Get Updates
Get notified of breaking news, exclusive insights, and must-see stories!

ಕವಿಯೊಲ್ಮೆಯ ಕೋ ಧನ್ಯ ಯುಗಾದಿ : ಕುವೆಂಪು

Ugadi portrayal in Kannada poems
ಮಾವಿನ ಬೇವಿನ ತೋರಣ ಕಟ್ಟು
ಬೇವು ಬೆಲ್ಲಗಳನೊಟ್ಟಿಗೆ ಕುಟ್ಟು
ಜೀವನವೆಲ್ಲಾ ಬೇವೂ ಬೆಲ್ಲ,
ಎರಡೂ ಸವಿವವನೆ ಕಲಿ ಮಲ್ಲ

ಕವಿಯೊಲ್ಮೆಯ ಕೋ ಧನ್ಯ ಯುಗಾದಿ
ಮರಳಲಿ ಇಂತಹ ನೂರು ಯುಗಾದಿ|
ಇದೆ ಕೋ ಹೊಸವರುಷದ ಸವಿಮುತ್ತು
ಅದಕೊಂದಾಲಿಂಗನದೊತ್ತು||
ರಸಋಷಿ ಕುವೆಂಪು (ಕುವೆಂಪು ಸಮಗ್ರ ಕಾವ್ಯ)

ನಮ್ಮ ಸಂಪ್ರದಾಯದಂತೆ ಈ ದಿನದಂದು ಸೇವಿಸುವ ಬೇವು-ಬೆಲ್ಲ ಜೀವನದ ಸುಖ - ದುಃಖ ಎರಡನ್ನೂ ಸಮವಾಗಿ ಸ್ವೀಕರಿಸುವ ಪ್ರತೀಕ. ಹಿಂದಿನ ವರುಷದ ಕಹಿ ಅನುಭವಗಳನ್ನು ಮರೆತು, ಮುಂಬರುವ ಭವಿಷ್ಯದ ಆನಂದಕ್ಕಾಗಿ ಯುಗಾದಿ ಹಬ್ಬ. ಈ ಜೀವನದ ನಿಜಾರ್ಥವನ್ನು ಕವಿವರ್ಯರು ಅತ್ಯಂತ ಸುಲಭವಾಗಿ ಅರ್ಥೈಸಿದ್ದಾರೆ. ಇದನ್ನು ನಾವು ಬಾಳಿನುದ್ದಕ್ಕೂ ಅಳವಡಿಸಿಕೊಳ್ಳಬೇಕು.

ಎಲ್ಲೆಲ್ಲೂ ಹೊಸ ಚಿಗುರು, ಹೊಸ ಹೂವು, ಹೊಸ ಫಲ, ಹೊಸ ನಿರೀಕ್ಷೆ, ನೀಲಾಕಾಶ, ಪ್ರಕೃತಿಯಲ್ಲಿ ನವ ಚೈತನ್ಯ. ಹೊಸ ವರ್ಷದ ಸ೦ಭ್ರಮ. ಎಲ್ಲಾ ಬಾಗಿಲುಗಳ ಹೊಸ್ತಿಲಿಗೂ ಮಾವಿನ ಎಲೆ ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ಮನೆಯ ಎಲ್ಲಾ ಕಡೆಗೂ ಸಿಗಿಸಿ "ಜೀವನವೆಲ್ಲಾ ಬೇವು ಬೆಲ್ಲ" ಎಂದು ಕೆಲವೇ ವಾಕ್ಯಗಳಲ್ಲಿ ಬದುಕಿನ ನಿಜಾರ್ಥವನ್ನು ಸಾರಿ, ಹೊಸವರುಷದ ಆಗಮನಕ್ಕೆ ಸಾಹಿತ್ಯಾಲಿಂಗನದ ಸವಿಮುತ್ತನ್ನಿತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+