'ಸಂಸ್ಕೃತದಲಿನ್ನೇನು?' ಎಂದ ಕವಿ ಮಹಲಿಂಗರಂಗ

'ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲಿನ್ನೇನು?' ಹೀಗೆ ಕನ್ನಡನುಡಿಯ ಹಿರಿಮೆಯನ್ನು 17ನೆಯ ಶತಮಾನದಲ್ಲೇ ಸಾರಿದ ಮಹಾನ್ ಕವಿ ಮಹಲಿಂಗರಂಗ.
12ನೆಯ ಶತಮಾನದಿಂದ ಕನ್ನಡ ನೆಲದಲ್ಲಿ ವೀರಶೈವ ಪರಂಪರೆ ಮತ್ತು ಆ ಮತಧರ್ಮದ ಸಾಹಿತ್ಯ ಬೆಳಗತೊಡಗಿತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅದು ಇನ್ನಷ್ಟು ಶೋಭಾಯಮಾನವಾಯಿತು. ಅದೇ ವೇಳೆ 'ಕೈವಲ್ಯ ಸಾಹಿತ್ಯ'ವೆಂಬ ಸಾಹಿತ್ಯ ಪ್ರಕಾರವು ಆರಂಭವಾಯಿತು. ಅದ್ವೈತ ಸಿದ್ಧಾಂತದ ಬೆಳಕಿನಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ 'ಕೈವಲ್ಯ ಸಾಹಿತ್ಯ'ದ ಮುಖ್ಯಸ್ರೋತವಾಗಿತ್ತು. ಪರಮಾರ್ಥಸಾಧನೆಯ ಮಾರ್ಗದ ಶೋಧವೇ 'ಕೈವಲ್ಯ ಸಾಹಿತ್ಯ'ದ ಉದ್ದೇಶವಾಗಿತ್ತು. 'ಭಕ್ತಿಮಾರ್ಗ'ಕ್ಕಿಂತ ಭಿನ್ನವಾದ 'ಜ್ಞಾನಮಾರ್ಗ'ಕ್ಕೆ ಒತ್ತು ನೀಡಿದ ಸಾಹಿತ್ಯ ಈ 'ಕೈವಲ್ಯ ಸಾಹಿತ್ಯ'.
ವೀರಶೈವ ತತ್ತ್ವವನ್ನು ಅದ್ವೈತ ಸಿದ್ಧಾಂತದೊಡನೆ ಸಮನ್ವಯಗೊಳಿಸಿ ಅರ್ಥೈಸಲೆತ್ನಿಸಿದ ನಿಜಗುಣ ಶಿವಯೋಗಿಗಳು 15ನೆಯ ಶತಮಾನದಲ್ಲಿ 'ಕೈವಲ್ಯ ಸಾಹಿತ್ಯ'ಕ್ಕೆ ಶ್ರೇಷ್ಠ ಕೊಡುಗೆ ಸಲ್ಲಿಸಿದರು. ಈ ಸಾಹಿತ್ಯಪ್ರಕಾರದಲ್ಲಿ ಅನಂತರದ ಮಹತ್ತರ ಕೊಡುಗೆ 17ನೆಯ ಶತಮಾನದ ಕವಿ ಮಹಲಿಂಗರಂಗನದು. ನಿಜಜೀವನದ ಅನುಪಮ ಉಪಮೆಗಳಿಂದ ಕೂಡಿದ ಷಟ್ಪದಿಗಳ ಮೂಲಕ ಮಹಲಿಂಗರಂಗ ಕವಿಯು ತನ್ನ 'ಅನುಭವಾಮೃತ' ಕೃತಿಯಲ್ಲಿ ಆದಿಶಂಕರರ ಅದ್ವೈತ ತತ್ತ್ವವನ್ನು ಪ್ರಸ್ತುತಪಡಿಸಿರುವ ಬಗೆ ಅನನ್ಯವಾದುದಾಗಿದೆ. ಈ ಕೃತಿಯು ಕನ್ನಡದ ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳಬಹುದಾಗಿದೆ.
