ಮುಂಗಾರು ಮಳೆ
- ಚಂದ್ರಗೌಡ ಕುಲಕರ್ಣಿ (ಕಡದಳ್ಳಿ)
[email protected]
ಬೇಸಿಗೆ ತಣಿಸುತ
ತಂಪನು ನೀಡಲಿ ಮುಂಗಾರು !
ದುಡು ದುಡು ಓಡುವ
ಮೋಡದ ಹಿಂಡನು
ತೇಲಿಸಿ ಬಿಡಲಿ ನೂರಾರು !
ಬರ್ ಬರ್ ಬರ್ ಬರ್
ಬೀಸುವ ಗಾಳಿ
ನೆಲದೆಡೆ ಒರಗಿಸಿ ಮರಗಳನು !
ತೂಗುಯ್ಯಾಲೆ
ಆಟವ ಆಡಿಸಿ
ಹಾಡಲಿ ಅನುದಿನ ಲಾಲಿಯನು !
ಫಳ್ಫಳ್ ಫಳ್ಫಳ್
ಫಳ್ಫಳ್ ಫಳ್ಫಳ್
ಮಿಂಚಲಿ ಮಿಂಚು ಆಗಸದಿ !
ಖಡ್ ಖಡ್ ಖಡ್ ಖಡ್
ಖಡ್ ಖಡ್ ಖಡ್ ಖಡ್
ಸಿಡಿಯಲಿ ಸಿಡಿಲು ಅಬ್ಬರದಿ !
ರಪ ರಪ ರಪ ರಪ
ಸುರಿಯಲಿ ಸುರಿಮಳೆ
ಬಿರುಕಿನ ನೆಲದ ಒಡಲೊಳಗೆ !
ಸರ ಸರ ಭರ ಭರ
ಭರ ಭರ ಸರಸರ
ಹರಿಯಲಿ ನೀರು ಜಗದೊಳಗೆ !
ಒಣಗಿದ ನೆಲದಲಿ
ಮೆತ್ತನೆ ಚಿಗುರಿನ
ಹಾಸನು ಹಾಸಲಿ ಎಲ್ಲೆಲ್ಲು !
ಹಸುರೇ ಹಸುರಿನ
ಉಸಿರನು ತುಂಬಲಿ
ಲೋಕದ ಚೇತನದೆದೆಯಲ್ಲು !
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications