ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆನಂದರಾಮ ಶಾಸ್ತ್ರೀಗೆ ಮಹಲಿಂಗರಂಗ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ ಪ್ರತಿವರ್ಷ ನೀಡುತ್ತಿರುವ ಈ ಪ್ರಶಸ್ತಿಯು ಹತ್ತು ಸಾವಿರ ರುಪಾಯಿ ನಗದು ಪುರಸ್ಕಾರ ಸಹಿತ ಸನ್ಮಾನವನ್ನು ಒಳಗೊಂಡಿರುತ್ತದೆ.
ನಾಲ್ಕೂವರೆ ದಶಕಗಳ ಸಾಹಿತ್ಯಕೃಷಿ ಮತ್ತು ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರನಾಗಿ ಆನಂದರಾಮ ಶಾಸ್ತ್ರೀ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ 2009ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸದ್ಯದಲ್ಲೇ ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
Comments
ಕನ್ನಡ ಸಾಹಿತ್ಯ ಅಂಕಣಕಾರ journalist ದಾವಣಗೆರೆ kannada literature ಪ್ರಶಸ್ತಿ award ಪತ್ರಕರ್ತ ಆನಂದರಾಮ ಶಾಸ್ತ್ರೀ anandarama shastri
Story first published: Wednesday, January 20, 2010, 15:22 [IST]