Udyog Aadhaar : ಉದ್ಯೋಗ್ ಆಧಾರ್ ಏನು? ಹೇಗೆ ಮಾಡಿಸುವುದು? ಏನುಪಯೋಗ?
ಆಧಾರ್ ಕಾರ್ಡ್ ಬಗ್ಗೆ ಬಹುಶಃ ಎಲ್ಲರಿಗೂ ಗೊತ್ತಿರುವಂಥದ್ದೇ. ಬಹುತೇಕ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದ್ದೇವೆ. ಇದೊಂದು ರೀತಿಯಲ್ಲಿ ಭಾರತೀಯರ ಗುರುತಿನ ಚೀಟಿಯಾಗಿದೆ. ಸರಕಾರದ ಕೆಲ ಯೋಜನೆಗಳಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.
ಆಧಾರ್ ಕಾರ್ಡ್ನಂತೆ ಬಾಲ್ ಆಧಾರ್ (ಮಕ್ಕಳಿಗೆ ಮಾಡಿಸುವ ಆಧಾರ್ ಕಾರ್ಡ್) ಕೂಡ ಅಸ್ತಿತ್ವದಲ್ಲಿದೆ. ಹಾಗೆಯೇ, ಉದ್ಯೋಗ್ ಆಧಾರ್ ಬಗ್ಗೆ ನಿಮಗೆ ಮಾಹಿತಿ ಇದೆಯಾ?
ಏನಿದು ಉದ್ಯೋಗ ಆಧಾರ್? ಯಾಕಾಗಿ ಇದು ಇದೆ? ಉದ್ಯೋಗ ಆಧಾರ್ ಯಾರು ಮಾಡಿಸಬೇಕು? ಅದರಿಂದ ಪ್ರಯೋಜನಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗ್ ಆಧಾರ್ ಏನು?
ಉದ್ಯೋಗ್ ಆಧಾರ್ ಎಂಬುದು ಸಣ್ಣ ವ್ಯವಹಾರ ವಲಯದ ಸಂಸ್ಥೆಗಳಿಗೆ ಕೊಡಲಾಗುವ ಯೂನಿಕ್ ಐಡೆಂಟಿಫಿಕೇಶನ್ ನಂಬರ್ (ಯುಐಎನ್) ಆಗಿದೆ. ಎಂಎಸ್ಎಂಇ ಸಚಿವಾಲಯದಿಂದ ಇದನ್ನು ಒದಗಿಸಲಾಗುತ್ತದೆ. 12 ಅಂಕಿಯ ಈ ಯುಐಎನ್ ಅನ್ನು ಎಂಎಸ್ಎಂಇಗಳಿಗೆ ನೀಡಲಾಗುತ್ತದೆ.
ಸದ್ಯ ಉದ್ಯೋಗ್ ಆಧಾರ್ ಹೆಸರನ್ನು ಉದ್ಯಮ್ ಎಂದು ಬದಲಾಯಿಸಲಾಗಿದೆ. ಹೊಸ ಎಂಎಸ್ಎಂಇಗಳು ಉದ್ಯಮ್ ನೊಂದಣಿ ಪೋರ್ಟಲ್ನಲ್ಲಿ ನೊಂದಾಯಿಸಿ ಒಂದು ಪ್ರಮಾಣಪತ್ರ ಪಡೆಯಬಹುದು.

ಉದ್ಯೋಗ್ ಆಧಾರ್ ಪಡೆಯುವುದು ಹೇಗೆ?
ಉದ್ಯೋಗ್ ಆಧಾರ್ ನೊಂದಾಯಿಸಲು ನಿಮಗೆ ಆಧಾರ್ ಕಾರ್ಡ್ ಅಗತ್ಯ.
ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಆಧಾರ್ ಕಾರ್ಡ್ ವಿವರವನ್ನು ತುಂಬಿರಿ.
ಬಳಿಕ ಬಾಕ್ಸ್ ಚೆಕ್ ಮಾಡಿ, "ವ್ಯಾಲಿಡೇಟ್ ಅಂಡ್ ಜನರೇಟ್ ಒಟಿಪಿ" ಕ್ಲಿಕ್ ಮಾಡಿ.
ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದರೆ ಇನ್ನೊಂದು ಪುಟದಲ್ಲಿ ಫಾರ್ಮ್ ತೆರೆದುಕೊಳ್ಳುತ್ತದೆ.
ಆ ಫಾರ್ಮ್ನಲ್ಲಿ ಅಗತ್ಯ ಮಾಹಿತಿ ತುಂಬಿರಿ, ನಂತರ ಸಬ್ಮಿಟ್ ಕ್ಲಿಕ್ ಮಾಡಿ.
ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿ ಕೊನೆಯದಾಗಿ 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಕೆಯಾದಂತಾಗುತ್ತದೆ.

ಉದ್ಯೋಗ್ ಆಧಾರ್ಗೆ ಬೇಕಿರುವ ದಾಖಲೆಗಳು
* ಆಧಾರ್ ನಂಬರ್
* ಎಂಎಸ್ಎಂಇ ಮಾಲೀಕರ ಹೆಸರು
* ಅರ್ಜಿದಾರರ ವಿಭಾಗ
* ವ್ಯವಹಾರದ ಹೆಸರು
* ಸಂಸ್ಥೆಯ ಹೆಸರು
* ಬ್ಯಾಂಕ್ ವಿವರ
* ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್ ಕೋಡ್
* ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ
* ಡಿಸ್ಟ್ರಿಕ್ಟ್ ಇಂಡಸ್ಟ್ರಿ ಸೆಂಟರ್ನ ವಿವರ
* ಯಾವಾಗಿನಿಂದ ಸಂಸ್ಥೆ ಆರಂಭ

ಉದ್ಯೋಗ್ ಆಧಾರ್ನಿಂದ ಅನುಕೂಲ
* ನಿಮ್ಮ ಸಂಸ್ಥೆಯನ್ನು ಎಂಎಸ್ಎಂಇ ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.
* ಸ್ವಘೋಷಣೆ ಸೌಲಭ್ಯ
* ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ
* ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ
* ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.
(ಒನ್ಇಂಡಿಯಾ ಸುದ್ದಿ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications