ನಾ ಕಂಡಂತೆ ಜೆಆರ್ ಡಿ ಟಾಟಾ : ಸುಧಾ ಮೂರ್ತಿ

ಆಗ ಬಹುಶಃ ಏಪ್ರಿಲ್ 1974 ಇರಬೇಕು. ಬೆಂಗಳೂರಿನ IISc ಆವರಣದಲ್ಲಿ ಹವಾಮಾನ ಬಿಸಿಯಾಗತೊಡಗಿದ್ದು, ಗುಲ್ ಮೋಹರ್ ಪುಷ್ಪಗಳು ಆಗ ತಾನೇ ಅರಳತೊಡಗಿದ್ದವು. ನನ್ನ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ನಾನೊಬ್ಬಳೇ ಹುಡುಗಿಯಾಗಿದ್ದೆ; ಹೀಗಾಗಿ ನಾನು ಮಹಿಳಾ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದೆ. ಅಲ್ಲಿದ್ದ ಬೇರೆ ಹುಡುಗಿಯರು ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದರು. ವಿದೇಶಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಅದೃಷ್ಟವಶಾತ್, ಅಮೆರಿಕಾದ ವಿಶ್ವವಿದ್ಯಾನಿಲಯಗಳು ನನಗೆ ವಿದ್ಯಾರ್ಥಿವೇತನವನ್ನು ನೀಡಿದ್ದವು. ಹೀಗಾಗಿ ನಾನು ಭಾರತದಲ್ಲಿ ಕೆಲಸ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಹೀಗೊಂದು ದಿನ, ಉಪನ್ಯಾಸ ಸಮುಚ್ಛಯದಿಂದ ವಿದ್ಯಾರ್ಥಿನಿಲಯಕ್ಕೆ ಹೋಗುವ ಮಾರ್ಗದಲ್ಲಿ ನೋಟೀಸ್ ಬೋರ್ಡಿನಲ್ಲಿದ್ದ ಒಂದು ಜಾಹೀರಾತನ್ನು ನೋಡಿದೆ. ಅದೊಂದು ಭಾರತದ ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆ ಟೆಲ್ಕೋದ ಉದ್ಯೋಗೀ ಸಂಬಂಧ ಜಾಹೀರಾತಾಗಿತ್ತು. ಆ ಕಂಪನಿಯು ಬುದ್ಧಿವಂತ ತರುಣ ಎಂಜಿನಿಯರುಗಳು- ಯಾರಿಗೆ ಅತ್ಯುತ್ತಮ ಶೈಕ್ಷಣಿಕ ಅರ್ಹತೆಗಳಿವೆಯೋ, ಯಾರು ಕಷ್ಟಪಟ್ಟು ದುಡಿಯಬಲ್ಲರೋ, ಅಂಥವರನ್ನು ಆಹ್ವಾನಿಸುತ್ತಿತ್ತು.
ಆ ಜಾಹೀರಾತಿನ ಕೊನೆಯಲ್ಲಿ, ಸಣ್ಣ ಅಕ್ಷರಗಳಲ್ಲಿ ಹೀಗೆ ಬರೆಯಲಾಗಿತ್ತು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬೇಕಾಗಿಲ್ಲ". ಇದನ್ನು ನೋಡಿ ನಾನು ಕ್ರುದ್ಧಳಾದೆ. ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಲಿಂಗ ಸಂಬಂಧಿ (ಸ್ತೀ-ಪುರುಷ) ತಾರತಮ್ಯವನ್ನು ಎದುರಿಸಬೇಕಾಯಿತು. ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯತ್ತಮವಾಗಿ ಸಾಧನೆ ಮಾಡಿದ್ದೆ. ನನ್ನ ತರಗತಿಯ ಬೇರೆ ಎಲ್ಲ ಹುಡುಗರಿಗಿಂತಲೂ ಉತ್ತಮವಾಗಿ ಮಾಡಿದ್ದೆ. ಆದರೆ ಆಗ ನನಗೆ ಗೊತ್ತಿರಲಿಲ್ಲ; ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಅತ್ಯುತ್ತಮ ಸಾಧನೆಯೊಂದೇ ಸಾಕಾಗುವುದಿಲ್ಲ ಅಂತ!
ಆ ಜಾಹೀರಾತನ್ನು ಓದಿದ ನಂತರ ಕೋಪದಿಂದ ಕುದಿಯುತ್ತಾ ನನ್ನ ರೂಮಿಗೆ ಹೋದೆ. ಟೆಲ್ಕೋ ಕಂಪನಿಯ ಅತ್ಯಚ್ಛ ನಿರ್ವಾಹಕರಿಗೆ ಆ ಕಂಪೆನಿಯು ಎಂತಹ ಘೋರ ಅನ್ಯಾಯವನ್ನು ಎಸಗುತ್ತಿದೆ ಎಂಬುದನ್ನು ತಿಳಿಸಬೇಕೆಂದು ನಿರ್ಧರಿಸಿದೆ. ಅದರ ಬಗ್ಗೆ ಪತ್ರವನ್ನು ಬರೆಯಲು ಶುರು ಮಾಡಿದೆ. ಆದರೆ ಟೆಲ್ಕೋ ಕಂಪೆನಿಯನ್ನು ನಡೆಸುತ್ತಿರುವವರು ಯಾರು ಎಂಬುದು ನನಗೆ ಗೊತ್ತಿರಲಿಲ್ಲ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications