ಹಿಂದುಳಿದ ಅಮೆರಿಕಾ ಮುಂದುವರೆದದ್ದು ಹೇಗೆ?
ಅಮೆರಿಕವು ಭಾರತಕ್ಕಿಂತ ಹಿಂದುಳಿದ ಪ್ರದೇಶ, ಸಮಯದ ಗಣನೆಯಲ್ಲಿ. ಕರಾರುವಾಕ್ಕಾಗಿ ಹೇಳುವುದಾದರೆ, ಇಲ್ಲಿ ಅಮೆರಿಕದ ಪೂರ್ವಕರಾವಳಿಯ ಸಮಯವು ಈಗ ಭಾರತದ ಸಮಯಕ್ಕಿಂತ ಒಂಬತ್ತೂವರೆ ಗಂಟೆ ಹಿಂದೆ. ಅಮೆರಿಕದ ಪಶ್ಚಿಮಕರಾವಳಿಯ ಸಮಯವು ಭಾರತದ ಸಮಯಕ್ಕಿಂತ ಹನ್ನೆರಡೂವರೆ ಗಂಟೆ ಹಿಂದೆ.
ಆದರೆ, ಈ ಸರ್ತಿ ಯುಗಾದಿ ಆಚರಣೆಯಲ್ಲಿ ಅಮೆರಿಕದಲ್ಲಿರುವ ಕನ್ನಡಿಗರು, ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತ ಮುಂದೆ! ಹೌದು. ಅಮೆರಿಕದಲ್ಲಿ ಯುಗಾದಿ ಹಬ್ಬ ಏಪ್ರಿಲ್ 10ರಂದು ಬುಧವಾರ. ಕರ್ನಾಟಕದಲ್ಲಿ ಯುಗಾದಿ ಹಬ್ಬ ಏಪ್ರಿಲ್ 11ರಂದು ಗುರುವಾರ. ಇದು ಹೇಗೆ ಸಾಧ್ಯ ಅಂತೀರಾ? ಖಗೋಳಶಾಸ್ತ್ರ ಆಧಾರಿತ ಈ ವಿವರಣೆಯನ್ನು ಓದುವಂಥವರಾಗಿ.
ಜನವರಿ 1ರಂದು ಶುರುವಾಗುವ ಇಂಗ್ಲಿಷ್ ಹೊಸವರ್ಷ ಸಂಪೂರ್ಣವಾಗಿ ಸೌರಮಾನವಾದ್ದರಿಂದ ಭೂಮಿಯಲ್ಲಿ ಪೂರ್ವದ ಭಾಗದಲ್ಲಿ (ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್ ಇತ್ಯಾದಿ) ಮೊದಲು ಆಚರಣೆ. ಆಮೇಲೆ ಪಶ್ಚಿಮದ ದೇಶಗಳಲ್ಲಿ. ಇದಕ್ಕೆ ಕಾರಣವೇನೆಂದರೆ ದಿನಾಂಕ ಕ್ರಮದ ಕಾಲಗಣನೆಯಲ್ಲಿ ಒಂದು ತಾರೀಕು ಭೂಮಿಯ ಎಲ್ಲ ಭಾಗದಲ್ಲಿ ಏಕಕಾಲಕ್ಕೆ ಶುರುವಾಗುವುದಿಲ್ಲ. ಅಂತಾರಾಷ್ಟ್ರೀಯ ದಿನಾಂಕ ರೇಖೆ ಎಂಬ ಒಂದು ರೇಖಾಂಶವನ್ನು ಗುರುತಿಸಿರುವುದರಿಂದ ಅಲ್ಲಿ ಶುರುವಾಗಿ ಪಶ್ಚಿಮಕ್ಕೆ ಸಾಗುತ್ತದೆ.

ಆದರೆ ತಿಥಿಯ (ಚಂದ್ರನ ಚಲನೆಯನ್ನಾಧರಿಸಿದ ಕಾಲಗಣನೆ) ವಿಚಾರ ಹಾಗಲ್ಲ. ತಿಥಿ geocentric. ಅಂದರೆ ಭೂಮಿಯಲ್ಲಿ ಎಲ್ಲ ಕಡೆಗೂ ಒಂದೇಕಾಲಕ್ಕೆ ಶುರುವಾಗಿ ಒಂದೇ ಕಾಲಕ್ಕೆ ಕೊನೆಯಾಗುತ್ತದೆ. ಆ ಪ್ರಕಾರ 'ವಿಜಯ' ನಾಮ ಸಂವತ್ಸರದ ಚೈತ್ರ ಶುಕ್ಲ ಪಕ್ಷದ ಪಾಡ್ಯ ತಿಥಿಯು ಭಾರತೀಯ ಕಾಲಮಾನ ಪ್ರಕಾರ ಏಪ್ರಿಲ್ 10ರ ಬುಧವಾರ ಅಪರಾಹ್ನ 3:05ಕ್ಕೆ ಆರಂಭವಾಗುತ್ತದೆ.
ಆದರೆ ಹಬ್ಬದಾಚರಣೆ ಮಾರನೇದಿನ. ಏಕೆಂದರೆ ಹಬ್ಬದಾಚರಣೆಗೆ ಆಯಾಯ ತಿಥಿಯು ಸೂರ್ಯೋದಯದ ವೇಳೆಯಲ್ಲೇ ಇರಬೇಕಾಗುತ್ತದೆ. ಏಪ್ರಿಲ್ 10ರ ಬುಧವಾರ ಭಾರತದಲ್ಲಿ ಸೂರ್ಯೋದಯದ ವೇಳೆ ಇನ್ನೂ ಅಮಾವಾಸ್ಯೆ ಇರುವುದರಿಂದ ಅವತ್ತು ಯುಗಾದಿ ಹಬ್ಬದ ಆಚರಣೆಯಾಗುವುದಿಲ್ಲ.
ಅಮೆರಿಕದಲ್ಲಿ ಏಪ್ರಿಲ್ 10ರಂದು ಸೂರ್ಯೋದಯದ ವೇಳೆಗೇ ಪಾಡ್ಯ ತಿಥಿ ಇರುವುದರಿಂದ ಅವತ್ತೇ ಯುಗಾದಿ ಆಚರಣೆ! [ಅಮೆರಿಕದಲ್ಲಿ ಭಾರತೀಯ ಹಬ್ಬಗಳು ವಾರದನಡುವೆ ಬಂದರೆ ವಾರಾಂತ್ಯಕ್ಕೆ ಮುಂದೂಡಲಾಗುತ್ತದೆ ಎಂಬ ಮಾತು ಬೇರೆ :-)] 'ವಿಜಯ' ಸಂವತ್ಸರ ಎಲ್ಲರನ್ನೂ ವಿಜಯಶಾಲಿಯಾಗಿಸಲಿ. (ವರದಿ : ಶ್ರೀವತ್ಸ ಜೋಶಿ, ವರ್ಜೀನಿಯ, ಯುಎಸ್ಎ - [email protected])
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications