Get Updates
Get notified of breaking news, exclusive insights, and must-see stories!

ಹಳೆಯದಲ್ಲವ ಮರೆಯಿರೈ ಹೊಸತು ಬಾಳ ತೆರೆಯಿರೈ

Ugadi portrayal in Kannada poems
"ಹಳೆಯದಲ್ಲವ ಮರೆಯಿರೈ
ಹೊಸತು ಬಾಳ ತೆರೆಯಿರೈ
ಮುಪ್ಪು ಹರೆಯ ಮರೆಯುತ
ಬೆಪ್ಪು - ಜಾಣ ಬೆರೆಯುತ
ಲಗ್ಗೆ - ಚೆಂಡು, ಚಿಣ್ಣಿದಾಂಡು
ಏಣಿ ಉಯ್ಯಾಲೆ ಆಡಿರೈ"
(ಹಿರಿಯ ಕವಿ ಪು.ತಿ.ನರಸಿಂಹಾಚಾರ್)

ಜೀವನದಲ್ಲಿ ಕಹಿ, ಕೆಟ್ಟ ಘಳಿಗೆಗಳನ್ನು ಮರೆತು, ಮತ್ತೋರ್ವರ ಕಷ್ಟ-ಸುಖಗಳಿಗೆ ಪ್ರತಿಸ್ಪಂದಿಸುವ ಭಾವನೆ ಬೆಳೆಸಿಕೊಳ್ಳಿ ಎಂಬುದಕ್ಕೆ ಸಂಕೇತವಾಗಿಯೇ ಇರುವುದು ಬೇವು ಬೆಲ್ಲ ಹಂಚಿ ತಿನ್ನುವ ಸಂಪ್ರದಾಯ. ಬಾಳಿನಲ್ಲಿ ಸಿಹಿಯೇ ಮುಖ್ಯವಲ್ಲವಲ್ಲ, ಕಷ್ಣಸಹಿಷ್ಣುತೆಯೂ ಬಾಳಿನಲ್ಲಿ ಬೆರೆತಿರಬೇಕು. ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ನಮ್ಮ ಜೀವನದಲ್ಲೂ ಬದಲಾವಣೆಗಳನ್ನು ಸ್ವೀಕರಿಸಿ ಎಂದೆನ್ನುತ್ತಾ ಮತ್ತೊಂದು ಕವನದಲ್ಲಿ ....

ಹೊಸವರುಷವು ಬಹುದೆಂದಿಗೆ
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ....

ಜಾಣ ಜಿತೇಂದ್ರಿಯ ಧೀರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ||

ಇಂದು ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳು ಯುಗದ ಆದಿಯೋ ಅಥವಾ ಯುಗದ ಅಂತ್ಯವೋ ಎಂಬ ಅನುಮಾನ ತರುತ್ತಿದೆ. ಅಂತಿಂಥವರಿಂದ ಕಲುಷಿತಗೊಳ್ಳುತ್ತಿರುವ ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಗುರುತರ ಹೊಣೆಗಾರಿಕೆ ಹೊರುವ ವಿದ್ಯಾವಂತರು (ಜಾಣ), ನಿಷ್ಠಾವಂತರು, ಲಂಪಟತನ, ಭ್ರಷ್ಟಾಚಾರ ಎದುರಿಸುವ ಜಿತೇಂದ್ರಿಯರು ಬಂದಲ್ಲಿ ಜನಸಾಮಾನ್ಯರಿಗೆ ಸಿಗುವುದು ಹೊಸ ಹರುಷ ಇಲ್ಲದಿದ್ದಲ್ಲಿ ಯಥಾಸ್ಥಿತಿ "ಅಂಥಿಂಥವರಿಂ ಬಲು ಕಲುಷ"||

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+