ಟಾಟಾ ಕಂಪನಿಗೆ ಸುಧಾ ಬರೆದ ಪತ್ರ

"ವಿಖ್ಯಾತ ಟಾಟಾರವರು ಯಾವಾಗಲೂ ಮುಂಚೂಣಿಯಲ್ಲಿ ಇರುವಂತವರು. ಭಾರತದಲ್ಲಿ ಮೂಲಭೂತ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ವಸ್ತುಗಳು, ಉಡುಪು ಮತ್ತು ವಾಹನಗಳು- ಇಂತವುಗಳನ್ನು ಮೊಟ್ಟಮೊದಲು ಸ್ಥಾಪಿಸಿದವರೇ ಅವರು. 1900ರಿಂದ ಭಾರತದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದವರು. ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಮಂದಿರವನ್ನು ಸ್ಥಾಪಿಸಿದ ಹೆಗ್ಗಳಿಕೆ ಟಾಟಾರವರಿಗೇ ಸಲ್ಲಬೇಕು. ಇಂತಹ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯವೇ ಸರಿ! ಹೀಗಾಗಿ ಟೆಲ್ಕೋ ಅಂತಹ ಕಂಪೆನಿಯಲ್ಲಿ ಲಿಂಗ ಸಂಬಂಧೀ ತಾರತಮ್ಯ ನಡೆಸುತ್ತಿರುವುದು ನನಗೆ ಆಶ್ಚರ್ಯ ಹಾಗೂ ಕಳವಳಕ್ಕೆ ಕಾರಣವಾಗಿದೆ".
ಆ ಕಾಗದವನ್ನು ಪೋಸ್ಟ್ ಮಾಡಿದ ನಂತರ, ಆ ವಿಷಯವನ್ನು ಮರೆತುಬಿಟ್ಟೆ. ಇದಾದ ಹತ್ತು ದಿನಗಳೊಳಗೆ ಟೆಲ್ಕೋ ಕಂಪನಿ ಪುಣೆ ಶಾಖೆಯಿಂದ ಅವರ ಖರ್ಚಿನಲ್ಲಿ ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸಿದ ಟೆಲಿಗ್ರಾಂ ಬಂದಿತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ರೂಮ್ ಮೇಟ್, ಆ ಸದವಕಾಶವನ್ನು ಉಪಯೋಗಿಸಿಕೊಂಡು ಪುಣೆಗೆ ಸಂದರ್ಶನದ ನೆಪದಿಂದ ಉಚಿತವಾಗಿ ಹೋಗಿ, ಆಕೆಗೊಂದು ಪ್ರಸಿದ್ಧವಾದ ಪುಣೆ ಸೀರೆಯನ್ನು (ಕಡಿಮೆ ಬೆಲೆಯಲ್ಲಿ) ತಂದುಕೊಡಬೇಕೆಂದು ಸಲಹೆಯಿತ್ತಳು. ಯಾರು ಯಾರಿಗೆಲ್ಲ ಸೀರೆ ಬೇಕೋ, ಅವರೆಲ್ಲರಿಂದಲೂ ನಾನು ತಲಾ 300 ರೂಪಾಯಿಗಳನ್ನು ತೆಗೆದುಕೊಂಡೆ. ಅದನ್ನು ನೆನಪಿಸಿಕೊಂಡರೆ ನನಗೆ ಈಗ ನಗು ಬರುತ್ತದೆ. ಆದರೆ ಆಗ ಮುಫತ್ತಾಗಿ ಪುಣೆಗೆ ಹೋಗಿ ಬರುವ ಅವಕಾಶ ನನಗೆ ಸಾಕಾಗಿತ್ತು. ಅದು ಪುಣೆಗೆ ನನ್ನ ಮೊಟ್ಟಮೊದಲ ಭೇಟಿಯಾಗಿತ್ತು. ಮೊದಲ ನೋಟದಲ್ಲೇ ನಾನು ಆ ನಗರಕ್ಕೆ ಮಾರುಹೋಗಿದ್ದೆ.
ಇವತ್ತಿನವರೆಗೂ ಪುಣೆ ನನಗೆ ತುಂಬಾ ಪ್ರೀತಿಪಾತ್ರವಾಗಿದೆ. ನಾನು ಹುಟ್ಟಿದ ಊರು ಹುಬ್ಬಳ್ಳಿಯಲ್ಲಿ ಎಷ್ಟು ಆರಾಮವಾಗಿರುತ್ತೇನೆಯೋ, ಪುಣೆಯಲ್ಲಿಯೂ ಅದೇ ಬಗೆಯ ಆನಂದವನ್ನು ನಾನು ಅನುಭವಿಸುತ್ತೇನೆ. ಆ ನಗರ ಎಷ್ಟೊಂದು ಬಗೆಯಲ್ಲಿ ನನ್ನ ಜೀವನವನ್ನು ಬದಲಾಯಿಸಿತು! ನಾನು ಸಂದರ್ಶನಕ್ಕೆ ಪಿಂಪ್ರಿ ಬಡಾವಣೆಯಲ್ಲಿದ್ದ ಟೆಲ್ಕೋ ಆಫೀಸಿಗೆ ಹೋದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications