ಗತಿ-ಚಿತ್ರ
- ಪ್ರಮೀಳಾ ಚೊಕ್ಕಾಡಿ, ಬೆಳ್ತಂಗಡಿ
ಜಾತಿ ಅಂತಸ್ತಿನ ಪ್ರಶ್ನೆ ನಿನ್ನಂಥ ವಿವೇಕಿಗೆ
ಸರಿಹೊಂದುವುದಿಲ್ಲ ಅಂದಿದ್ದಳು
ಅಷ್ಟಕ್ಕೂ ಅವನೇನು ಕುಡುಕನೇ? ಡಕಾಯಿತನೇ?
ಸುಸಂಸ್ಕೃತ ಸುಶಿಕ್ಷಿತ ಮಿಗಿಲಾಗಿ
ಮನುಷ್ಯ ರೂಪದ ಮನುಷ್ಯನೇ ಹೌದೆಂದಿದ್ದಳು
ಜಪ್ಪೆನ್ನಲಿಲ್ಲ ಅಪ್ಪ
2
ಮಗಳು ಮನೆಬಿಟ್ಟು ದೂರದೂರು ಸೇರಿದ್ದಾಯ್ತು
ವರ್ಷಗಟ್ಟಲೆ ಮನೆಯವರ ಒಪ್ಪಿಸಲು ಆಗಾಗ
ತವರೂರಿಗೆ ಅಲೆದದ್ದಾಯ್ತು
ದ್ವೇಷ ಸಾರ್ವಕಾಲಿಕವಲ್ಲ
ಕಳೆದ ಕಾಲ ಮರಳಿ ಬರುವುದಿಲ್ಲ
ಇರುವೊಂದು ಬದುಕಿನುದ್ದ ನಮ್ಮ ನಮ್ಮೊಳಗೆ
ಖಾಲಿತನದ ಕಾರ್ಮೋಡಗಳೇಕೆ-
ಅಂಗಲಾಚಿದಳು ಮಗಳು
ಜಪ್ಪೆನ್ನಲಿಲ್ಲ ಅಪ್ಪ
3
ಮೊನ್ನೆ ಮೊನ್ನೆ ಆ್ಯಕ್ಸಿಡೆಂಟಿನಲಿ
ತೀರಿಹೋದದ್ದೇ ಅಳಿಯ
ಯಾಕೋ ಬಂದೇಬಿಟ್ಟ ಮಾವ
ಮಗಳಿಗಿನ್ನೂ ಹರೆಯ
ಕಂಬನಿಗರೆದು ಅಪ್ಪ
ಮನೆಗೆ ಕರೆದ-
ನಕ್ಕುಬಿಟ್ಟಳು ಹುಡುಗಿ
ಅವ ಬಿಟ್ಟುಹೋದ ಉಸಿರಿನೊಂದಿಗೆ ಬದುಕುತ್ತಿದ್ದೇನೆ
ಬರಲಾರೆ ಅಂದಳು
4
ಹಳ್ಳಿಯಲ್ಲೀಗ ಮುದುಕನಿಗೆ ಮಗಳ ಬಾಲ್ಯದ್ದೇ ಮೆಲುಕುಗಳು..........
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications