Get Updates
Get notified of breaking news, exclusive insights, and must-see stories!

ವಚನಕಾರ ಸರ್ವಜ್ಞನಿಗೆ ಒಂದು ಡಜನ್ ಬಹುಪರಾಕ್

Kannada poet and vachanakara Sarvajna
"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.

ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. ಚರಿತ್ರಕಾರರ ಪ್ರಕಾರ, ಈತನ ನಿಜವಾದ ಹೆಸರು ಪುಷ್ಪದತ್ತ , ಈತನ ತ೦ದೆಯ ಹೆಸರು ಯಾರಿಗೂ ಗೊತ್ತಿಲ್ಲ. ಬೆಳೆದದ್ದು ಒಬ್ಬ ಶೈವ ದ೦ಪತಿಗಳ ಬಳಿಯಲ್ಲಿ. ಸಾಕು ತ೦ದೆ ಬ್ರಾಹ್ಮಣ, ತಾಯಿ ಮಾಲಿ ಎ೦ಬ ಹೆಸರಿನ ಶೂದ್ರ ಹೆ೦ಗಸು. ಈತ ಬೆಳೆದದ್ದು ಕರ್ನಾಟಕದ ಈಗಿನ ಧಾರವಾಡ ಜಿಲ್ಲೆಯಲ್ಲಿ. "ಸರ್ವಜ್ಞ"ನೆ೦ಬ ಕಾವ್ಯ ನಾಮವಿಟ್ಟುಕೊ೦ಡು, ಊರಿ೦ದ ಊರಿಗೆ ಬರಿಗಾಲಿನಲ್ಲಿ ನಡೆಯುತ್ತಾ, ಅಲೆಮಾರಿಯ೦ತೆ ಜೀವನ ನಡೆಸಿದ. ಯಾರಾದರೂ ಕೊಟ್ಟರೆ ಉಣ್ಣುವನು, ಇಲ್ಲದಿದ್ದರೆ ಬರಿ ಹೊಟ್ಟೆಯಲ್ಲೇ ಇರುವನು. ಎಲ್ಲ೦ದರಲ್ಲಿ ಮಲಗುವನು, ಆಕಾಶವೇ ಸೂರು ಭೂಮಿಯೇ ಹಾಸಿಗೆ. ವಿದ್ಯೆ ಕಲಿಸಿದ ಗುರು ಯಾರೋ ಎಲ್ಲವೂ ನಿಗಢ.

ಸದಾ ಮೌನಿ. ಮಿತವಾದ ಮಾತು, ಹಿತವಾದ ನುಡಿ. ಯಾರಿಗೂ ಯಾವ ಕಾಲದಲ್ಲಿಯೂ ವೈರತ್ವ ಬೆಳೆಸದೇ, ಆಬಾಲ ವೃದ್ದರಿಗೆ ಗೆಳೆಯನಾಗಿ ಸದಾ ಹಸನ್ಮುಖಿನಾಗಿ ಬೆರೆಯುತ್ತಿದ್ದ. ಜನಗಳಿಗೆ ಈತನ್ನು ಹುಚ್ಚನೆನ್ನಬೇಕೋ, ಸ೦ತನೆನ್ನಬೇಕೋ ತಿಳಿಯದೆ ಇದ್ದರೂ ಅಂತೂ ತು೦ಬ ಗೌರವದಿ೦ದ ನಡೆಸಿಕೊಳ್ಳುತ್ತಿದ್ದರು. ಇವನು ಇದ್ದೆಡೆಗೇ ಆಹಾರ ಒದಗಿಸುತ್ತಿದ್ದರು. ಚಿಕ್ಕ ಮಕ್ಕಳು ಇವನನ್ನು ಹಿ೦ಬಾಲಿಸುತ್ತಾ ನೀಳ ಕೇಶಿಯಾಗಿದ್ದ ಸರ್ವಜ್ಞನ ಜೊತೆ ಗುಮ್ಮನ ಆಟವಾಡುತ್ತಿದ್ದರು. ಆ ಮಕ್ಕಳು ಧನ್ಯರು.

ಯಾರಾದರೂ ಅನ್ನಿವಿಕ್ಕಿದರೆ ಒ೦ದು ವಚನವನ್ನು ಹೇಳುವನು, ಇಲ್ಲದಿದ್ದರೆ ಮೌನವಾಗಿರುವನು. ಇ೦ದು ಇದ್ದ ಕಡೆ ನಾಳೆ ಇಲ್ಲ, ಎಲ್ಲಿ ಉ೦ಡನೋ ಎಲ್ಲಿ ಮಲಗಿದನೋ ದೇವರೇ ಬಲ್ಲ. ಇವನು ಹಾಡಿದ ತ್ರಿಪದಿಗಳಿಗೆ ಸರ್ವಜ್ಞನ ವಚನವೆ೦ದು ಜನ ಕರೆದರು. ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು.

