ಎಚ್.ಎಲ್.ನಾಗೇಗೌಡ, ರಾ.ಸಿಂಗ್ ಬಾಬು ಸೇರಿ6 ಮಂದಿಗೆ ಸಂದೇಶ ಪ್ರಶಸ್ತಿ
ಮಂಗಳೂರು : ರಾಮನಗರ ಬಳಿ ಜಾನಪದ ಲೋಕ ಕಟ್ಟಿದ ಡಾ.ಎಚ್.ಎಲ್. ನಾಗೇಗೌಡ, ಸಾಹಿತಿ ಯು.ಪಿ. ಉಪಾಧ್ಯಾಯ, ಪತ್ರಕರ್ತ ಎ.ಈಶ್ವರಯ್ಯ, ಸಿನಿಮಾ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸೇರಿದಂತೆ 6 ಸಾಧಕರನ್ನು ಸಂದೇಶ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೈಸೂರಿನ ಜೆ.ಸಿ.ವೇಗಸ್ (ಕೊಂಕಣಿ ಸಾಹಿತ್ಯ), ಹುಬ್ಬಳ್ಳಿಯ ಲಿಂಗರಾಜ ಗವಾಯಿ ಹಿರೇಮಠ (ಕಲೆ) ಪ್ರಶಸ್ತಿಗೆ ಆರಿಸಲಾಗಿರುವ ಇತರ ಇಬ್ಬರು. ತುಳು ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಗಾಗಿ ಯು.ಪಿ. ಉಪಾಧ್ಯಾಯ ಅವರನ್ನು ಪ್ರಶಸ್ತಿಗೆ ಆರಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಾಜೇಂದ್ರ ಸಿಂಗ್ ಬಾಬು ಅವರಿಗೆ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿ ನಿರ್ಧರಿಸಿತು ಎಂದು ಆಯ್ಕೆ ಸಮಿತಿ ಅಧ್ಯಕ್ಷ ವಿವೇಕ ರೈ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ಪ್ರಶಸ್ತಿ : ಡಾ.ಒಲಿಂಡಾ ಪೆರೇರಾ, ಮುಂಬಯಿಯ ಬಿ.ಎ.ಸನದಿ, ಸಾಗರದ ಎಚ್.ಎಸ್.ಗೌರಮ್ಮ ಮತ್ತು ಬೆಂಗಳೂರಿನ ಕರುಣಾಶ್ರಯ ಹಾಗೂ ಬೆಳಗಾವಿಯ ಬರ್ಡ್ಸ್ ಸಂಸ್ಥೆಗಳಿಗೆ ಸಂದೇಶ ವಿಶೇಷ ಪ್ರಶಸ್ತಿ ಕೊಡಲಾಗುವುದು. ಬರುವ ಫೆಬ್ರವರಿ 16ರಂದು ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಶಸ್ತಿಗಳನ್ನು ಪ್ರದಾನ ಮಾಡುವರು ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು