ಜನಸ್ತೋಮದ ಹಸಿರ ನಡುವೆ ಬಾಂಧವ್ಯದ ಹೂಗಳರಳಿ

ಈ ಸಲದ ಯುಗಾದಿ
ಮಧ್ಯ ಮಯಸ್ಕನ ಉದ್ಯೋಗದ ಕನಸಿನಂತೆ
ಲಂಚಕೋರನ ಮೃದುವಾದ ಮಾತಿನಂತೆ
ಏರುವ ಬೆಲೆ, ಇಳಿಯುವ ಘನತೆಯಂತೆ
ಚಿಂತಾಜನಕವಾಗದಿರಲಿ
ಜನಸ್ತೋಮದ ಹಸಿರ ನಡುವೆ
ಬಾಂಧವ್ಯದ ಹೂಗಳರಳಿ
ಸಮಾನತೆಯ ಸಂತಸವನು
ಋತುವಸಂತ ಸಾರಲಿ
ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಯುಗಾದಿ ಕುರಿತು
ಒಳಿತು ಕೆಡಕು"
ಏನು ಬಂದರೂ
ಇರಲಿ ಎಲ್ಲಕ್ಕೂ ಸ್ವಾಗತ
ಯುಗ ಯುಗಾದಿಗೆ
ಹೊಸತು ವರ್ಷವು
ಬರಲಿ, ಬಾರದೆ ಹೋಗಲಿ
ಬಂದ ಚೈತ್ರ ಚಿಗುರಿನಂದದ
ಮಂದ ಹಾಸವೇ ಉಳಿಯಲಿ!
ಮತ್ತೆ ಬಂದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ, ಸ್ವೀಕರಿಸುವುದಷ್ಟೇ ನಮ್ಮ ಕೆಲಸ ಎಂಬ ಕವಿವಾಣಿಯಂತೆ ಹಳತನ್ನು ಅಳಿಸಿಹಾಕುತ್ತಾ, ಹೊಸತನ್ನು ತರುವ ಯುಗದ ಆದಿ - ಯುಗಾದಿ. ಈ ಬಾರಿ "ಬೇವು-ಬೆಲ್ಲ" -ಹಬ್ಬದೂಟ, ಹೊಸ ಬಟ್ಟೆ, ನವೋಲ್ಲಸಗಳ ಜೊತೆಗೆ ಕವನ ಸಾಹಿತ್ಯದ "ಯುಗಾದಿ" ಕವನಗಳ ರಸದೌತಣವ ಸವಿಯೋಣ. ಹೊಸವರುಷಕ್ಕೆಂದೇ ಕವನಗಳ ಅಮೂಲ್ಯ ಕಾಣಿಕೆಯನಿತ್ತ ಕವಿಗಳಿಗೆ ನಮ್ಮ-ನಿಮ್ಮೆಲ್ಲರ ಹೃತ್ಪೂರ್ವಕ ನಮನ ಸಲ್ಲಿಸೋಣ.
ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗಳು ಬಡವ-ಬಲ್ಲಿದರೆಂಬ ಭೇಧಭಾವವಿಲ್ಲದ ಸಾರ್ವತ್ರಿಕತೆ, ಭಾವುಕತೆಗಳ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮೀಕತೆಯ ನಡುವೆ ಜನ ಸಮುದಾಯಗಳ ಜೀವನ ಶೈಲಿಯೂ ಹಬ್ಬಗಳ ವೈಭವವನ್ನು ಸಾರುವುದು. ರಸಋಷಿ ಕುವೆಂಪು ಅವರು ಹೇಳಿರುವಂತೆ ತೊಲಗಲಿ ದುಃಖ, ತೊಲಗಲಿ ಮತ್ಸರ| ಪ್ರೇಮಕೆ ಮೀಸಲು ನವ ಸಂವತ್ಸರ...ಈ ವಿಜಯ ನಾಮ ಸಂವತ್ಸರ ಎಲ್ಲರಿಗೂ ಶುಭತರಲಿ.
(ಕೃಪೆ: ಅಂತರ್ಜಾಲ, ಪ್ರೊ. ನಿಸಾರ್ ಅಹಮದ್, ರಸಋಷಿ ಕುವೆಂಪು ಅವರುಗಳ ಸಮಗ್ರ ಕವನ ಸಂಗ್ರಹಗಳಿಂದ ಆಯ್ದದ್ದು)
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications