Udyog Aadhaar : ಉದ್ಯೋಗ್ ಆಧಾರ್ ಏನು? ಹೇಗೆ ಮಾಡಿಸುವುದು? ಏನುಪಯೋಗ?
ಆಧಾರ್ ಕಾರ್ಡ್ ಬಗ್ಗೆ ಬಹುಶಃ ಎಲ್ಲರಿಗೂ ಗೊತ್ತಿರುವಂಥದ್ದೇ. ಬಹುತೇಕ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದ್ದೇವೆ. ಇದೊಂದು ರೀತಿಯಲ್ಲಿ ಭಾರತೀಯರ ಗುರುತಿನ ಚೀಟಿಯಾಗಿದೆ. ಸರಕಾರದ ಕೆಲ ಯೋಜನೆಗಳಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.
ಆಧಾರ್ ಕಾರ್ಡ್ನಂತೆ ಬಾಲ್ ಆಧಾರ್ (ಮಕ್ಕಳಿಗೆ ಮಾಡಿಸುವ ಆಧಾರ್ ಕಾರ್ಡ್) ಕೂಡ ಅಸ್ತಿತ್ವದಲ್ಲಿದೆ. ಹಾಗೆಯೇ, ಉದ್ಯೋಗ್ ಆಧಾರ್ ಬಗ್ಗೆ ನಿಮಗೆ ಮಾಹಿತಿ ಇದೆಯಾ?
ಏನಿದು ಉದ್ಯೋಗ ಆಧಾರ್? ಯಾಕಾಗಿ ಇದು ಇದೆ? ಉದ್ಯೋಗ ಆಧಾರ್ ಯಾರು ಮಾಡಿಸಬೇಕು? ಅದರಿಂದ ಪ್ರಯೋಜನಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗ್ ಆಧಾರ್ ಏನು?
ಉದ್ಯೋಗ್ ಆಧಾರ್ ಎಂಬುದು ಸಣ್ಣ ವ್ಯವಹಾರ ವಲಯದ ಸಂಸ್ಥೆಗಳಿಗೆ ಕೊಡಲಾಗುವ ಯೂನಿಕ್ ಐಡೆಂಟಿಫಿಕೇಶನ್ ನಂಬರ್ (ಯುಐಎನ್) ಆಗಿದೆ. ಎಂಎಸ್ಎಂಇ ಸಚಿವಾಲಯದಿಂದ ಇದನ್ನು ಒದಗಿಸಲಾಗುತ್ತದೆ. 12 ಅಂಕಿಯ ಈ ಯುಐಎನ್ ಅನ್ನು ಎಂಎಸ್ಎಂಇಗಳಿಗೆ ನೀಡಲಾಗುತ್ತದೆ.
ಸದ್ಯ ಉದ್ಯೋಗ್ ಆಧಾರ್ ಹೆಸರನ್ನು ಉದ್ಯಮ್ ಎಂದು ಬದಲಾಯಿಸಲಾಗಿದೆ. ಹೊಸ ಎಂಎಸ್ಎಂಇಗಳು ಉದ್ಯಮ್ ನೊಂದಣಿ ಪೋರ್ಟಲ್ನಲ್ಲಿ ನೊಂದಾಯಿಸಿ ಒಂದು ಪ್ರಮಾಣಪತ್ರ ಪಡೆಯಬಹುದು.

ಉದ್ಯೋಗ್ ಆಧಾರ್ ಪಡೆಯುವುದು ಹೇಗೆ?
ಉದ್ಯೋಗ್ ಆಧಾರ್ ನೊಂದಾಯಿಸಲು ನಿಮಗೆ ಆಧಾರ್ ಕಾರ್ಡ್ ಅಗತ್ಯ.
ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಆಧಾರ್ ಕಾರ್ಡ್ ವಿವರವನ್ನು ತುಂಬಿರಿ.
ಬಳಿಕ ಬಾಕ್ಸ್ ಚೆಕ್ ಮಾಡಿ, "ವ್ಯಾಲಿಡೇಟ್ ಅಂಡ್ ಜನರೇಟ್ ಒಟಿಪಿ" ಕ್ಲಿಕ್ ಮಾಡಿ.
ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದರೆ ಇನ್ನೊಂದು ಪುಟದಲ್ಲಿ ಫಾರ್ಮ್ ತೆರೆದುಕೊಳ್ಳುತ್ತದೆ.
ಆ ಫಾರ್ಮ್ನಲ್ಲಿ ಅಗತ್ಯ ಮಾಹಿತಿ ತುಂಬಿರಿ, ನಂತರ ಸಬ್ಮಿಟ್ ಕ್ಲಿಕ್ ಮಾಡಿ.
ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿ ಕೊನೆಯದಾಗಿ 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಕೆಯಾದಂತಾಗುತ್ತದೆ.

ಉದ್ಯೋಗ್ ಆಧಾರ್ಗೆ ಬೇಕಿರುವ ದಾಖಲೆಗಳು
* ಆಧಾರ್ ನಂಬರ್
* ಎಂಎಸ್ಎಂಇ ಮಾಲೀಕರ ಹೆಸರು
* ಅರ್ಜಿದಾರರ ವಿಭಾಗ
* ವ್ಯವಹಾರದ ಹೆಸರು
* ಸಂಸ್ಥೆಯ ಹೆಸರು
* ಬ್ಯಾಂಕ್ ವಿವರ
* ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್ ಕೋಡ್
* ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ
* ಡಿಸ್ಟ್ರಿಕ್ಟ್ ಇಂಡಸ್ಟ್ರಿ ಸೆಂಟರ್ನ ವಿವರ
* ಯಾವಾಗಿನಿಂದ ಸಂಸ್ಥೆ ಆರಂಭ

ಉದ್ಯೋಗ್ ಆಧಾರ್ನಿಂದ ಅನುಕೂಲ
* ನಿಮ್ಮ ಸಂಸ್ಥೆಯನ್ನು ಎಂಎಸ್ಎಂಇ ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.
* ಸ್ವಘೋಷಣೆ ಸೌಲಭ್ಯ
* ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ
* ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ
* ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.
(ಒನ್ಇಂಡಿಯಾ ಸುದ್ದಿ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications