ಗುಲಾಬಿ ಕೊಡುವ ಹೃದಯಕ್ಕೆ ಪ್ರೀತಿಯ ಬರವಿದೆ..!
ವರ್ಷದಿಂದ ವರ್ಷಕ್ಕೆ ಪ್ರೇಮಿಗಳ ದಿನಾಚರಣೆಯಲ್ಲಿಯೂ ಒಂದಷ್ಟು ಅದ್ಧೂರಿತನ, ವೈಭವ, ಜಾಲಿತನ ಎಲ್ಲವೂ ಕಂಡು ಬರುತ್ತಿದೆ. ಗುಲಾಬಿ ಹೂಗಳನ್ನು ನೀಡುವ ಕೈನಲ್ಲಿ ಅದ್ಧೂರಿತನವಿದೆಯಾದರೂ ಹೃದಯದಲ್ಲಿ ಪ್ರೀತಿಗೆ ಬರವಿರುವುದು ಎದ್ದು ಕಾಣುತ್ತಿದೆ.
ಗುಲಾಬಿ ಮೂಲಕ ಪ್ರೀತಿಯನ್ನು ನಿವೇದಿಸುತ್ತಿದ್ದ ಕಾಲವಿತ್ತು. ಐ ಲವ್ ಯೂ ಎನ್ನಲು ಧೈರ್ಯ ಸಾಲದೆ, ಮುಚ್ಚಿಟ್ಟುಕೊಂಡು ದಿನ ಕಳೆಯುತ್ತಿದ್ದ ಕಾಲವೂ ಇತ್ತು. ಈಗ ಎಲ್ಲ ಬದಲಾಗಿದೆ. ಮೊಬೈಲ್, ಸಾಮಾಜಿಕ ಜಾಲ ತಾಣಗಳು ಬಂದ ಬಳಿಕ ಎಲ್ಲವೂ ಸಲೀಸಾಗಿದೆ. ಆದರೆ ಅದರ ಜತೆಜತೆಯಲ್ಲಿ ಬಹಳಷ್ಟು ಜನ ಪ್ರೀತಿ, ಪ್ರೇಮವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೆಲ್ಲ ಟೈಂಪಾಸ್ ಎಂಬಂತೆ ಮೊದಲೇ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.
ಲೀವಿಂಗ್ ಟುಗೆದರ್ ಸಂಸ್ಕೃತಿ ಹೆಚ್ಚಾಗುತ್ತಿರುವುದರಿಂದ ವ್ಯಾಲೆಂಟೆನ್ಸ್ ಡೇ ಆಚರಣೆಗೆ ಸೀಮಿತವಾಗಿ ಪ್ರೇಮಿಗಳನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಪಾಶ್ಚಿಮಾತ್ಯರ ಪ್ರಭಾವ ಇಲ್ಲಿನ ಯುವ ಜನತೆಯ ಮೇಲೆ ಬೀರುತ್ತಿದೆ. ಯುವಕ, ಯುವತಿಯರು, ದುಡಿಯುತ್ತಿರುವುದರಿಂದ ಅವರ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಅವರಲ್ಲಿರುವ ಕಾರಣ ಯಾರ ಮುಲಾಜಿಗೂ ಒಳಗಾಗದೆ ನಮ್ಮ ಬದುಕು ನಮಗೆ ಎಂಬಂತೆ ಬದುಕುತ್ತಿದ್ದಾರೆ. ಹಾಗಾಗಿ ದುಡಿಮೆಯ ನಡುವಿನ ರಿಲ್ಯಾಕ್ಸ್ ಎಂಬಂತೆ ಗೋಚರಿಸತೊಡಗಿದ್ದು, ಅದು ಎಂಜಾಯ್ ಎಂಬಂತೆ ಭಾಸವಾಗುತ್ತಿದೆ. ತಿಂದುಂಡು ಓಡಾಡಿ, ಮೈಮನ ಉಲ್ಲಾಸಗೊಳಿಸುವುದಷ್ಟಕ್ಕೆ ಸೀಮಿತವಾಗುತ್ತಿದೆ.

ಈಗ ಗುಲಾಬಿ ಕೊಟ್ಟರೂ ಕೊಡುವಾತನ ಹೃದಯ ಖಾಲಿಯಾಗಿದೆ. ಎಲ್ಲವೂ ತೋರಿಕೆಯ ನಾಟಕವಾಗುತ್ತಿದೆ. ಇದರ ಪರಿಣಾಮವೇ ವಂಚನೆ, ಮೋಸ, ಕೊಲೆ, ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ಹೃದಯಗಳ ಮಿಲನಕ್ಕಿಂತ ದೇಹಗಳ ಮಿಲನ ಹೆಚ್ಚಾಗುತ್ತಿದೆ. ಅದು ಬ್ಲಾಕ್ಮೇಲ್ಗೊಳಗಾಗಿ ಬದುಕು ಮೂರಾಬಟ್ಟೆಯಾಗುತ್ತಿದೆ.
ಹಿಂದೆಲ್ಲ ಪ್ರೇಮಿಗಳ ದಿನದಂದು ಎಲ್ಲವನ್ನೂ ಗುಲಾಬಿಯೇ ಹೇಳುತ್ತಿತ್ತು. ಪ್ರೇಮಿಗಳು ಗುಲಾಬಿ ಹೂವುಗಳಲ್ಲಿನ ಒಂದೊಂದು ಬಣ್ಣಕ್ಕೂ ಒಂದೊಂದು ರೀತಿಯ ಅರ್ಥವನ್ನು ಕಲ್ಪಿಸಿಕೊಳ್ಳುತ್ತಿದ್ದರು.
ಚೆಂಗುಲಾಬಿ ನೀಡಿದರೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರ್ಥ ನೀಡುತ್ತಿತ್ತು. ಅಲ್ಲದೆ ಅದು ಪ್ರೀತಿಯ ಸಂಕೇತವಾಗಿ ಎಲ್ಲರನ್ನು ಸೆಳೆಯುತ್ತಿತ್ತು. ಹಳದಿ ಬಣ್ಣದ ಹೂ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರ್ಥವನ್ನು ಸೂಚಿಸುತ್ತಿತ್ತು. ಬಿಳಿ ಗುಲಾಬಿ ನಿರಂತರ ಸ್ನೇಹವನ್ನೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ಹೇಳುತ್ತಿತ್ತು. ಈ ಹೂಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದು ಅವತ್ತು ತೆರೆಮರೆಯಲ್ಲಿ ಕಾಣುತ್ತಿತ್ತು.

ಬದಲಾದ ಕಾಲಘಟ್ಟದಲ್ಲಿ ಗುಲಾಬಿ ಹೂ ಹಾಗೆಯೇ ಇದೆ. ಆದರೆ ಅದನ್ನು ಕೊಡುವವರ ಮನಸ್ಥಿತಿ ಬದಲಾಗಿದೆ. ಕೊಟ್ಟ ಹೂವನ್ನು ಬಾಡದೆ ಜೋಪಾನವಾಗಿ ಕಾಪಿಡುವ ಮನಸ್ಸು ಇಲ್ಲದಾಗಿದೆ. ಹಾಗಾಗಿ ಎಲ್ಲೋ ಒಂದು ಕಡೆ ಪ್ರೀತಿ ಪ್ರೇಮ ಹಾದಿ ತಪ್ಪುತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ಅದು ಏನೇ ಇರಲಿ ಪ್ರೀತಿ ನಿರಂತರ ಅದುವೇ ಶಾಶ್ವತ.. ಅದರಾಚೆಗೆ ಎಲ್ಲವೂ ನಶ್ವರ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications