ನ್ಯಾಯದಾನ ವ್ಯವಸ್ಥೆ:ಯಾವ ರಾಜ್ಯಕ್ಕೂ ಇಲ್ಲ ಶೇ.60 ಕ್ಕಿಂತ ಹೆಚ್ಚು ಅಂಕ
ನವದೆಹಲಿ, ನವೆಂಬರ್ 28: ಯಾವುದೇ ದೇಶದ ನೈತಿಕ ಗುಣಮಟ್ಟ ಅಳೆಯುವುದು ಆಯಾ ದೇಶದ ನ್ಯಾಯಂಗ ವ್ಯವಸ್ಥೆಯ ಆಧಾರದ ಮೇಲೆ. 2012-2017 ರ ಜಾಹೀರಾತು ಡೆಟಾ ಆಧಾರದ ಮೇಲೆ ತಯಾರಿಸಲಾದ 'ಇಂಡಿಯಾ ಜಸ್ಟೀಸ್ ರಿಪೋರ್ಟ್' ಯನ್ನು ಟಾಟಾ ಟ್ರಸ್ಟ್ ಬಿಡುಗಡೆ ಮಾಡಿದ್ದು, ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಕೈಗನ್ನಡಿ ಎನ್ನಿಸಿದೆ.
ಈ ವರದಿ ನೀಡಿದ ಮಾಹಿತಿ ಪ್ರಕಾರ, ನ್ಯಾಯದಾನ ಪದ್ಧತಿಯಲ್ಲಿ ಭಾರತದ 29 ರಾಜ್ಯಗಳಲ್ಲಿ ಯಾವ ರಾಜ್ಯವೂ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ! ನ್ಯಾಯ ವ್ಯವಸ್ಥೆಯ ನಾಲ್ಕು ಸ್ತಂಭಗಳಾದ ಪೊಲೀಸ್, ಜೈಲು, ನ್ಯಾಯಾಂಗ, ಕಾನೂನು ನೆರವಿನಲ್ಲೂ ಯಾವ ರಾಜ್ಯವೂ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ.
ನ್ಯಾಯದಾನ ವ್ಯವಸ್ಥೆಯಲ್ಲಿ ಮಹಾರಾಷ್ಟ್ರ ಮೊದಲು, ಕೇರಳ, ತಮಿಳುನಾಡು ರಾಜ್ಯಗಳು ಕ್ರಮವಾಗಿ ಎರಡೂ ಮತ್ತು ಮೂರನೇ ಸ್ಥಾನ ಪಡೆದಿವೆ.
ಈ ವರದಿಯ ಬಗ್ಗೆ ಮಾತನಾಡಿದ ನಿವೃತ್ತ ಹಿರಿಯ ನ್ಯಾಯಮೂರ್ತಿ ಮದನ್ ಬಿ ಲೊಕುರ್, "ನ್ಯಾಯದಾನ ವ್ಯಸವ್ಥೆಯಲ್ಲಿ ಯಾವ ರಾಜ್ಯ ಉತ್ತಮ ಸಾಧನೆ ಮಾಡಿದೆ ಎಂಬುದನ್ನು ತೋರಿಸುವುದಕ್ಕೆ ತಯಾರಿಸಿದ ವರದಿ ಇದಲ್ಲ. ಈ ವರದಿಯ ಉದ್ದೇಶ, ನ್ಯಾಯದಾನ ಮಾಡುವ ಸಾಮರ್ಥ್ಯ ಮತ್ತು ನ್ಯಾಯದಾನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಎಲ್ಲಾ ರಾಜ್ಯಗಳಿಗೂ ಸಲಹೆ ನೀಡುವುದು" ಎಂದಿದ್ದಾರೆ.
ಕೋರ್ಟುಗಳಲ್ಲಿ ಇನ್ನೂ ಒಟ್ಟು 28 ಮಿಲಿಯನ್ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ!
ಭಾರತದ 29 ರಾಜ್ಯಗಳ ನ್ಯಾಯದಾನ ವ್ಯವಸ್ಥೆಯ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕಕ್ಕೆ ಎಷ್ಟನೇ ಸ್ಥಾನ
ಕರ್ನಾಟಕ ಒಟ್ಟಾರೆ ಶ್ರೇಯಾಂಕದಲ್ಲಿ 6 ಸ್ಥಾನದಲ್ಲಿದೆಯಾದರೂ, ಪೊಲೀಸ್ 6, ಜೈಲು 3, ನ್ಯಾಯಾಂಗ 16 ಮತ್ತು ಕಾನೂನು ನೆರವಿನಲ್ಲಿ 7 ನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನ ಮಹಾರಾಷ್ಟ್ರಕ್ಕೆ
ಈ ವರದಿಯಲ್ಲಿ 5.92 ಅಂಕದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದಿದ್ದರೆ, ಕೇರಳ 5.85 ಅಂಕದೊಂದಿಗೆ ಎರಡನೇ ಸ್ಥಾನ, ತಮಿಳುನಾಡು 5.76 ಅಂಕಗಳೊಂದಿಗೆ ಮೂರನೇ ಸ್ಥಾನ ಮತ್ತು ಪಂಜಾಬ್ 5.53 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

ಕೊನೆಯ ಸ್ಥಾನದಲ್ಲಿ ಉತ್ತರ ಪ್ರೇಶ!
ಪೊಲೀಸ್ ವ್ಯವಸ್ಥೆಯಲ್ಲಿ 18, ಜೈಲು ವ್ಯವಸ್ಥೆಯಲ್ಲಿ 14, ನ್ಯಾಯಾಂಗದಲ್ಲಿ 17 ಮತ್ತು ಕಾನೂನು ನೆರವಿನಲ್ಲಿ 18 ನೇ ಸ್ಥಾನ ಪಾಡೆಯುವ ಮೂಲಕ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ವರದಿ ಬಗ್ಗೆ...
ಸೆಂಟರ್ ಫಾರ್ ಸೋಶಿಯಲ್ ಜಸ್ಟಿಸ್, ಕಾಮನ್ ಕಾಸ್, ಕಾಮಲ್ ವೆಲ್ತ್ ಹ್ಯೂಮನ್ ಇಂಟರೆಸ್ಟ್ ಇನಿಶಿಯೇಟಿವ್ (ಸಿಎಚ್ ಆರ್ ಐ), ದಕ್ಷ್, ಟಿಐಎಸ್ಎಸ್-ಪ್ರಯಾವ್ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಹಭಾಗಿತ್ವದೊಂದಿಗೆ ಇಂಥದೊಂದು ವರದಿ ತಯಾರಿಸಲು ಟಾಟಾ ಟ್ರಸ್ಟ್ ಮುಂದಾಗಿತ್ತು. ಈ ವರದಿಯ ಮುಖ್ಯ ಸಂಪಾದಕರು ಮಾಜಾ ದಾರುವಾಲಾ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications