ಕೆಲಸ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು...

ಆ ಸಂದರ್ಶನ ಮಂಡಳಿ ನನ್ನ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ ಎಂದು ಭಾವಿಸಿ, ಸಂದರ್ಶನ ಆರಂಭವಾಗುವ ಮೊದಲೇ ನಾನು ಕೊಂಚ ಒರಟಾಗಿ ಹೇಳಿದೆ "ಇದೊಂದು ತಾಂತ್ರಿಕ ಸಂದರ್ಶನವೆಂದು ನಾನು ಆಶಿಸಿದ್ದೇನೆ". ಅವರುಗಳು ನನ್ನ ಒರಟು ನಿಲುವಿನಿಂದ ವಿಚಲಿತರಾದಂತೆ ಕಂಡುಬಂದರು. ನನಗೆ ಇಂದು, ನನ್ನ ಅಂದಿನ ವರ್ತನೆಯ ಬಗ್ಗೆ ನಾಚಿಕೆಯಾಗುತ್ತದೆ. ಮಂಡಳಿಯಲ್ಲಿದ್ದವರು ಆ ದಿನ ನನಗೆ ತಾಂತ್ರಿಕ ಪ್ರಶ್ನೆಗಳನ್ನೇ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿಯೇ ಉತ್ತರಿಸಿದೆ.
ಮಂಡಳಿಯ ಒಬ್ಬ ಹಿರಿಯ ಪುರುಷರು ಪ್ರೀತಿಯಿಂದ ನನಗೆ ಹೇಳಿದರು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕುವ ಅಗತ್ಯವಿಲ್ಲ" ಎಂದು ನಾವೇಕೆ ಜಾಹೀರಾತಿನಲ್ಲಿ ಬರೆದಿದ್ದೆವು ಎಂದು ನಿನಗೆ ಗೊತ್ತಿದೆಯೇ? ನಮ್ಮ ಕಾರ್ಖಾನೆಯ ಶಾಪ್ ಫ್ಲೋರ್ ನಲ್ಲಿ ನಾವು ಇದುವರೆಗೆ ಯಾವ ಮಹಿಳೆಯನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಇದು ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಓದುವ ಕಾಲೇಜು ಅಲ್ಲ; ಕಾರ್ಖಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀನು ಫಸ್ಟ್ rank ಎನ್ನುವುದು ನಮಗೆ ತಿಳಿದಿದೆ. ನಿನ್ನಂತವರು ಯಾವುದಾದರೂ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಬೇಕು!"
ನಾನೊಬ್ಬಳು ಹುಬ್ಬಳ್ಳಿಯಂತಹ ಸಣ್ಣ ಪಟ್ಟಣದಿಂದ ಬಂದಂತಹ ತರುಣಿ. ನನ್ನ ಪ್ರಪಂಚ ತುಂಬಾ ಚಿಕ್ಕದು. ನನಗೆ ದೊಡ್ಡ ಕಂಪನಿಗಳ ವ್ಯವಹಾರ ಮತ್ತು ಕಷ್ಟ-ನಷ್ಟಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಹೇಳಿದೆ- "ನಾವೂ ಎಲ್ಲೋ ಒಂದು ಕಡೆ ಕೆಲಸ ಶುರುಮಾಡಬೇಕಲ್ಲ! ಇಲ್ಲದಿದ್ದರೆ ಯಾವ ಮಹಿಳೆಯೂ ನಿಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗುತ್ತದೆ."
ದೀರ್ಘ ಸಂದರ್ಶನದ ನಂತರ, ಪರಮಾಶ್ಚರ್ಯವೆಂಬಂತೆ ನನಗೆ ಆ ಕೆಲಸ ದೊರಕಿತ್ತು! ಆ ಸಂದರ್ಶನ ಈ ರೀತಿ ನನ್ನ ಭವಿಷ್ಯವನ್ನು ಮೂಡಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪುಣೆಯಲ್ಲಿ ನಾನು ಕೆಲಸ ಮಾಡುತ್ತೇನೆಂದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ತದನಂತರ ನಾನು ಕರ್ನಾಟಕದಿಂದ ಬಂದಿದ್ದ ಸಂಕೋಚ ಪ್ರವೃತ್ತಿಯ ಒಬ್ಬನ ಜೊತೆ ಸ್ನೇಹ ಬೆಳೆಸಿ, ನಂತರ ಮದುವೆಯಾದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications