ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದರಾಮ ಶಾಸ್ತ್ರೀಗೆ ಮಹಲಿಂಗರಂಗ ಪ್ರಶಸ್ತಿ

|
Google Oneindia Kannada News

H Anandarama Shastry, Bengaluru
ದಾವಣಗೆರೆ, ಜ. 20 : ಕನ್ನಡ ಸಾಹಿತ್ಯಕ್ಷೇತ್ರದ ಶ್ರೇಷ್ಠರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾದ "ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ"ಯನ್ನು ಪತ್ರಕರ್ತ, ಅಂಕಣಕಾರ ಎಚ್. ಆನಂದರಾಮ ಶಾಸ್ತ್ರೀ ಅವರಿಗೆ ನೀಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ ಪ್ರತಿವರ್ಷ ನೀಡುತ್ತಿರುವ ಈ ಪ್ರಶಸ್ತಿಯು ಹತ್ತು ಸಾವಿರ ರುಪಾಯಿ ನಗದು ಪುರಸ್ಕಾರ ಸಹಿತ ಸನ್ಮಾನವನ್ನು ಒಳಗೊಂಡಿರುತ್ತದೆ.

ನಾಲ್ಕೂವರೆ ದಶಕಗಳ ಸಾಹಿತ್ಯಕೃಷಿ ಮತ್ತು ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರನಾಗಿ ಆನಂದರಾಮ ಶಾಸ್ತ್ರೀ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ 2009ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸದ್ಯದಲ್ಲೇ ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X