ಕನ್ನಡಿಗರ ಹೆಮ್ಮೆಯ ‘ಹಂಪಿ ವಿವಿ’
ಬಳ್ಳಾರಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಜೆ.ಲಕ್ಕಪ್ಪ ಗೌಡರ ಯಶಸ್ವೀ ಇನಿಂಗ್ಸ್ ಮುಂದಿದೆ. ಅವರು ಶನಿವಾರ (ಮಾರ್ಚ್ 7) ಡಾ. ಕೆ.ವಿ ನಾರಾಯಣ್ ಅವರಿಗೆ ತಮ್ಮ ಉತ್ತರಾಧಿಕಾರವನ್ನು ಒಪ್ಪಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿವಿಗೆ ಹೊಸ ಕುಲಪತಿಗಳನ್ನು ನೇಮಿಸಲಾಗಿಲ್ಲ . ಹೊಸ ಕುಲಪತಿಗಳ ನೇಮಕಾತಿ ಆಗುವವರೆಗೂ ಕೆ.ವಿ.ನಾರಾಯಣ ಅವರು ಕುಲಪತಿಗಳ ಕಾರ್ಯಭಾರ ನಿರ್ವಹಿಸುವರು.
ಡಾ. ಲಕ್ಕಪ್ಪ ಗೌಡರ ಕಾಲಾವಧಿಯಲ್ಲಿ ಹಂಪಿ ವಿವಿ ತನ್ನ ಚಟುವಟಿಕೆಗಳ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ. ಸ್ವತಃ ಜಾನಪದ ಪರಿಣತರಾದ ಲಕ್ಕಪ್ಪಗೌಡರ ವಿವಿಗೆ ನೀಡಿದ ಕೊಡುಗೆಗಳಲ್ಲಿ ಜಾನಪದ ಲೋಕ (ಜನಪದಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯ) ಮತ್ತು ನವೀಕೃತ ಗ್ರಂಥಾಲಯ ಬಹು ಮುಖ್ಯವಾದುದಾಗಿದೆ.
ಲಕ್ಕಪ್ಪ ಗೌಡರ ನೇತೃತ್ವದಲ್ಲಿದ್ದ ವಿಶ್ವವಿದ್ಯಾಲಯ ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿಬಿಟ್ಟಿದೆ. ಹಂಪಿ (ಕಮಲಾಪುರ) ವಿಶ್ವವಿದ್ಯಾಲಯಕ್ಕೆ ಭೇಟಿಯಿತ್ತ ನ್ಯಾಕ್ ಕಮಿಟಿಯು(ಯುಜಿಸಿ) ಅಲ್ಲಿನ ಬೆಳವಣಿಗೆ ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದೆ. ನ್ಯಾಕ್ ಬಿ++(85%) ದರ್ಜೆ ವಿಶ್ವವಿದ್ಯಾಲಯಕ್ಕೆ ದೊರೆತಿದೆ. ವಿಶ್ವವಿದ್ಯಾಲಯವು ಭೇಟಿಯಿತ್ತ ಪ್ರತಿಯಾಬ್ಬ ತಜ್ಞರ ಪ್ರಶಂಸೆಗೂ ಪಾತ್ರವಾಗಿದೆ.
13 ವರ್ಷಗಳ ಹಿಂದೆ, ಕಮಲಾಪುರ ಮತ್ತು ಪಪಿನಾಯಕನ ಹಳ್ಳಿಗಳ ನಡುವಿನ 600 ಎಕರೆಗಳ ಜಾಗದಲ್ಲಿ ಪ್ರಾರಂಭವಾದ ಕನ್ನಡ ವಿವಿ , ಡಾ. ಚಂದ್ರಶೇಖರ ಕಂಬಾರರ(ಸ್ಥಾಪಕ ಕುಲಪತಿ) ಕ್ರಿಯಾದಕ್ಷತೆಯಲ್ಲಿ ಅಲ್ಪಾವಧಿಯಲ್ಲೇ ತನ್ನ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿತ್ತು . ಹಂಪಿ ವಿಶ್ವವಿದ್ಯಾಲಯದ ಆವರಣ ಮತ್ತು ಕಟ್ಟಡಗಳು ವಿಜಯನಗರ ಸಾಮ್ರಾಜ್ಯದ ್ಫಸೆಳಕನ್ನು ಕಣ್ಣೆದುರು ತಂದಿರಿಸುವಂತಿವೆ.
