Get Updates
Get notified of breaking news, exclusive insights, and must-see stories!

ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ

ಸಂಭವಾಮಿ ಯುಗೇ...ಯುಗೇ. ಯುಗಾದಿಯಂದು ಬೇವು-ಬೆಲ್ಲ ಸೇವಿಸುವಾಗ ಕೆಳಗಿನ ಈ ಶ್ಲೋಕಗಳನ್ನು ಉಚ್ಚರಿಸಿ ತಿನ್ನುವಂತೆ ಹಿರಿಯರು ಹೇಳುತ್ತಾರೆ.

"ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವರಿಷ್ಟ ವಿನಾಶಯ ನಿಂಭಕಂದಳ ಭಕ್ಷಣಂ". ಹೊಸತು ವರುಷ, ಹೊಸತು ಹರುಷ, ಹೊಸತು ಹೊಸತು ತರುವ ವಿಜಯ ನಾಮ ಸಂವತ್ಸರದ ಹೊಸವರುಷಕ್ಕೆ ಕೆಲವೊಂದು "ಯುಗಾದಿ" ಕವನಗಳ (ಆಯ್ದ ಪದಗಳ) ಪಠಣ, ಮನನ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|
ಹೊಂಗೆ ಹೂಂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ||

Ugadi portrayal in Kannada poems

ವರಕವಿ ಬೇಂದ್ರೆಯವರ ಈ ಕವನ ಮನಕೆ ಆಪ್ತವೆನಿಸುವುದು. "ಯುಗ ಯುಗಾದಿ ಕಳೆದರೂ" ಕವನದ ಶ್ರವಣವೂ, ಪಂಚಾಂಗ ಪಠಣದಷ್ಟೇ ಮುಖ್ಯ. ಯುಗಾದಿಗೆ ಯುಗಾದಿಯೇ ಸಾಟಿ. ಪ್ರತಿವರುಷವೂ ಪ್ರಭವದಿಂದ -ಅಕ್ಷಯದ ತನಕ 60 ಹೆಸರುಗಳಿಂದ ಆಚರಿಸುವ ಯುಗಾದಿ, ಮುಂಬರುವ ದಿನಗಳು "ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪು ಸೂಸಿ" ಒಳ್ಳೆಯದಾಗುವುದು ಎಂಬ "ಜೀವಕಳೆಯ ತರುವ" ಭರವಸೆಯ ಅಭಯ ಹಸ್ತ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...ಕುಲವಧು ಚಿತ್ರದಲಿ ಅಳವಡಿಸಿಕೊಂಡು, ಎಸ್. ಜಾನಕಿಯವರ ಕೋಕಿಲ ಕಂಠದಿಂದ ಹೊಮ್ಮಿರುವ, ಹೊಸ ಯುಗದ ಹುಟ್ಟು ಹಬ್ಬದ ಆಗಮನವನು ಸೂಚಿಸುವ ಈ ಕವನವನ್ನು ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೆ ಮತ್ತೆ ಮತ್ತೆ ಕೇಳಬೇನಿಸುತ್ತದೆ. ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+