ಬಲರಾಮ ಗಜೇಂದ್ರ ಅಭಿಮನ್ಯು ಅರ್ಜುನ ಮೇರಿ
ಬಲರಾಮ : ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 53 ವರ್ಷ. ಸೌಮ್ಯ ಸ್ವಭಾವದ ಈತ 2.70 ಮೀಟರ್ ಎತ್ತರ, 3.77 ಮೀ. ಉದ್ದ, ಸುಮಾರು 4900 ಕೆ.ಜಿ. ತೂಕವಿದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.
ಅರ್ಜುನ
:
ಕಳೆದ
10
ವರ್ಷಗಳಿಂದ
ದಸರಾ
ಮಹೋತ್ಸವದಲ್ಲಿ
ಪಾಲ್ಗೊಳ್ಳುತ್ತಿರುವ
ಅರ್ಜುನನಿಗೆ
ಈಗ
51
ವರ್ಷ.
ಈತನ
ಎತ್ತರ
2.80
ಮೀ,
ಉದ್ದ
3.75
ಮೀ,
4750
ಕೆ.ಜಿ.
ತೂಕವನ್ನು
ಹೊಂದಿದ್ದಾನೆ.
1968ರಲ್ಲಿ
ಕೊಡಗು
ಜಿಲ್ಲೆಯ
ಹೆಬ್ಬಳ್ಳ
ಅರಣ್ಯ
ಪ್ರದೇಶದಲ್ಲಿ
ಪಿಟ್
ಮೆಥಡ್ನಿಂದ
ಸೆರೆಹಿಡಿದಿದ್ದು,
ಹಿಂದಿನ
ಅಂಬಾರಿ
ಆನೆ
ದ್ರೋಣನ
ನಂತರ
ಒಂದು
ಬಾರಿ
ಚಿನ್ನದ
ಅಂಬಾರಿ
ಹೊತ್ತ
ಅನುಭವವಿದೆ.
ಪ್ರಸ್ತುತ
ನಾಗರಹೊಳೆ
ರಾಷ್ಟ್ರೀಯ
ಉದ್ಯಾನವನದ
ಬಳ್ಳೆ
ಆನೆ
ಶಿಬಿರದಿಂದ
ಈತ
ಬಂದಿದ್ದು,
ದಸರಾ
ಮಹೋತ್ಸವದಲ್ಲಿ
ಪತಾಕೆ
ಆನೆಯ
ಜವಾಬ್ದಾರಿ
ವಹಿಸುತ್ತಿದೆ.
ಮೇರಿ
:
55
ವರ್ಷ
ವಯಸ್ಸಿನ
ಹೆಣ್ಣಾನೆ
ಮೇರಿ
2.36
ಮೀಟರ್
ಎತ್ತರವಿದ್ದು,
3.34
ಮೀ
ಉದ್ದ
ಹಾಗೂ
3180
ಕೆ.ಜಿ.
ತೂಕವಿದೆ.
ನಾಗರಹೊಳೆ
ರಾಷ್ಟ್ರೀಯ
ಉದ್ಯಾನವನದ
ಅಂತರಸಂತೆ
ವನ್ಯಜೀವಿ
ವಲಯದ
ಸುಂಕದಕಟ್ಟೆ
ಆನೆ
ಶಿಬಿರದಿಂದ
ಬಂದಿದೆ.
ಇದನ್ನು
1977ರಲ್ಲಿ
ಕಾಕನಕೋಟೆ
ಅರಣ್ಯ
ಪ್ರದೇಶದಲ್ಲಿ
ಸೆರೆಹಿಡಿಯಲಾಗಿದೆ.
ಇದುವರೆಗೆ
10
ಬಾರಿ
ದಸರಾ
ಮಹೋತ್ಸವದಲ್ಲಿ
ಪಾಲ್ಗೊಂಡಿದ್ದು
ಬಲರಾಮನಿಗೆ
ಕುಮ್ಕಿ
ಆನೆಯಾಗಿ
ಕಾರ್ಯನಿರ್ವಹಿಸುತ್ತಿದೆ.
ಗಜೇಂದ್ರ : ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿರುವ ಗಜೇಂದ್ರನಿಗೆ ಈಗ 56 ವರ್ಷ. 2.84 ಮೀ. ಎತ್ತರ, 3.80 ಮೀ. ಉದ್ದ ಹಾಗೂ 4570 ಕೆ.ಜಿ. ತೂಕವಿದ್ದಾನೆ. ಈತನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಕಾಡಾನೆಯನ್ನು ಪಳಗಿಸುವುದರಲ್ಲಿ ಸೈ ಎನಿಸಿ ಕೊಂಡಿರುವ ಈತ ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 15 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ.