ನಮ್ಮವರೇ
ನಮ್ಮವರ
ಕೈ
ಬಿಟ್ರೊ,
ಮಾಯಾವಿಗೆ
ಮನಸು
ಕೊಟ್ರೊ,
ಬಂದಿದೆ
ಬೆಂಗಳೂರಿಗೆ
ಮೆಟ್ರೊ
*
ದಿಟ್ಟೆ
ಇವಳು
ಇಂದಿನ
ಹೆಣ್ಣು
:
ಸ್ವಾವಲಂಬಿ,
ದಿಟ್ಟೆ
ಗಂಡ
ಧಿಮಾಕು
ಮಾಡಿದರೆ
ಅನ್ನುತ್ತಾರೆ
:
ಬಿಟ್ಟೆ
*
ಪಾರ್ಥ, ಸಾರಥಿಗೆ
ಸಾಕು
ಮಾಡು,
ಕೃಷ್ಣ
ನಿನ್ನ
ಬೋರು.
ಯುದ್ಧಕ್ಕೆ
ನಾನು
ತಯ್ಯಾರು
*
ಪರಿಹಾರ
ವ್ಯವಸಾಯವನ್ನು
ನಿಷೇಧಿಸಿ
ರೈತರ
ಪ್ರಾಣ
ಉಳಿಸಿ
*
ಪ್ರತಿಮೆ
ಗಾಂಧೀ
ಪ್ರತಿಮೆಯ
ತಲೆ
ಮೇಲೆ
ಕೂತಿದೆ
ಒಂದು
ಕಾಗೆ,
ನಾವೇ
ಕೂರಿಸಿದ
ಹಾಗೆ.
*
ಮಡಿ
ಎಂಥೆಂಥ
ಜನ
ಅದನ್ನು
ಮುಟ್ಟಿದ್ದರೂ,
ಏನೇ
ಕಲೆ,
ಕಳಂಕ
ತೊಟ್ಟಿದ್ದರೂ,
ಮೈಲಿಗೆಯಲ್ಲ
ಬಿಡಿ
:
ನೋಟು
ಪುರೋಹಿತರ
ಪಾಲಿಗೆ
ಸದಾ
ಮಡಿ
ಪೂರಕ ಗದ್ಯ
ಭಾವಗೀತೆಗಳ ಕವಿಗೆ ಇದೋ ಭಾವನಮನ
Comments
Story first published: Monday, February 3, 2003, 5:30 [IST]