ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೆಟ್ಟಲಾಗದ ಮುಗಿಲು
-
ಡಿ.ವಿ.
ಪ್ರಹ್ಲಾದ್
[email protected]
ಜಗದ ಮೋಡದ ಮಾಡಿಗೆ
ಹೆಸರಿಟ್ಟವರು ಯಾರು
ಏರಿದಷ್ಟೂ
ಎವರೆಷ್ಟು
ಉಳಿಯುತ್ತದೆ
ರವಷ್ಟು
ತೆರೆದ
ಅಂಗಡಿಯ
ತೆರದಿ
ಕಟ್ಟಕಡೆಯ
ಗುಟ್ಟಿನರಿವೆಯ
ತೊರೆದು
ಮಲಗಿರುವ
ತರಳೆಯನ್ನ
ಮಣಿಸಿ
ಮುಂದೇನ
ಗೆಲ್ಲಲಿ
?
ಎಂದು
ಎದೆಯುಬ್ಬಿಸಿ
ನಿಂತವರಿಗೆ
ಎರಡೇ
ಎರಡು
ಮೆಟ್ಟಿಲೇರಲು
ಇವತ್ತು
ಉಬ್ಬಸ-ಪ್ರಯಾಸ
ಮುದುರಿನಿಂತ
ಕುದುರೆಗೆ
ಕೆನೆತವಿಲ್ಲ
,
ಅವತ್ತಿನ
ಮೊರೆತವಿಲ್ಲ
ಕೈಗೆ
ಮೆತ್ತಿದ
ಬಣ್ಣ
ನೆನಪು
ಎಷ್ಟು
ತೊಳೆದರೂ
ಜಾರದು
ಹೆಜ್ಜೆ
ಗುರುತುಗಳೆಲ್ಲಾ
ಹಿಮದಡಿಯ
ಸಮಾಧಿ
ಈ
ಹತ್ಯೆ
ಹತಾರುಗಳ
ಹೊತ್ತ
ಧೀರರ
ಯಾವ
ಮಾತೂ
ಅಲ್ಲಿ
,
ನಿಲ್ಲಲೆಡೆಯಿಲ್ಲ
ಅದೇ
ಶೂನ್ಯ
ಮೌನದ
ಹಿಮದ
ನಿರುತ್ತರ
ತೆರೆದ
ಅಂಗಡಿಯ
ತೆರದಿ
ಕಂಡವರಿಗೆ
ನಿಗೂಢ
ಗುಹೆಯ
ಕೀಲಿ
ಕೈ
ದೊರಕಲೇ
ಇಲ್ಲ
ಮಾತಿನೆತ್ತರ
ಮೌನದೆತ್ತರ
ಮಾತು-ಮೌನ-ಅರ್ಥಗಳ
ಮೀರಿದ
ವಿಸ್ತಾರ
ಮೂರ್ತವಾಗಲೇ
ಇಲ್ಲ
ಮೆಟ್ಟಿ
ಬಾವುಟ
ನೆಟ್ಟ
ಪ್ರತಿ
ಎತ್ತರದ
ತುದಿಗೂ
ಒಂದೊಂದು
ಬಟಾ
ಬಯಲು
ತರಳೆ
ಮಾತ್ರಾ
ನಿರುಮ್ಮಳ
ಮಲಗಿದ್ದಾಳೆ
ಏರಿ
ಬರುವವರ
ಮತ್ತೆ
ಮತ್ತೆ
ಕರೆದು
Comments
Story first published: Monday, February 3, 2003, 5:30 [IST]