Get Updates
Get notified of breaking news, exclusive insights, and must-see stories!

ಯುಗಾದಿ ವಿಜಯದೊಸಗೆ ಸ್ವತ್ವ ರಜೋಗುಣದ ಬೆಸುಗೆ

Ugadi portrayal in Kannada poems
ಮಾವು ನಾವು, ಬೇವು ನಾವು
ನೋವು ನಲಿವು ನಮ್ಮವು
ಹೂವು ನಾವು, ಹಸಿರು ನಾವು
ಬೇವು ಬೆಲ್ಲ ನಮ್ಮವು||

ಹೊಸತು ವರುಷ, ಹೊಸತು ಹರುಷ
ಹೊಸತು ಬಯಕೆ ನಮ್ಮವು|
ತಳಿರು ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು||
ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು-

ಮಾವು, ಬೇವು, ಬೆಲ್ಲ ಸೇವನೆಗೆ ವೈಜ್ಞಾನಿಕವಾಗಿಯೂ ಅರ್ಥವಿದೆ. ಅನೇಕ ಚರ್ಮ ವ್ಯಾಧಿಗಳಿಗೆ ಬೇವು ಸ೦ಜೀವಿನಿ, ವಿಷದ ಸೋಂಕನ್ನು ನಿವಾರಿಸುವ ವನೌಷಧಿ, ಬೇವಿನ ಎಲೆಯಲ್ಲಿ ವಾತದ ದೋಷ ನಿವಾರಕ ಶಕ್ತಿಯಿದೆ. ಹೀಗಾಗಿ ಬೇವು ಸೇವಿಸುವುದು ಸ೦ಪ್ರದಾಯ. ಬೇವಿನ ಕಹಿ ಮರೆ ಮಾಚಲು ಬೆಲ್ಲ ಜೊತೆಯಾಗಿ. ಮತ್ತೊ೦ದು ಅರ್ಥದಲ್ಲಿ ಬೇವು ಬೆಲ್ಲ ಸುಖ, ದುಃಖದ ಸ೦ಕೇತ. ಯುಗಾದಿ ಯಾವುದೇ ದೇವ-ದೇವತೆಗಳ ಸೋಕಿಲ್ಲದ ನಿಸರ್ಗದ ಹಬ್ಬ.

ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ||

ಪ್ರತಿ ಯುಗಾದಿ ವಿಜಯದೊಸಗೆ
ಸ್ವತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲುವ ಗೀತೆ||
(ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರ "ವರ್ಷಾದಿ")

ಹಾಗೆಯೇ

ಗೋಪಾಲಕೃಷ್ಣ ಅಡಿಗರ "ಯುಗಾದಿ" ಕವಿತೆಯಲ್ಲಿ

ಯುಗ ಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸ ಹೊಸವು ಪ್ರತಿ ವರುಷವೂ
ಒಳಗೆ ಅದೋ ಕಾಣುತಿದೆ, ಚೆಲುವಿರದ ನಲವಿರದ
ಕೂಳೆಯ ಬೆಳೆ; ರಂಗ ಮಂದಿರವು|

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+