Get Updates
Get notified of breaking news, exclusive insights, and must-see stories!

ನಮಸ್ಕಾರ ಸಾರ್‌ ಅಂತೀನಿ

ಅನಂತ
ಸಾರ್‌
ನಿಮ್ಮ ಕತೆ
ಮುಗಿಯದ ಕತೆ
ಎಂದೆಂದೂ ಮುಗಿಯದ ಕತೆ !
ಅದಕ್ಕೆ ಮೂಲ
ನೀವು ಬದುಕಿರುವ ಕಾಲ
ಅದಕ್ಕೆ ನೀವೆಸೆದ ಸವಾಲು
ಅದೆಲ್ಲ ಎಂದಿನ ಮಾಮೂಲು

ನಿಮ್ಮನ್ನು ಕಾಡಿದ ಪ್ರಶ್ನೆ
ನಿಮ್ಮ ಪರಿಸರದ ಪ್ರಜ್ಞೆ
ನಿಮ್ಮ ಪ್ರಜ್ಞೆಯ ಪರಿಸರ !
ಅದರಿಂದಾದ ಸಂಸ್ಕಾರ
ರಜತ ಪರದೆಯನ್ನೇರುವ ಮೊದಲು
ಬಡಿಯಿತು ನ್ಯಾಯಾಲಯದ ಬಾಗಿಲು !

ನೀವು ಮಡಿವಂತರಿಗೆ ಮಾಡಿದ ತಿಥಿ
ಅದು ಎಲ್ಲರಿಗೂ ಗೊತ್ತಿರುವ ಕತಿ !
ನೀವು ಮಾಡಿಸಿದ ಘಟಶ್ರಾದ್ಧ,
ಯುದ್ಧ, ನಂ ಸಮಾಜದ ವಿರುದ್ಧ
ಹುಲಿಯ ಕ್ರೌರ್ಯದಲ್ಲೂ
ಹೆಂಗರುಳು ಕಾಣುವ ಹುಚ್ಚು
ಮೌನಿಯ ಬಾಯಲ್ಲು
ಮಾತು ಬರಿಸುವ ನಚ್ಚು
ಭಾರತೀ ಪುರದಲ್ಲೂ ಮಂಜುನಾಥನನ್ನೇ
ಕಿತ್ತೊಗೆಯುವ ಕೆಚ್ಚು
ದೇವರ ಕೊಳದಲ್ಲಿ ಸಾಬರ ಕೈಲಿ
ಮೀನು ಹಿಡಿಸುವ ರಚ್ಚು !

ನಿಜ ಹೇಳಿ ಸಾರ್‌ ,
ಸಂಯಮಿಗಳನ್ನು ಜಾರಿಸುವಾಗ
ಒಳಗೊಳಗೇ ನಿಮಗಾಗುವುದಿಲ್ಲವಾ ಖುಷಿ ?
ಛೆ-ಛೆ ಹೀಗಾಗಬಾರದಿತ್ತು ಸಾರ್‌
ಪ್ರಾಣೇಶಾಚಾರ್ಯನಂತಹ ಆ ಋಷಿ !

ನಂಗಂತೂ ಅರ್ಥವಾಗದು ಸಾರ್‌
ನಿಮ್ಮವಸ್ಥೆ , ನಿಮ್ಮ
ಬರವಣಿಗೆಯ ವ್ಯವಸ್ಥೆ !
ಅಲ್ಲಾ ಸಾರ್‌,
ರಾಜಕೀಯ ಸಮಾಜವಾದವೇನೋ ಸರಿ,
ಆದ್ರೆ ಎಲ್ಲಾ ಬಿಟ್ಟು, ಅದೂ ಆ -
ಲಕ್ವಾ ಬಡಿದ ಬಡಪಾಯಿಯ ಮೇಲೆ
ಮಾಡಿಸಲೇ ಬೇಕಿತ್ತೇ ಸಾರ್‌ ರತಿಲೀಲೆ?
ಮೂಡಿಸಬೇಕಿತ್ತೇ ಸಾರ್‌ ಕಾಮಜ್ವಾಲೆ ?
ಎಲ್ಲಾ ಆ (ದನಕಾಯುವ) ಭಗವಂತನ ಲೀಲೆ !

ಸಾರ್‌ ಗಣಪತಿ ಪೂಜೆಯಲ್ಲಿ
ನಿಮಾಗಾದ ಆವಾಹನೆ
ಕೆಲವರಿಗೆ ಬಂದಿಲ್ಲ ಆವಗಾಹನೆಗೆ
ಅದಿರಲಿ ಸಾರ್‌ ಆಕಾಶವೆಲ್ಲಿ , ಬೆಕ್ಕೆಲ್ಲಿ ?
ರಾಜಾರಾಯರು ಶೇಕ್ಸಪಿಯರನಿಗೂ
ಬೆಕ್ಕಿಗೂ ಗಂಟು ಹಾಕಿದ ಹಾಗೆ
(ಅಂದ ಹಾಗೆ ಆ ಕಥೆಯಂತೂ
ನನಗರ್ಥವಾಗಲೇ ಇಲ್ಲ ಸಾರ್‌ )

ಸಾರ್‌,
ನಮಗೆ ನೀವು ಹಾಸನದಲ್ಲಿ ಮೇಷ್ಟ್ರಾಗಿದ್ದಾಗ
ನೀವಿನ್ನೂ ನಿಮ್ಮ ಜೀವನದ
ಸ್ತರಗಳನ್ನು ಹುಡುಕುತ್ತಿದ್ದಾಗ
ಯೌವನದ ಹಾದಿಯಲ್ಲಿ
ಆ-ಸ್ತರ ಈ ಸ್ತರಗಳನ್ನು ತಡಕುತ್ತಿದ್ದಾಗ
ನಿಮಗೆ ದೊರೆತದ್ದು ?
ಯಾವ ಸ್ತರ ? .... ಎಸ್ತರಾ ?!