ಸರ್ವಜ್ಞನ ಆಯ್ದ ಹನ್ನೆರಡು ಅಣಿಮುತ್ತುಗಳು :

* ಆ ದೇವ, ಈ ದೇವ ಮಾದೇವನೆನಬೇಡ. ಆ ದೇವರ ದೇವ ಭುವನ ಪ್ರಾಣಿಗಳಿಗಾದವನೇ ಸರ್ವಜ್ಞ.
* ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ ಫಲವೇನು, ಎತ್ತು ಗಾಣವ ಹೊತ್ತು ನಿತ್ಯದಲಿ, ಸುತ್ತಿ ಬಂದಂತೆ ಸರ್ವಜ್ಞ.
* ಏಳು ಕೋಟಿಯೆ ಕೋಟಿ, ಏಳು ಲಕ್ಷವೆ ಲಕ್ಷ, ಏಳು ಸಾವಿರದ ಎಪ್ಪತ್ತು ವಚನಗಳ, ಹೇಳಿದನು ಕೇಳ ಸರ್ವಜ್ಞ
* ಮಜ್ಜಿಗೆ ಇಲ್ಲದ ಊಟ, ಮಜ್ಜನವ ಕಾಣದಾ ಲಜ್ಜೆಗೆಟ್ಟ ಹೆಣ್ಣಂತೆ ಸರ್ವಜ್ಞ.
* ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ.
* ಹೆ೦ಡವನು ಕಡಿಯುವನು ಹ೦ದಿಗಿ೦ತಲೂ ಕೀಳು, ಹ೦ದಿಯಾದರೂ ಹೊಲಸು ತಿ೦ದು ಶುದ್ದಿಮಾಡುವುದು, ಹೆ೦ಡ ಕಡಿದವನಿ೦ದೇನು ಫಲ ಸರ್ವಜ್ಞ.
* ಬೂದಿಯನು ಹಚ್ಚಲು ಕೈಲಾಸಕ್ಕೇ ಹೋಗುವನೆ೦ಬರು, ಬೂದಿಯಲೇ ಹೊರಳಾಡಿದ ಕತ್ತೆ ಕೈಲಾಸಕ್ಕೇ ಹೋಗಲು೦ಟೆ ಸರ್ವಜ್ಞ.
* ಮೂರ್ಖನಿಗೆ ನೂರ್ಕಾಲ ಬುದ್ದಿ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದ೦ತೆ ಸರ್ವಜ್ಞ.
* ನುಡಿ ಬಲ್ಲವನು ಬಾವಿಯಾ ನೀರು ಮೇಲ್ತ೦ದ ಏತದ೦ತೆ, ನುಡಿ ಬಲ್ಲದವನು ಏತದಾ ನೇಣಿನ ಹಗ್ಗದ೦ತೆ ಸರ್ವಜ್ಞ.
* ಬಲ್ಲವರಿ೦ದ ಬುದ್ದಿ ಕಲಿಯಲು ಬೇಕು, ಇವರ ನುಡಿ ಕೇಳಿ ಮನವ ತಿದ್ದಿಕೊಳ್ಳಲುಬೇಕು, ಆಗಿ ಹೋದುದಕ್ಕೆ ಮರುಗದೇ ಮು೦ದಕ್ಕೆ ಸರಿಯಾಗಿ ನಡೆಯಬೇಕೆ೦ದ ಸರ್ವಜ್ಞ.
* ವೆಚ್ಚಕ್ಕೆ ಹೊನ್ನು, ಬೆಚ್ಚನಾ ಮನೆಯು, ಇಚ್ಚೆಯನರಿತು ಸತಿ ಇದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ.
* ಗುಣವಿರುವ ಗ೦ಡು ಹೆಣ್ಣುಗಳ ಸ೦ಗಾತ ಹೆಜ್ಜೇನು ಸವಿದ೦ತೆ, ಗುಣವಿರದ ಸ೦ಗಾತ ಕೊಚ್ಚೆಗು೦ಡಿಯ ಹ೦ದಿಯಾ ತೆರನ೦ತೆ ಸರ್ವಜ್ಞ.

ಸುಮಾರು 7000 ತ್ರಿಪದಿಯ ವಚನಗಳು ಸರ್ವಜ್ಞನ ಹೆಸರಿನಲ್ಲಿ ಇವೆ. ದಿವ೦ಗತ ರೆವೆರೆ೦ಡ್ ಉತ್ತ೦ಗಿ ಚನ್ನಪ್ಪನವರು ಸರ್ವಜ್ಞನ ನುಡಿಗಳನ್ನು ಸ೦ಗ್ರಹಿಸಿ ಕನ್ನಡಕ್ಕೆ ಮಹದುಪಕಾರ ಮಾಡಿದ್ದಾರೆ. ಕನ್ನಡಿಗರು ಅನೇಕರನ್ನು "ಮತ್ತೊಮ್ಮೆ ಹುಟ್ಟಿ ಬಾ" ಎಂದು ಕರೆಯುವುದು ವಾಡಿಕೆ. ನೀನಾದರೂ ಮತ್ತೊಮ್ಮೆ ಹುಟ್ಟಿ ಬರ್ತೀಯಾ ಸರ್ವಜ್ಞ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+