ಮೆಟ್ಟಲಾಗದ ಮುಗಿಲು
- ಡಿ.ವಿ. ಪ್ರಹ್ಲಾದ್
[email protected]
ಜಗದ ಮೋಡದ ಮಾಡಿಗೆ
ಹೆಸರಿಟ್ಟವರು ಯಾರು
ಏರಿದಷ್ಟೂ ಎವರೆಷ್ಟು
ಉಳಿಯುತ್ತದೆ ರವಷ್ಟು
ತೆರೆದ ಅಂಗಡಿಯ ತೆರದಿ
ಕಟ್ಟಕಡೆಯ ಗುಟ್ಟಿನರಿವೆಯ ತೊರೆದು
ಮಲಗಿರುವ ತರಳೆಯನ್ನ ಮಣಿಸಿ
ಮುಂದೇನ ಗೆಲ್ಲಲಿ ? ಎಂದು
ಎದೆಯುಬ್ಬಿಸಿ ನಿಂತವರಿಗೆ
ಎರಡೇ ಎರಡು ಮೆಟ್ಟಿಲೇರಲು
ಇವತ್ತು ಉಬ್ಬಸ-ಪ್ರಯಾಸ
ಮುದುರಿನಿಂತ ಕುದುರೆಗೆ
ಕೆನೆತವಿಲ್ಲ , ಅವತ್ತಿನ ಮೊರೆತವಿಲ್ಲ
ಕೈಗೆ ಮೆತ್ತಿದ ಬಣ್ಣ ನೆನಪು
ಎಷ್ಟು ತೊಳೆದರೂ ಜಾರದು
ಹೆಜ್ಜೆ ಗುರುತುಗಳೆಲ್ಲಾ
ಹಿಮದಡಿಯ ಸಮಾಧಿ
ಈ ಹತ್ಯೆ ಹತಾರುಗಳ
ಹೊತ್ತ ಧೀರರ ಯಾವ ಮಾತೂ
ಅಲ್ಲಿ , ನಿಲ್ಲಲೆಡೆಯಿಲ್ಲ
ಅದೇ ಶೂನ್ಯ ಮೌನದ
ಹಿಮದ ನಿರುತ್ತರ
ತೆರೆದ ಅಂಗಡಿಯ ತೆರದಿ ಕಂಡವರಿಗೆ
ನಿಗೂಢ ಗುಹೆಯ ಕೀಲಿ ಕೈ
ದೊರಕಲೇ ಇಲ್ಲ
ಮಾತಿನೆತ್ತರ ಮೌನದೆತ್ತರ
ಮಾತು-ಮೌನ-ಅರ್ಥಗಳ
ಮೀರಿದ ವಿಸ್ತಾರ
ಮೂರ್ತವಾಗಲೇ ಇಲ್ಲ
ಮೆಟ್ಟಿ ಬಾವುಟ ನೆಟ್ಟ
ಪ್ರತಿ ಎತ್ತರದ ತುದಿಗೂ
ಒಂದೊಂದು ಬಟಾ ಬಯಲು
ತರಳೆ ಮಾತ್ರಾ ನಿರುಮ್ಮಳ
ಮಲಗಿದ್ದಾಳೆ
ಏರಿ ಬರುವವರ
ಮತ್ತೆ ಮತ್ತೆ ಕರೆದು
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications