ಬನಶಂಕರಿಯ ಹಿರಿಯ ಕವಿಗಳು
-
ಡಿ.ವಿ.ಪ್ರಹ್ಲಾದ್
[email protected]
ಪುಷ್ಪ
ಕವಿಯ
ಹೆಸರ
ಪಾರ್ಕಿನ
ಸುತ್ತಾ
ಬೆವರಿಳಿಸುತ್ತಿದೆ
ಕಾಡು
ಕುದುರೆ,
ಕಪ್ಪು
ದೇವತೆಗೆ
ಯಾಕೋ
ಇನ್ನಿಲ್ಲದ
ಕೋಪ
ಬದುಕಿರುವವರ
ಬಗ್ಗೆ
ಬದುಕುತ್ತಿರುವ
ಬಗ್ಗೆ
ಸಿಂದಬಾದನು
ಕುಳಿತಿದ್ದಾನೆ
ಆ
ಗುಡ್ಡದ
ಕೆಳಗೆ
ತಣ್ಣಗೆ
ಕ್ರಿಯಾಪರ್ವ
ಮುಗಿದುಹೋಗಿರಬೇಕು
ನೀಲಾಂಜನಗಳು
ಹಣತೆ
ಹಾಡುಗಳು
ಮಿಣುಕುತ್ತಿವೆ
ಅನಾರೋಗ್ಯ
ಪ್ರಶಸ್ತಿ
ತಲ್ಲಣಗಳ
ನಡುವೆ
ಈ
ನಡುವೆ
ಡಿಸೆಂಬರಿನ
ಛಳಿ
ಮುದುರಿ
ಮಲಗಿಬಿಟ್ಟಿವೆ
ಕವಿತೆಗಳು
ದೀಪಾವಳಿ,
ಸಂಕ್ರಾಂತಿ,
ಯುಗಾದಿ
ಎಲ್ಲವೂ
ವಾರ್ಷಿಕ
ಶ್ರಾದ್ಧಗಳ
ಹಾಗೆ
ಬರುತ್ತವೆ
ಹೋಗುತ್ತವೆ
ಛಳಿಗೆ,
ಮರಗಟ್ಟಿದ
ಸಾಲುಗಳಿಗೆ
ಒಂಚೂರು
ಒಲೆಯ
ಮೇಲಿಟ್ಟು
ಬಿಸಿಮಾಡಿ
ಸಾಗಿಸಬೇಕು
ದೋಸೆ
ಕ್ಯಾಂಪುಗಳಿಗೆ
ಮುಗಿದು
ಹೋದವರ
ಮನೆಯ
ಮುಂದೆ
ಮುಖವಿಲ್ಲದ
ಬೆಂಕಿ
ಟೀವಿ
ಕ್ಯಾಮೆರಾಗಳ
ಅಬ್ಬರ
ಸಂತಾಪದ
ಸಾಲು
ಹೇಳಿಕೆ,
ಆತ್ಮಕ್ಕೆ
ಶಾಂತಿ
ಸಿಗಲಿ
ದುಃಖ
ಭರಿಸುವ
ಶಕ್ತಿ
,
ಭಾಷೆಗಿದು
ತುಂಬಲಾರದ
ನಷ್ಟ
ಹಣ್ಣೆಲೆಯ
ಕೊಡವಿಕೊಂಡ
ಮರದ
ಚಿಂತೆ
ಉದುರಿಬಿದ್ದ
ಎಲೆಯಲ್ಲ
,
ಬಾರದ
ಚಿಗುರು
ಕವಿ
ಮಾತ್ರ
ಅನಾಥ
ಹೊಗಳು
ಮಾತಿನ
ರಾಶಿ
ಹೂಗಳ
ಕೆಳಗೆ
ಮಲಗಿಬಿಟ್ಟಿದೆ
ಕವಿತೆ
ಮತ್ತೆ
ಏಳದ
ಹಾಗೆ
ಬನಶಂಕರಿಯ ತುಂಬಾ ಹಿರಿಯ ಕವಿಗಳ ಸಂತೆ.