ಆಮೇಲೆ ?....ಮೈಸೂರು
ಮಹಾರಾಜಾ ಕಾಲೇಜು,
ಯಾಕಿವರ ಮುಲಾಜು ?
ನಂತರ, ಗಾಂಧೀ ವಿಶ್ವ ವಿದ್ಯಾನಿಲಯ,
ಮಲೆಯಾಳಿಗಳಿಂದ ಕಮ್ಯೂನಿಸಂ ಪರಿಚಯ !
ಮುಂದೆ ಅಮೆರಿಕದಲ್ಲಿ
ದೊರೆತ 'ಪೂರ್ಣ ಪ್ರಭಾ' ವೇತನ
ಬಡಿದೆಬ್ಬಿಸಿತೇ ನಿಮ್ಮ ಚೇತನ ?
ಬರಹದಂತೆಯೇ ಸಾರ್‌ ನಿಮ್ಮ ಮಾತು,
ಬರವಿಲ್ಲದ ಚಿಂತನೆಗೆ ರುಜುವಾತು !
ಅದರಿಂದಲೇನೇ ಸಾರ್‌, ಸಾಹಿತ್ಯ
ಅಕಾಡೆಮಿಯ ಅಧ್ಯಕ್ಷತೆನೂ ಆಯ್ತು !

ಸಾರ್‌
ಸಾರ್‌ ಅಯೋವಾದಲ್ಲಾಗದಿದ್ದರೇನು ಕನ್ನಡ ಪೀಠ ?
ಭಾರತದಲ್ಲೇ ದೊರಕಿತಲ್ಲಾ ಜ್ಞಾನ ಪೀಠ !
ಕಾರಂತ-ಗೋಕಾಕ -ಮಾಸ್ತಿ
ಇವರಂತೆ ನೀವೂ ಕನ್ನಡದ ಆಸ್ತಿ !
ಕನ್ನಡ ಕಾವ್ಯರ್ಷಿಗಳ ಗುಂಪು
ದ.ರಾ. ಬೇಂದ್ರೆ- ಕುವೆಂಪು,
ಕನ್ನಡ ದಿಗ್ಗಜಗಳ ಹಿಂಡು
ಇನ್ನೂ ಬೆಳೆಯುತ್ತಿದೆ ದಂಡು !
ಸಾರ್‌,
ಯೂ ಆರ್‌ ಟ್ರೂಲಿ ಅನಂತ !
ಯು ಆರ್‌ ಅನಂತ ಮೂರ್ತಿ
ಮಾತ್ರವಲ್ಲ,
ಯು ಆರ್‌ ಅನಂತ ಕೀರ್ತಿ
ನಿಮ್ಮ ಶಿಷ್ಯ ಕೋಟಿಗೆಲ್ಲಾ
ಯು ಆರ್‌ ಅನಂತ ಸ್ಫೂರ್ತಿ !
ಸಾರ್‌,
ನೀವು ಹಿಂದೆ ಅಯೋವಾದಿಂದ
ಬರೆದ ಅಭಿಮಾನದ ಪತ್ರ
ಈಗಲೂ ಇಟ್ಟಿದ್ದೇನೆ ನನ್ಹತ್ರ,
ಅಂದು ಅದು ನಮ್ಮೇಷ್ಟ್ರು- ಖ್ಯಾತ ಲೇಖಕ
ಬರೆದದ್ದು- ಅನ್ನೋ ಖುಷಿ ಮಾತ್ರ,
ಆದ್ರೆ ಇಂದು ಅದು ಜ್ಞಾನ ಪೀಠ-
ಪ್ರಶಸ್ತಿ ವಿಜೇತರಿಂದ ಬಂದ ಮಾನಪತ್ರ !
ಇಕೋ ಸಾರ್‌,
ಇನ್ನೊಮ್ಮೆ ಕಾಲಾನಾ ಹಿಂದಕ್‌ ತಳ್ಳಿ,

ಈ ಪದ್ಯಾನ ಪ್ರೀತಿಯಿಂದ ಕೊಡ್ತೀನಿ
ಇದೋ ಸ್ವೀಕರಿಸಿ ಇಟ್ಕೊಳ್ಳಿ !
ಕನ್ನಡ ಸಾಹಿತ್ಯದ ಕಂಪು
ಮಾಡಲಿ ಕ್ವಾಂಟಂ ಜಂಪು !
ತರಲೀ ನಂಗೆಲ್ಲಾ ತುಂಬಾ ಹೆಮ್ಮೆ
ಬಂದೇಬಿಡ್ಲೀ ನೋಬೆಲ್‌ ಕೀರ್ತಿನೂ ಒಮ್ಮೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+