'ಮಹಲಿಂಗರಂಗ - ಒಂದು ಅಧ್ಯಯನ' ಮಹಾಪ್ರಬಂಧಕ್ಕಾಗಿ ಪ್ರೊ. ಗುರುಪಾದ ಘಿವಾರಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು 2009ರ ಜನವರಿಯಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ 'ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ'ಯನ್ನು 2002ನೇ ಇಸವಿಯಿಂದ ಪ್ರತಿವರ್ಷ ನೀಡುತ್ತಬಂದಿದೆ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮತ್ತು ಜಿಲ್ಲೆಯವರಾದ ಸಾಹಿತಿಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಇಂದು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇತರ ಅನೇಕ ಪ್ರಶಸ್ತಿಗಳಂತಲ್ಲದ ಈ ಪ್ರಶಸ್ತಿಗೆ ಅರ್ಹರನ್ನು ಸಾಹಿತ್ಯ ಪರಿಷತ್ತು ರಚಿಸುವ ಆಯ್ಕೆ ಸಮಿತಿಯು ನಿರ್ಧರಿಸುತ್ತದೆ. ಅನಂತರ ಪರಿಷತ್ತು ಸರ್ವಾನುಮತದಿಂದ ನಿರ್ಧಾರವನ್ನು ಸ್ವೀಕಾರ ಮಾಡುತ್ತದೆ. ಯಾವುದೇ ಅರ್ಜಿ, ಆಮಿಷ, ವಶೀಲಿಬಾಜಿಗಳಿಂದ ಹೊರತಾಗಿರುವ ಈ ಪ್ರಶಸ್ತಿಯು ಅಪ್ಪಟ ಗುಣಗ್ರಾಹಿಯಾಗಿದೆ. ವೃತ್ತಪತ್ರಿಕೆಗಳ ಸ್ಥಾನಿಕ ಆವೃತ್ತಿ ಮತ್ತು ಸ್ಥಳೀಯ ಪುಟಗಳೆಂಬ (ಅ)ವ್ಯವಸ್ಥೆಯಿಂದಾಗಿ ಈ ಪ್ರಶಸ್ತಿಗೆ ವ್ಯಾಪಕ ಪ್ರಚಾರ ಸಿಕ್ಕಿಲ್ಲ, ಅಷ್ಟೆ.
ಕಳೆದ ಏಳು ವರ್ಷಗಳಲ್ಲಿ ಕ್ರಮವಾಗಿ ಲಲಿತಮ್ಮ ಡಾ. ಚಂದ್ರಶೇಖರ್, ಮುದೇನೂರು ಸಂಗಣ್ಣ, ಬಿದರಹಳ್ಳಿ ನರಸಿಂಹಮೂರ್ತಿ, ಕುಂ.ಬಾ. ಸದಾಶಿವಪ್ಪ, ಬಿ.ವಿ. ವೀರಭದ್ರಪ್ಪ, ಶ್ರೀನಿವಾಸ ಸುತ್ರಾವೆ ಮತ್ತು ಟಿ. ಗಿರಿಜ ಇವರು ಗಳಿಸಿರುವ ಈ ಪ್ರಶಸ್ತಿಯು ಈ ಬಾರಿ (2009ನೇ ಸಾಲಿಗೆ) ಈ ಲೇಖಕನಿಗೆ ಸಂದಿದೆ.
'ದಟ್ಸ್ ಕನ್ನಡ'ದ ಓದುಗರು ಬಯಸಿದ್ದರಿಂದಾಗಿ ಇವಿಷ್ಟು ವಿವರಗಳು. ಅಭಿನಂದನೆ ತಿಳಿಸಿರುವ ಮಿತ್ರರೆಲ್ಲರಿಗೂ ಈ ಲೇಖಕನ ಧನ್ಯವಾದಗಳು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications