ಬನ್ನಂಜೆ ಗೋವಿಂದಾಚಾರ್ಯರ ಮಧ್ವವಿಜಯ ಬಿಡುಗಡೆ
ಬೆಂಗಳೂರು: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ‘ಶ್ರೀ ಮಧ್ವ ವಿಜಯ’ ಕೃತಿ ಫೆ.2 ರಂದು ನಗರದ ಶ್ರೀ ಪೂರ್ಣಪ್ರಜ್ಞ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಯಾಯಿತು.
ಜನ ಸಾಮಾನ್ಯರೂ ನಿತ್ಯವು ಓದಬಹುದಾದ ಹಾಗೂ ವಿದ್ವಾಂಸರ ಅಧ್ಯಯನಕ್ಕೂ ತಕ್ಕುದಾದ ಕೃತಿ ಎಂದು ಬನ್ನಂಜೆಯವರ ಮಧ್ವ ವಿಜಯ ಕೃತಿಯನ್ನು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಬಣ್ಣಿಸಿದರು.
ಬನ್ನಂಜೆಯವರು ತಮಮ ಕೃತಿಯಲ್ಲಿ ಕಾವ್ಯದ ಅನನ್ಯ ಲಕ್ಷಣಗಳನ್ನು ತಮ್ಮದೇ ಶೈಲಿಯಲ್ಲಿ ತಿಳಿಸಿದ್ದಾರೆ. 8 ಮೀಮಾಂಸೆಗಳನ್ನು ಒಳಗೊಂಡಿರುವ ಈ ಕೃತಿಯ ಪ್ರತಿ ಮೀಮಾಂಸೆಯೂ ಒಂದೊಂದು ಡಾಕ್ಟರೇಟ್ ಪದವಿ ಪಡೆಯುಷ್ಟು ಉನ್ನತವಾಗಿವೆ ಎಂದು ಶ್ರೀಪಾದರು ಹೇಳಿದರು.
ಗುರುಕುಲ ಹಾಗೂ ವಿದ್ಯಾಪೀಠಗಳಲ್ಲಿ ಶ್ರೀ ಮಧ್ವ ವಿಜಯದ ಕುರಿತು ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡುವಂತೆ ಶ್ರೀಪಾದರು ಸಲಹೆ ಮಾಡಿದರು.
ಕೃತಿ ಕರ್ತೃ ಬನ್ನಂಜೆ ಗೋವಿಂದಾಚಾರ್ಯ, ವಿದ್ವಾನ್ ಗುರುಪ್ರಸಾದಾಚಾರ್ಯ, ಪ್ರೊ.ಎ.ಹರಿದಾಸಭಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಸಾಹಿತ್ಯ
ಸೊಗಡು