ಇತ್ತೀಚೆಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ಡಾ. ಚಂದ್ರಶೇಖರ್ ಕಂಬಾರರಿಗೆ ನಾಡೋಜ ಪ್ರಶಸ್ತಿ ಪ್ರದಾನ ಮಾಡಿ ಕಂಬಾರರ ಕ್ರಿಯಾಶೀಲತೆಯನ್ನು ಕೊಂಡಾಡಿದ್ದರು.
ಕನ್ನಡ ಮತ್ತು ಸಂಸ್ಕೃತಿಯ ಸರ್ವತೋಮುಖ ಬೆಳವಣಿಗೆಯ ಕಾರ್ಯದಲ್ಲಿ ಕನ್ನಡ ವಿವಿ ತೊಡಗಿದೆ. ಕನ್ನಡದ ಬಗೆಗಿನ ಪ್ರತಿಯಾಂದೂ ಮಾಹಿತಿ, ವಿಷಯಗಳು ಇಲ್ಲಿ ದೊರಕುತ್ತದೆ. ಒಟ್ಟು 16 ಅಧ್ಯಯನ ಕೇಂದ್ರಗಳಿದ್ದು ಗತಕಾಲದ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವಂಥಹ ನೂರಾರು ಪುಸ್ತಕಗಳನ್ನು ವಿವಿ ಹೊರ ತಂದಿದೆ. ವಿಶ್ವಕೋಶಗಳು, ವಿಜ್ಞಾನ ಸಂಪುಟಗಳು, ವೈದ್ಯಕೀಯ ವಿಶ್ವಕೋಶಗಳ್ನು ಮತ್ತು ಕನ್ನಡ ಶಾಸನಗಳು ವಿವಿ ಪ್ರಕಟಣೆಯಲ್ಲಿ ಸೇರಿವೆ. ಜಾನಪದರು ಹಾಗೂ ಬುಡಕಟ್ಟು ಜನಾಂಗಗಳ ಮೇಲೆ ಮಹತ್ವದ ಸಂಶೋಧನೆ ಇಲ್ಲಿ ನಡೆಯುತ್ತಿದೆ. ಬಾದಾಮಿಯಲ್ಲಿ ಗುಡಿ ಕೈಗಾರಿಕೆಗಳ ಶಾಲೆಗಳನ್ನು ವಿವಿ ವತಿಯಿಂದ ಪ್ರಾರಂಭಿಸಲಾಗಿದೆ.
20 ವಿಷಯಗಳ ಮೇಲೆ ಡಿಪ್ಲೊಮಾ ಕೋರ್ಸುಗಳು, ಕನ್ನಡ, ತೆಲಗು ಮತ್ತು ತಮಿಳು ಭಾಷೆಗಳ ಸರ್ಟಿಫಿಕೇಟ್ ಕೋರ್ಸುಗಳು, ಸಂಗೀತ ಕೋರ್ಸುಗಳು ಈಗಾಗಲೇ ನಡೆಯುತ್ತಿವೆ. ಕಳೆದ 10 ವರ್ಷಗಳಿಂದ 750 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಮುಂದಿನ ಮಾರ್ಚ್ ತಿಂಗಳೊಳಗಾಗಿ ಇನ್ನೂ 100 ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.
ಕುವೆಂಪುರವರ ಜನ್ಮಸ್ಥಳದಲ್ಲಿ ಹಂಪಿ ವಿವಿ ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದೆ. ಸಾಗರ, ಬೆಂಗಳೂರು ಮತ್ತು ಬೀದರ್ಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಿದ್ದು, ವಿಶ್ವವಿದ್ಯಾಲದ ಮಾರ್ಗದರ್ಶನದಡಿಯಲ್ಲಿ ಅವುಗಳು ನಡೆಯುತ್ತವೆ ಎಂದು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಲಕ್ಕಪ್ಪ ಗೌಡ ತಿಳಿಸಿದ್ದಾರೆ.
ಲಕ್ಕಪ್ಪಗೌಡರಿಗೆ ಅಭಿನಂದನೆಗಳು ಹಾಗೂ ಅವರ ಮುಂದಿನ ದಿನಗಳಿಗೆ ಶುಭಾಶಯಗಳು.
ಕನ್ನಡ ವಿಶ್ವ ವಿದ್ಯಾಲಯ ಕನ್ನಡಿಗರೆಲ್ಲರ ಹೆಮ್ಮೆಯ ಪ್ರಾತಿನಿಧಿಕ ಕೇಂದ್ರವಾಗಿದೆ,
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications