ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಹುಡುಗಿಯ ಸಕಾರಣ ಕಾವ್ಯ

By Staff
|
Google Oneindia Kannada News
  • ಲಲಿತಾ ಸಿದ್ಧಬಸವಯ್ಯ, ತುಮಕೂರು
ನಂಬಿದವನಿಗೆ ನೀನು ಕೈಕೊಟ್ಟೆ
ಎಂದು ಬಿಟ್ಟಿರಿ ಸುಲೂಭವಾಗಿ
ಕೊಟ್ಟಿದ್ದು ನಿಜ ; ಒಪ್ಪಿಕೊಂಡೆ
ಆದರೆ ದೂರು ಹೊರಿಸುವ ಮೊದಲು
ಕೆದಕಿ ಮೂಲದ ಬೇರು
ಸತ್ಯಾಂಶ ತಿಳಿಯುವುದು ನಿಮ್ಮ
ಭಾದ್ಯತೆಯಲ್ಲವೇನ್ರಿ....

ಅಲ್ಲರೀ
ಆ ಗೂಬೆ ಬರೆದದ್ದೇ ಬರೆದದ್ದು
ಅದರಲ್ಲೇ ಅದಷ್ಟರಲ್ಲೇ
ಕಳೆದುಬಿಟ್ಟ
ಘನವಾದ ಮೂರು ವರುಷ
ಬರೀ ಕಾಗದದ ಮೇಲೇ ಸುರಿತ
ಧೋ ಧೋ ಧೋ ಧೋ
ಅಮೋಘ ಪ್ರೇಮ ವರ್ಷ

ಯಾರೂ ಇಲ್ಲದ ಹೊತ್ತು ಕಾಯ್ದು ಹುಡುಕಿಟ್ಟು
ಮನೆಗೆ ಕರೆದೆ
ಅಯ್ಯ ಅಲ್ಲಿಯೂ ಓದಿದ್ದು
ಅದೇ ಹಳೆಯ ಪದ
ಅದರ ತುಂಬಾ ಗಿಡುಗಿದ್ದ , ಗಿಡುಗಿದ್ದಾ
ಕ್ರಿಯಾಪದವೇ ಇರದ ಪುಂಖಾನುಪುಂಖ
ಉಪಮಾನ, ಉಪಮೇಯ, ಮತ್ತೇಭವಿಕ್ರೀಡಿತ ವೃತ್ತ
ಕವಿತೆಯಲ್ಲಿರಬೇಕು ಪ್ರತಿಮೆ, ಸರಿ
ಕವಿತೆಯೇ ದುರ್ದುಂಡು ಪ್ರತಿಮೆಯಾಗಿ ಕೂತುಬಿಟ್ಟರೆ
ಹ್ಯಾಗ್ರೀ....

ಅವ ಏನಿದ್ದರೂ ನೋಡ್ರೀ
ಸರ್ಕಸ್ಸಿನ ಪುರುಷಸಂಹ
ಬೋನಿನ ತ್ರಿಜ್ಯದೊಳಗೇ ಗಿರಕಿ
ಜಿಗಿತ ಮರೆತುಬಿಟ್ಟಿದ್ದಾನೆ ಹಿಂದಿನ ಜನ್ಮಕ್ಕೇ
ಘರ್ಜನೆಯೂ ವರ್ಜಿತ
ಪಂಜರದ ಬಾಗಿಲು ಇಟ್ಟಿದ್ದರೂ ಖುಲ್ಲಾ
ಮೂರ್ಖ ಮುಂಡೇದಕ್ಕೆ
ಹೊರಬರುವ ಇರಾದೆಯೇ ಇಲ್ಲ

ಹುಲ್ಲಲ್ಲಿ ಕೊಯ್ದಂತೆ ಹಲಸಿನ ಹಣ್ಣು
ತಿಕಮಕವೆಲ್ಲಾ ಅಂಟು
ಇವನ ನೆಂಟಸ್ತನ, ಕಟ್ಟಿಕೊಂಡವಳಿಗೆ ಗಟ್ಟಿ
ನೋಡುತ್ತಿರಿ
ಅಖಂಡ ಕನ್ಯಾ ಮುತ್ತೆೈದೆತನ

ನನಗೆ ಚಪಲವಿಲ್ಲ
ಚಿತ್ತವಿಸ್ತಾರವಿದೆ ಸುಜಲಾ ಸುಫಲಾ ವಾರಿಜಶೀತಲಾ
ಅದಕ್ಕೇ ಆ ಹೇಸರಗತ್ತೆಗೆ ಕೊಟ್ಟೆ ಕೈ
ಅಷ್ಟಕ್ಕೂ ಅವನಿಗೆ ಇನ್ನೇನು
ಕೊಡಬಹುದಿತ್ತು ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X