ಆನಂದರಾಮ ಶಾಸ್ತ್ರೀಗೆ ಮಹಲಿಂಗರಂಗ ಪ್ರಶಸ್ತಿ
ದಾವಣಗೆರೆ,
ಜ. 20 : ಕನ್ನಡ ಸಾಹಿತ್ಯಕ್ಷೇತ್ರದ ಶ್ರೇಷ್ಠರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾದ "ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ"ಯನ್ನು ಪತ್ರಕರ್ತ, ಅಂಕಣಕಾರ ಎಚ್. ಆನಂದರಾಮ ಶಾಸ್ತ್ರೀ ಅವರಿಗೆ ನೀಡಲಾಗಿದೆ. id="toptextpromo">ಕನ್ನಡ
ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ ಪ್ರತಿವರ್ಷ ನೀಡುತ್ತಿರುವ ಈ ಪ್ರಶಸ್ತಿಯು ಹತ್ತು ಸಾವಿರ ರುಪಾಯಿ ನಗದು ಪುರಸ್ಕಾರ ಸಹಿತ ಸನ್ಮಾನವನ್ನು ಒಳಗೊಂಡಿರುತ್ತದೆ. id='are-slot-1' class='oiad oi-axt oiadv'> id='top-searched-articles'>ನಾಲ್ಕೂವರೆ
ದಶಕಗಳ ಸಾಹಿತ್ಯಕೃಷಿ ಮತ್ತು ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರನಾಗಿ ಆನಂದರಾಮ ಶಾಸ್ತ್ರೀ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ 2009ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸದ್ಯದಲ್ಲೇ ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.











Click it and Unblock the Notifications